ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಗಣಪತಿ ಸಚ್ಚಿದಾನಂದ ಸ್ವಾಮೀಜಿ

ಸಂಪರ್ಕ:
ADVERTISEMENT

ವೇದವ್ಯಾಸರ ಶಿವಪುರಾಣಸಾರ| ಕೈಲಾಸದಲ್ಲಿ ಶಿವ-ಗೌರಿ ಉತ್ಸವ

ಪಾರ್ವತಿಯನ್ನು ಶಿವನೊಂದಿಗೆ ಕಳುಹಿಸಿಕೊಡುವ ಸಂದರ್ಭದಲ್ಲಿ ದುಃಖಭಾವದಲ್ಲಿದ್ದ ಮೇನಾದೇವಿಗೆ ಸಮಾಧಾನದ ಮಾತನಾಡುವ ಶಿವ, ತನ್ನ ನಂಬಿ ಬರುವ ಪಾರ್ವತಿಗೆ ಯಾವ ಕಷ್ಟವೂ ಬಾರದಂತೆ ಚೆನ್ನಾಗಿ ನೋಡಿಕೊಳ್ಳುವುದಾಗಿ ಭರವಸೆ ನೀಡುತ್ತಾನೆ. ಪತ್ನಿಯಾದವಳು ಗಂಡನ ಮೇಲೆ ಇಟ್ಟ ನಿಷ್ಠೆಗೆ ಚ್ಯುತಿ ಬಾರದಂತೆ ಉತ್ತಮವಾಗಿ ನಡೆದುಕೊಳ್ಳುವುದು ಪತಿಯ ಧರ್ಮ. ತಾನು ಸರ್ವೇಶ್ವರನಾದರೂ ಪತಿಧರ್ಮವನ್ನು ಚಾಚು ತಪ್ಪದೇ ಪಾಲಿಸುತ್ತೇನೆ. ನಾನು ಪತ್ನಿಗೆ ದ್ರೋಹ ಬಗೆದರೆ ಅದರ ಪ್ರಾಯಶ್ಚಿತ್ತ ಶಿಕ್ಷೆ ಅನುಭವಿಸುತ್ತೇನೆ. ನಾನು ಸ್ತ್ರೀಧರ್ಮ ಮತ್ತು ಪುರುಷಧರ್ಮವನ್ನು ಸರಿಸಮನಾಗಿ ನೋಡುತ್ತೇನೆ. ಸ್ತ್ರೀಮೌಲ್ಯಕ್ಕೆ ಚ್ಯುತಿ ಬಾರದಂತೆ ಧರ್ಮಪಾಲನೆ ಮಾಡುತ್ತೇನೆ. ಹೂವಿನಂತೆ ಸಾಕಿದ ನಿಮ್ಮ ಮಗಳನ್ನು ನಾನು ಹೃದಯದಲ್ಲಿಟ್ಟು ಸಲಹುತ್ತೇನೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಶಿವನು ಹಿಮವಂತದಂಪತಿಗೆ ಅಭಯ ನೀಡುತ್ತಾನೆ.
Last Updated 28 ನವೆಂಬರ್ 2022, 19:30 IST
ವೇದವ್ಯಾಸರ ಶಿವಪುರಾಣಸಾರ|  ಕೈಲಾಸದಲ್ಲಿ ಶಿವ-ಗೌರಿ ಉತ್ಸವ

ವೇದವ್ಯಾಸರ ಶಿವಪುರಾಣಸಾರ: ಮಾತು ಕೇಳದ ಮೇನಾದೇವಿ

‘ಎಲೈ ದುಷ್ಟ, ನೀನಿಲ್ಲಿಂದ ಮಾತನಾಡದೆ ಹೊರಡು. ನೀನು ಮಹಾನೀಚ’ ಎಂದಳು ರೋಷದಿಂದ. ದೇವತೆಗಳೆಲ್ಲರೂ ಒಬ್ಬೊಬ್ಬರಾಗಿ ಮೇನಾದೇವಿಯನ್ನು ಸಮಾಧಾನಮಾಡಿದರು. ‘ಮೇನಾದೇವಿ, ನಮ್ಮ ಮಾತನ್ನು ಸಾವಧಾನವಾಗಿ ಕೇಳು. ಶಿವನೇ ಸಾಕ್ಷಾತ್ ಪರಮೇಶ್ವರ. ಅವನನ್ನು ಒಲಿಸಿಕೊಳ್ಳುವುದು ಸುಲಭವಲ್ಲ. ನಿನ್ನ ಮಗಳ ಕಠೋರ ತಪಸ್ಸನ್ನು ಮೆಚ್ಚಿ ಶಿವನು ದಯೆಯಿಂದ ಅವಳ ಕೋರಿಕೆ ಮೇರೆಗೆ ವಿವಾಹವಾಗುತ್ತಿದ್ದಾನೆ. ಪರಮಶಿವ ಅಳಿಯನಾಗುತ್ತಿರುವುದು ನಿನ್ನ ಸುಕೃತದ ಫಲ’ ಎನ್ನುತ್ತಾರೆ.
Last Updated 3 ನವೆಂಬರ್ 2022, 19:45 IST
ವೇದವ್ಯಾಸರ ಶಿವಪುರಾಣಸಾರ: ಮಾತು ಕೇಳದ ಮೇನಾದೇವಿ
ADVERTISEMENT
ADVERTISEMENT
ADVERTISEMENT
ADVERTISEMENT