<p><strong>ನವದೆಹಲಿ: </strong>ದೇಶದಲ್ಲಿ ಕೋವಿಡ್–19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ವಾಹನ ಮಾರಾಟವು ಇಳಿಕೆ ಆಗಬಹುದು ಎಂಬ ಆತಂಕವನ್ನು ಪ್ರಮುಖ ಕಾರು ತಯಾರಿಕಾ ಕಂಪನಿಗಳಾದ ಮಾರುತಿ ಸುಜುಕಿ, ಟೊಯೋಟಾ ಮತ್ತು ಹೋಂಡಾ ಕಾರ್ಸ್ ವ್ಯಕ್ತಪಡಿಸಿವೆ.</p>.<p>ವಾಹನ ಮಾರಾಟವು ಆರ್ಥಿಕ ಬೆಳವಣಿಗೆ ಮತ್ತು ಖರೀದಿಸಲು ಗ್ರಾಹಕರು ಎಷ್ಟರಮಟ್ಟಿಗೆ ಸಿದ್ಧರಿದ್ದಾರೆ ಎಂಬುದರ ಜೊತೆ ಬೆಸೆದುಕೊಂಡಿದೆ ಎಂದು ಮಾರುತಿ ಸುಜುಕಿ ಇಂಡಿಯಾ ಹೇಳಿದೆ.</p>.<p>ಕೋವಿಡ್–19 ಪರಿಸ್ಥಿತಿಯು ಹದಗೆಡುತ್ತಿರುವುದರಿಂದ ಸಹಜವಾಗಿಯೇ ಗ್ರಾಹಕರ ಭಾವನೆ ನಕಾರಾತ್ಮಕವಾಗಿದ್ದು, ಅದು ಮಾರಾಟದ ಮೇಲೆಯೂ ಪರಿಣಾಮ ಬೀರುತ್ತದೆ ಎಂದು ಮಾರುತಿ ಸುಜುಕಿ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ ತಿಳಿಸಿದ್ದಾರೆ.</p>.<p>ಲಾಕ್ಡೌನ್ನಿಂದ ಗ್ರಾಹಕರಿಗೆ ಕಾರನ್ನು ಹಸ್ತಾಂತರಿಸಲು ಸಾಧ್ಯವಾಗುವುದಿಲ್ಲ. ಆದರೆ, ಲಾಕ್ಡೌನ್ ಇಲ್ಲದಿದ್ದರೂ ಕೋವಿಡ್ ಪರಿಸ್ಥಿತಿಯು ಹದಗೆಟ್ಟರೆ ಕಾರು ಖರೀದಿಸುವ ಗ್ರಾಹಕರ ಮನಃಸ್ಥಿತಿ ಬದಲಾಗುತ್ತದೆ ಎಂದಿದ್ದಾರೆ.</p>.<p>ಸ್ಥಳೀಯ ಮಟ್ಟದಲ್ಲಿನ ನಿರ್ಬಂಧಗಳಿಂದಾಗಿ ಖರೀದಿ ಮತ್ತು ವಿತರಣೆಯ ಮೇಲೆ ಪರಿಣಾಮ ಉಂಟಾಗಿದೆ ಎಂದು ಟೊಯೋಟಾ ಕಿರ್ಲೋಸ್ಕರ್ ಮೋಟರ್ನ ಹಿರಿಯ ಉಪಾಧ್ಯಕ್ಷ ನವೀನ್ ಸೋನಿ ಹೇಳಿದ್ದಾರೆ.</p>.<p>‘ಬೇಡಿಕೆ ಮತ್ತು ಪೂರೈಕೆ ನಡುವೆ ವ್ಯತ್ಯಾಸವಾಗದಂತೆ ನೋಡಿಕೊಳ್ಳುವುದು ನಮ್ಮ ತಕ್ಷಣದ ಆದ್ಯತೆಯಾಗಿದೆ. ಗ್ರಾಹಕರಿಗೆ ಕಾರು ವಿತರಿಸುವ ಸಮಯವನ್ನು ಕಡಿಮೆ ಮಾಡುವುದರತ್ತವೂ ಗಮನ ಹರಿಸಲಾಗುತ್ತಿದೆ’ ಎಂದು ಅವರು ತಿಳಿಸಿದ್ದಾರೆ.</p>.<p>ಲಾಕ್ಡೌನ್ ಮತ್ತು ವಾರಾಂತ್ಯದ ಕರ್ಫ್ಯೂನಿಂದಾಗಿ ಕೆಲವು ಮಾರುಕಟ್ಟೆಗಳಲ್ಲಿ ಷೋರೂಂಗಳು ಮುಚ್ಚುವಂತಾಗಿದೆ. ಇದರಿಂದ ಮಾರಾಟದ ಮೇಲೆ ಪರಿಣಾಮ ಉಂಟಾಗುತ್ತಿದೆ ಎಂದು ಹೋಂಡಾ ಕಾರ್ಸ್ ಇಂಡಿಯಾದ ಹಿರಿಯ ಉಪಾಧ್ಯಕ್ಷ ರಾಜೇಶ್ ಗೋಯಲ್ ಹೇಳಿದ್ದಾರೆ.</p>.<p><strong>ದ್ವಿಚಕ್ರ ವಾಹನ ಮಾರಾಟ ಇಳಿಕೆ:</strong> ಕೋವಿಡ್ನ ಎರಡನೇ ಅಲೆಯು ದ್ವಿಚಕ್ರ ವಾಹನ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಉಂಟುಮಾಡಿದೆ. ಏಪ್ರಿಲ್ನಲ್ಲಿ ಇಲ್ಲಿಯವರೆಗೆ ಮಾರಾಟವು ಶೇ 30ರಿಂದ ಶೇ 50ರಷ್ಟು ಇಳಿಕೆಯಾಗಿದೆ ಎಂದು ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವೀಸಸ್ನ ವರದಿ ಹೇಳಿದೆ.</p>.<p>ನವರಾತ್ರಿ ಮತ್ತು ಗುಡಿಪಡ್ವಾದಂತಹ ಹಬ್ಬಗಳು ವಾರ್ಷಿಕ ವಾಹನ ಮಾರಾಟದಲ್ಲಿ ಉತ್ತಮ ಪಾಲನ್ನು ಹೊಂದಿವೆ. ಈ ಹೊತ್ತಿನಲ್ಲಿ ಚೇತರಿಕೆ ಆಗದೇ ಇದ್ದರೆ ಅಕ್ಟೋಬರ್ವರೆಗೂ ಚೇತರಿಕೆ ಸಾಧ್ಯವಾಗುವುದಿಲ್ಲ ಎಂದು ವರದಿ ತಿಳಿಸಿದೆ.</p>.<p>ಗುಡಿಪಡ್ವಾ ಸಂದರ್ಭದಲ್ಲಿ ಮಹಾರಾಷ್ಟ್ರದ ವಾಹನ ವಿತರಕರು ನಿರೀಕ್ಷೆ ಮಾಡಿದ್ದ ಮಾರಾಟದಲ್ಲಿ ಪ್ರಮಾಣದಲ್ಲಿ ಶೇ 50ರಷ್ಟು ಮಾತ್ರವೇ ಮಾರಾಟ ಆಗಿದೆ. ಉತ್ತರ ಪ್ರದೇಶದಲ್ಲಿ ಪಂಚಾಯಿತಿ ಚುನಾವಣೆಯ ಕಾರಣಕ್ಕಾಗಿ ಮಾರಾಟದ ಮೇಲೆ ಪರಿಣಾಮ ಉಂಟಾಗಿದೆ ಎಂದು ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ದೇಶದಲ್ಲಿ ಕೋವಿಡ್–19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ವಾಹನ ಮಾರಾಟವು ಇಳಿಕೆ ಆಗಬಹುದು ಎಂಬ ಆತಂಕವನ್ನು ಪ್ರಮುಖ ಕಾರು ತಯಾರಿಕಾ ಕಂಪನಿಗಳಾದ ಮಾರುತಿ ಸುಜುಕಿ, ಟೊಯೋಟಾ ಮತ್ತು ಹೋಂಡಾ ಕಾರ್ಸ್ ವ್ಯಕ್ತಪಡಿಸಿವೆ.</p>.<p>ವಾಹನ ಮಾರಾಟವು ಆರ್ಥಿಕ ಬೆಳವಣಿಗೆ ಮತ್ತು ಖರೀದಿಸಲು ಗ್ರಾಹಕರು ಎಷ್ಟರಮಟ್ಟಿಗೆ ಸಿದ್ಧರಿದ್ದಾರೆ ಎಂಬುದರ ಜೊತೆ ಬೆಸೆದುಕೊಂಡಿದೆ ಎಂದು ಮಾರುತಿ ಸುಜುಕಿ ಇಂಡಿಯಾ ಹೇಳಿದೆ.</p>.<p>ಕೋವಿಡ್–19 ಪರಿಸ್ಥಿತಿಯು ಹದಗೆಡುತ್ತಿರುವುದರಿಂದ ಸಹಜವಾಗಿಯೇ ಗ್ರಾಹಕರ ಭಾವನೆ ನಕಾರಾತ್ಮಕವಾಗಿದ್ದು, ಅದು ಮಾರಾಟದ ಮೇಲೆಯೂ ಪರಿಣಾಮ ಬೀರುತ್ತದೆ ಎಂದು ಮಾರುತಿ ಸುಜುಕಿ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ ತಿಳಿಸಿದ್ದಾರೆ.</p>.<p>ಲಾಕ್ಡೌನ್ನಿಂದ ಗ್ರಾಹಕರಿಗೆ ಕಾರನ್ನು ಹಸ್ತಾಂತರಿಸಲು ಸಾಧ್ಯವಾಗುವುದಿಲ್ಲ. ಆದರೆ, ಲಾಕ್ಡೌನ್ ಇಲ್ಲದಿದ್ದರೂ ಕೋವಿಡ್ ಪರಿಸ್ಥಿತಿಯು ಹದಗೆಟ್ಟರೆ ಕಾರು ಖರೀದಿಸುವ ಗ್ರಾಹಕರ ಮನಃಸ್ಥಿತಿ ಬದಲಾಗುತ್ತದೆ ಎಂದಿದ್ದಾರೆ.</p>.<p>ಸ್ಥಳೀಯ ಮಟ್ಟದಲ್ಲಿನ ನಿರ್ಬಂಧಗಳಿಂದಾಗಿ ಖರೀದಿ ಮತ್ತು ವಿತರಣೆಯ ಮೇಲೆ ಪರಿಣಾಮ ಉಂಟಾಗಿದೆ ಎಂದು ಟೊಯೋಟಾ ಕಿರ್ಲೋಸ್ಕರ್ ಮೋಟರ್ನ ಹಿರಿಯ ಉಪಾಧ್ಯಕ್ಷ ನವೀನ್ ಸೋನಿ ಹೇಳಿದ್ದಾರೆ.</p>.<p>‘ಬೇಡಿಕೆ ಮತ್ತು ಪೂರೈಕೆ ನಡುವೆ ವ್ಯತ್ಯಾಸವಾಗದಂತೆ ನೋಡಿಕೊಳ್ಳುವುದು ನಮ್ಮ ತಕ್ಷಣದ ಆದ್ಯತೆಯಾಗಿದೆ. ಗ್ರಾಹಕರಿಗೆ ಕಾರು ವಿತರಿಸುವ ಸಮಯವನ್ನು ಕಡಿಮೆ ಮಾಡುವುದರತ್ತವೂ ಗಮನ ಹರಿಸಲಾಗುತ್ತಿದೆ’ ಎಂದು ಅವರು ತಿಳಿಸಿದ್ದಾರೆ.</p>.<p>ಲಾಕ್ಡೌನ್ ಮತ್ತು ವಾರಾಂತ್ಯದ ಕರ್ಫ್ಯೂನಿಂದಾಗಿ ಕೆಲವು ಮಾರುಕಟ್ಟೆಗಳಲ್ಲಿ ಷೋರೂಂಗಳು ಮುಚ್ಚುವಂತಾಗಿದೆ. ಇದರಿಂದ ಮಾರಾಟದ ಮೇಲೆ ಪರಿಣಾಮ ಉಂಟಾಗುತ್ತಿದೆ ಎಂದು ಹೋಂಡಾ ಕಾರ್ಸ್ ಇಂಡಿಯಾದ ಹಿರಿಯ ಉಪಾಧ್ಯಕ್ಷ ರಾಜೇಶ್ ಗೋಯಲ್ ಹೇಳಿದ್ದಾರೆ.</p>.<p><strong>ದ್ವಿಚಕ್ರ ವಾಹನ ಮಾರಾಟ ಇಳಿಕೆ:</strong> ಕೋವಿಡ್ನ ಎರಡನೇ ಅಲೆಯು ದ್ವಿಚಕ್ರ ವಾಹನ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಉಂಟುಮಾಡಿದೆ. ಏಪ್ರಿಲ್ನಲ್ಲಿ ಇಲ್ಲಿಯವರೆಗೆ ಮಾರಾಟವು ಶೇ 30ರಿಂದ ಶೇ 50ರಷ್ಟು ಇಳಿಕೆಯಾಗಿದೆ ಎಂದು ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವೀಸಸ್ನ ವರದಿ ಹೇಳಿದೆ.</p>.<p>ನವರಾತ್ರಿ ಮತ್ತು ಗುಡಿಪಡ್ವಾದಂತಹ ಹಬ್ಬಗಳು ವಾರ್ಷಿಕ ವಾಹನ ಮಾರಾಟದಲ್ಲಿ ಉತ್ತಮ ಪಾಲನ್ನು ಹೊಂದಿವೆ. ಈ ಹೊತ್ತಿನಲ್ಲಿ ಚೇತರಿಕೆ ಆಗದೇ ಇದ್ದರೆ ಅಕ್ಟೋಬರ್ವರೆಗೂ ಚೇತರಿಕೆ ಸಾಧ್ಯವಾಗುವುದಿಲ್ಲ ಎಂದು ವರದಿ ತಿಳಿಸಿದೆ.</p>.<p>ಗುಡಿಪಡ್ವಾ ಸಂದರ್ಭದಲ್ಲಿ ಮಹಾರಾಷ್ಟ್ರದ ವಾಹನ ವಿತರಕರು ನಿರೀಕ್ಷೆ ಮಾಡಿದ್ದ ಮಾರಾಟದಲ್ಲಿ ಪ್ರಮಾಣದಲ್ಲಿ ಶೇ 50ರಷ್ಟು ಮಾತ್ರವೇ ಮಾರಾಟ ಆಗಿದೆ. ಉತ್ತರ ಪ್ರದೇಶದಲ್ಲಿ ಪಂಚಾಯಿತಿ ಚುನಾವಣೆಯ ಕಾರಣಕ್ಕಾಗಿ ಮಾರಾಟದ ಮೇಲೆ ಪರಿಣಾಮ ಉಂಟಾಗಿದೆ ಎಂದು ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>