ಅಯೋಧ್ಯೆ: ಎರಡು ಭಿನ್ನ ಬಿಂಬಗಳು... ಮತ್ತೆ ಕೆಡವುವ, ಕಟ್ಟುವ ಆಟ ಶುರುವಾಗುತ್ತಾ?
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಇನ್ನೇನು ಭೂಮಿಪೂಜೆ ನೆರವೇರಲಿದೆ. ದೇಶವನ್ನು ದಶಕಗಳ ಕಾಲ ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ ಕಾಡಿದ ವಿಷಯಗಳಲ್ಲಿ ಈ ವಿವಾದವೂ ಒಂದು. ಸುಪ್ರೀಂ ಕೋರ್ಟ್ನ ತೀರ್ಪಿನ ಅನ್ವಯ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕುತ್ತಿರುವ ಈ ಹೊತ್ತಿನಲ್ಲಿ ಸಾಂಸ್ಕೃತಿಕ ಲೋಕದ ಪ್ರತಿಕ್ರಿಯೆ ಹೇಗಿದ್ದೀತು? ಭಿನ್ನ ನಿಲುವುಗಳನ್ನು ಹೊಂದಿದ ಇಬ್ಬರು ಸಾಂಸ್ಕೃತಿಕ ಲೋಕದ ಪ್ರತಿನಿಧಿಗಳ ಮುಂದೆ ‘ಪ್ರಜಾವಾಣಿ’ ಐದು ಪ್ರಶ್ನೆಗಳನ್ನು ಇಟ್ಟಿತು. ತಾಂಜಾನಿಯಾ ಭಾರತೀಯ ರಾಯಭಾರ ಕಚೇರಿಯ ವಿವೇಕಾನಂದ ಅಧ್ಯಯನ ಕೇಂದ್ರದ ನಿರ್ದೇಶಕ ಸಂತೋಷ್ ಜಿ.ಆರ್. ಹಾಗೂ ಕಥೆಗಾರ್ತಿ ಫಾತಿಮಾ ರಲಿಯಾ ಅವರೇ ಆ ಇಬ್ಬರು ಪ್ರತಿನಿಧಿಗಳು. ಅವರ ಕೊಟ್ಟ ಉತ್ತರಗಳು ಇಲ್ಲಿವೆ. ಅಯೋಧ್ಯೆಯ ಎರಡು ಭಿನ್ನ ಬಿಂಬಗಳೂ ಅದರಲ್ಲಿ ಕಾಣುತ್ತಿವೆ...Last Updated 1 ಆಗಸ್ಟ್ 2020, 19:30 IST