ಪರಿಸರ ಜಾಗೃತಿಯ ಸಸ್ಯ ಶ್ರಾವಣ
600ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ 11ನೇ ಪೀಠಾಧಿಪತಿ ಸಂಗನಬಸವ ಸ್ವಾಮೀಜಿ ಅವರಿಗೆ ಪರಿಸರದ ಬಗ್ಗೆ ವಿಶೇಷ ಕಾಳಜಿ. ಇದಕ್ಕೊಂದು ಉದಾಹರಣೆಯೇ ‘ಊರೂರಿಗೆ ಸಸ್ಯಶ್ರಾವಣ’ ಕಾರ್ಯಕ್ರಮ. ಪ್ರತಿಯೊಂದು ಮನೆಯಲ್ಲೂ ಪರಿಸರದ ಬಗ್ಗೆ ಜಾಗೃತಿ ಮೂಡಿಸಬೇಕು ಎಂಬುದು ಕಾರ್ಯಕ್ರಮದ ಆಶಯ, ಸ್ವಾಮೀಜಿಯವರ ಅಪೇಕ್ಷೆ. ಇದೇ ಉದ್ದೇಶದೊಂದಿಗೆ ಅವರು ಶಿಗ್ಗಾವಿ ತಾಲೂಕಿನಲ್ಲಿರುವ ಹಳ್ಳಿಗಳಿಗೆ ಹೋಗುತ್ತಾರೆ. ಹಳ್ಳಿಗಳ ಮನೆ ಮನೆಗೆ ತೆರಳಿ, ಗಿಡಗಳನ್ನು ನೀಡುತ್ತಾರೆ. ‘ಇವುಗಳನ್ನು ನೆಟ್ಟು ನಿಮ್ಮ ಮಕ್ಕಳಂತೆ ಬೆಳೆಸಬೇಕು’ ಎಂದು ಕಿವಿಮಾತು ಹೇಳಿ, ಹಾರೈಸುತ್ತಾರೆ.Last Updated 17 ಸೆಪ್ಟೆಂಬರ್ 2018, 19:30 IST