ಟೆಕ್ಕಿಗಳ 'ಭಕ್ತಿ ಮಾರ್ಗ'ಕ್ಕೆ 'ಹ್ಯಾಟ್ಸ್' ಆಫ್!
ಸಮುದ್ರ ಜೀವಿಗಳಿಗೂ ಕಂಟಕವಾದ ಪ್ಲಾಸ್ಟಿಕ್ ಬಳಕೆಗೆ ಬ್ರೇಕ್ ಹಾಕುವಂತೆ ಮಹಾರಾಷ್ಟ್ರದ ಪುಣೆ ನಗರದಲ್ಲಿ ಇತ್ತೀಚೆಗೊಂದು ವಿನೂತನ ಜಾಗೃತಿ ನಡೆಯಿತು. ಇದರ ನೇತೃತ್ವ ವಹಿಸಿದ್ದು ಸಾಫ್ಟ್ವೇರ್ ಎಂಜಿನಿಯರ್ಸ್. ಇದಕ್ಕಾಗಿ ಇವರು ಆಯ್ದುಕೊಂಡದ್ದು ಪಂಢರಪುರದತ್ತ ಹೆಜ್ಜೆ ಹಾಕುತ್ತಿರುವ ವಿಠ್ಠಲನ ಭಕ್ತ ಸಾಗರವನ್ನು. ಅಂದಹಾಗೆ ಈ ಕಾರ್ಯಕ್ರಮದಲ್ಲಿ ಬ್ರೆಝಿಲ್ ಹಾಗೂ ಜಪಾನ್ ದೇಶದ ಒಬ್ಬೊಬ್ಬ ಎಂಜಿನಿಯರ್ ಕೂಡ ‘ತಾಳ’ ಹಾಕಿದ್ದಾರೆ. ಐಟಿ ದಿಂಡಿ ಹೆಸರಿನ ಈ ತಂಡದ ಕಾರ್ಯಕ್ಕೆ ಜಾಲತಾಣಲ್ಲೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.Last Updated 14 ಜುಲೈ 2018, 19:30 IST