ಮೂಡುಬಿದಿರೆ: ಯುವ ಹ್ಯಾಂಡ್ಬಾಲ್ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿದ್ದಲ್ಲಿ ಹ್ಯಾಂಡ್ಬಾಲ್ ಕ್ರೀಡೆಗೆ ಅಂತರರಾಷ್ಟ್ರೀಯ ಮಾನ್ಯತೆ ಸಿಗಲಿದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಕೌನ್ಸಿಲ್ ಸೆಕ್ರಟರಿ ಪ್ರವೀಣ್ ಬಿ.ನಾಯಕ್ ತಿಳಿಸಿದರು.
ಅವರು ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಆಳ್ವಾಸ್ ಕಾಲೇಜು ದೈಹಿಕ ಶಿಕ್ಷಣ ಕಾಲೇಜಿನ ಆಶ್ರಯದಲ್ಲಿ ಮಂಗಳೂರು ವಿ.ವಿ ಅಂತರ್ ಕಾಲೇಜು ಹ್ಯಾಂಡ್ಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.
ಫ್ರಾನ್ಸ್ ದೇಶದಲ್ಲಿ ಉದಯವಾದ 19ನೇ ಶತಮಾನದಿಂದ ಯುರೋಪ್ನಲ್ಲಿ ವಿಶಿಷ್ಠ ಛಾಪು ಮೂಡಿಸಿದ ಕ್ರೀಡೆ ಹ್ಯಾಂಡ್ಬಾಲ್. ಇದಕ್ಕೆ 5 ಫೆಡರೇಶನ್ಗಳಿವೆ. ಈ ಫೆಡರೇಶನ್ನಲ್ಲಿ ಭಾರತವೂ ಒಂದು. ಜಾಗತಿಕ ಮಟದಲ್ಲಿ 7.95 ಲಕ್ಷ ನೋಂದಾಯಿತ ತಂಡಳಿವೆ. ಏಷ್ಯಾದಲ್ಲಿ ಭಾರತ, ಪಾಕಿಸ್ತಾನ ಸೇರಿದಂತೆ ಕೆಲವು ಕಡೆ ಮಾತ್ರವಿದೆ. ಹ್ಯಾಂಡ್ಬಾಲ್ಗೆ ಸೂಕ್ತ ಪ್ರೋತ್ಸಾಹ ಬೇಕು ಎಂದರು.
ಹ್ಯಾಂಡ್ಬಾಲ್ನಿಂದ ದೈಹಿಕ ದೃಢತೆಯ ಜತೆಗೆ ಮಾನಸಿಕ ಕ್ಷಮತೆ ಸಾಧ್ಯ. ಕ್ರೀಡಾ ಹಿನ್ನೆಲೆಯಿಂದ ಬಂದವರಿಗೆ ಕ್ರೀಡೆಯು ಬದುಕುವ ಕಲೆಯನ್ನು ಕಲಿಸುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಜಯಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್ ಕುಮಾರ್ ನಿರೂಪಿಸಿದರು. ಉಪನ್ಯಾಸಕ ಪಂಪಾಪತಿ ವಂದಿಸಿದರು.