<p><strong>ಬೆಂಗಳೂರು:</strong> ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈ ಬಾರಿ ನಗರದ ಯಾವ ಭಾಗದಲ್ಲೂ ಒಂದು ಗಿಡವನ್ನೂ ನೆಟ್ಟಿಲ್ಲ.</p>.<p>ಪ್ರಸಕ್ತ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲೇ ಸಸಿ ನೆಡಬೇಕಿತ್ತು. ವಿಧಾನಸಭೆ ಚುನಾವಣೆಯಿಂದಾಗಿ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಟೆಂಡರ್ ಪ್ರಕ್ರಿಯೆ ವಿಳಂಬವಾಯಿತು. ನಂತರ ಮೇಯರ್ ಚುನಾವಣೆ ನಡೆಯಿತು. ಆಗಲೂ ಈ ಕ್ರಮ ವಹಿಸಲು ಪಾಲಿಕೆಯಿಂದ ಸಾಧ್ಯವಾಗಿಲ್ಲ.</p>.<p>‘ಸಸಿ ನೆಡಲು ಪಾಲಿಕೆಯಿಂದ ಕಾರ್ಯಾದೇಶ ಸಿಕ್ಕಿರಲಿಲ್ಲ. ಚುನಾವಣೆ ನಂತರ ಅನುಮೋದನೆ ದೊರೆತಿದೆ. ಸದ್ಯ ಮಳೆಗಾಲ ಮುಗಿದಿರುವುದರಿಂದ, ಮುಂದಿನ ವರ್ಷವೇ ಸಸಿ ನೆಡಲಾಗುವುದು. ಈ ಬಗ್ಗೆ ಆಯುಕ್ತ ಮಂಜುನಾಥ್ ಪ್ರಸಾದ್ ಅವರೊಂದಿಗೆ ಚರ್ಚಿಸಿ, ತೀರ್ಮಾನಿಸಲಾಗಿದೆ’ ಎಂದು ಪಾಲಿಕೆಯ ಅರಣ್ಯ ವಿಭಾಗದ ಡಿಸಿಎಫ್ ಚೋಳರಾಜ್ ತಿಳಿಸಿದರು.</p>.<p>ನಗರಾದ್ಯಂತ ಸುಮಾರು 10 ಲಕ್ಷ ಸಸಿಗಳನ್ನು ನೆಡುವ ಗುರಿಯಿತ್ತು. ಈ ವರ್ಷ 75 ಸಾವಿರ ಸಸಿಗಳನ್ನು ನೆಡಲು ಯೋಜಿಸಿತ್ತು. ಆದರೆ, ಸಸಿ ನೆಡಲು ಸಾಧ್ಯವಾಗಿಲ್ಲ. ‘ಬಿಬಿಎಂಪಿಯ ನರ್ಸರಿಗಳಲ್ಲಿ 75,000 ಸಸಿಗಳಿವೆ. ಇವುಗಳ ನಿರ್ವಹಣೆಗೆ ಸಿಬ್ಬಂದಿ ಕೊರತೆ ಇರುವುದರಿಂದಟೆಂಡರ್ ಕರೆಯಬೇಕಿತ್ತು. ಈ ತನಕ ಟೆಂಡರ್ ಕರೆಯಲಾಗಿಲ್ಲ’ ಎಂದು ಪಾಲಿಕೆಯಮೂಲಗಳು ಹೇಳಿವೆ.</p>.<p>ಮಳೆಗಾಳಿಗೆ ಬೇಗ ಬೀಳುವ ಪೆಲ್ಟೊಪೊರಂ, ಗುಲ್ಮೋಹರ್ ಬದಲು, ಆಳ ಬೇರು ಬಿಡುವ ಹೊಂಗೆ, ಆಕಾಶ ಮಲ್ಲಿಗೆಯಂತಹ ಸಸಿಗಳನ್ನೇ ನೆಡಲು ಪಾಲಿಕೆ ಮುಂದಾಗಿದೆ.</p>.<p>‘ಮಹದೇವಪುರ, ದಾಸರಹಳ್ಳಿ ಹಾಗೂ ಪೂರ್ವ ವಲಯಗಳ ರಸ್ತೆ ಬದಿಗಳಲ್ಲಿ ಗಿಡ ನೆಡಲು ಸಾಕಷ್ಟು ಸ್ಥಳಾವಕಾಶ ಇದೆ. ಇತರೆಡೆ ಸ್ಥಳಾವಕಾಶದ ಲಭ್ಯತೆ ಪರಿಶೀಲಿಸಿ, ಸಸಿ ನೆಡಲಾಗು ವುದು. ಒಂದು ಸಸಿ ನೆಡಲು ಸುಮಾರು ₹672 ವೆಚ್ಚ ತಗಲುತ್ತದೆ’ ಎಂದು ಚೋಳರಾಜ್ ಮಾಹಿತಿ ನೀಡಿದರು.</p>.<p>* ನಗರದ ವಿವಿಧೆಡೆ ಒಣಗಿ ನಿಂತ ಗಿಡಗಳನ್ನು ಶೀಘ್ರ ತೆರವುಗೊಳಿಸಲು ಪಾಲಿಕೆಯ ಸಿಬ್ಬಂದಿಗೆ ತಿಳಿಸಿದ್ದೇವೆ. ಆದೇಶಕ್ಕಾಗಿ ಕಾಯಬೇಡಿ ಎಂದೂ ಹೇಳಿದ್ದೇವೆ</p>.<p><strong>-ಚೋಳರಾಜ್,</strong> ಡಿಸಿಎಫ್, ಅರಣ್ಯ ವಿಭಾಗ, ಬಿಬಿಎಂಪಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈ ಬಾರಿ ನಗರದ ಯಾವ ಭಾಗದಲ್ಲೂ ಒಂದು ಗಿಡವನ್ನೂ ನೆಟ್ಟಿಲ್ಲ.</p>.<p>ಪ್ರಸಕ್ತ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲೇ ಸಸಿ ನೆಡಬೇಕಿತ್ತು. ವಿಧಾನಸಭೆ ಚುನಾವಣೆಯಿಂದಾಗಿ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಟೆಂಡರ್ ಪ್ರಕ್ರಿಯೆ ವಿಳಂಬವಾಯಿತು. ನಂತರ ಮೇಯರ್ ಚುನಾವಣೆ ನಡೆಯಿತು. ಆಗಲೂ ಈ ಕ್ರಮ ವಹಿಸಲು ಪಾಲಿಕೆಯಿಂದ ಸಾಧ್ಯವಾಗಿಲ್ಲ.</p>.<p>‘ಸಸಿ ನೆಡಲು ಪಾಲಿಕೆಯಿಂದ ಕಾರ್ಯಾದೇಶ ಸಿಕ್ಕಿರಲಿಲ್ಲ. ಚುನಾವಣೆ ನಂತರ ಅನುಮೋದನೆ ದೊರೆತಿದೆ. ಸದ್ಯ ಮಳೆಗಾಲ ಮುಗಿದಿರುವುದರಿಂದ, ಮುಂದಿನ ವರ್ಷವೇ ಸಸಿ ನೆಡಲಾಗುವುದು. ಈ ಬಗ್ಗೆ ಆಯುಕ್ತ ಮಂಜುನಾಥ್ ಪ್ರಸಾದ್ ಅವರೊಂದಿಗೆ ಚರ್ಚಿಸಿ, ತೀರ್ಮಾನಿಸಲಾಗಿದೆ’ ಎಂದು ಪಾಲಿಕೆಯ ಅರಣ್ಯ ವಿಭಾಗದ ಡಿಸಿಎಫ್ ಚೋಳರಾಜ್ ತಿಳಿಸಿದರು.</p>.<p>ನಗರಾದ್ಯಂತ ಸುಮಾರು 10 ಲಕ್ಷ ಸಸಿಗಳನ್ನು ನೆಡುವ ಗುರಿಯಿತ್ತು. ಈ ವರ್ಷ 75 ಸಾವಿರ ಸಸಿಗಳನ್ನು ನೆಡಲು ಯೋಜಿಸಿತ್ತು. ಆದರೆ, ಸಸಿ ನೆಡಲು ಸಾಧ್ಯವಾಗಿಲ್ಲ. ‘ಬಿಬಿಎಂಪಿಯ ನರ್ಸರಿಗಳಲ್ಲಿ 75,000 ಸಸಿಗಳಿವೆ. ಇವುಗಳ ನಿರ್ವಹಣೆಗೆ ಸಿಬ್ಬಂದಿ ಕೊರತೆ ಇರುವುದರಿಂದಟೆಂಡರ್ ಕರೆಯಬೇಕಿತ್ತು. ಈ ತನಕ ಟೆಂಡರ್ ಕರೆಯಲಾಗಿಲ್ಲ’ ಎಂದು ಪಾಲಿಕೆಯಮೂಲಗಳು ಹೇಳಿವೆ.</p>.<p>ಮಳೆಗಾಳಿಗೆ ಬೇಗ ಬೀಳುವ ಪೆಲ್ಟೊಪೊರಂ, ಗುಲ್ಮೋಹರ್ ಬದಲು, ಆಳ ಬೇರು ಬಿಡುವ ಹೊಂಗೆ, ಆಕಾಶ ಮಲ್ಲಿಗೆಯಂತಹ ಸಸಿಗಳನ್ನೇ ನೆಡಲು ಪಾಲಿಕೆ ಮುಂದಾಗಿದೆ.</p>.<p>‘ಮಹದೇವಪುರ, ದಾಸರಹಳ್ಳಿ ಹಾಗೂ ಪೂರ್ವ ವಲಯಗಳ ರಸ್ತೆ ಬದಿಗಳಲ್ಲಿ ಗಿಡ ನೆಡಲು ಸಾಕಷ್ಟು ಸ್ಥಳಾವಕಾಶ ಇದೆ. ಇತರೆಡೆ ಸ್ಥಳಾವಕಾಶದ ಲಭ್ಯತೆ ಪರಿಶೀಲಿಸಿ, ಸಸಿ ನೆಡಲಾಗು ವುದು. ಒಂದು ಸಸಿ ನೆಡಲು ಸುಮಾರು ₹672 ವೆಚ್ಚ ತಗಲುತ್ತದೆ’ ಎಂದು ಚೋಳರಾಜ್ ಮಾಹಿತಿ ನೀಡಿದರು.</p>.<p>* ನಗರದ ವಿವಿಧೆಡೆ ಒಣಗಿ ನಿಂತ ಗಿಡಗಳನ್ನು ಶೀಘ್ರ ತೆರವುಗೊಳಿಸಲು ಪಾಲಿಕೆಯ ಸಿಬ್ಬಂದಿಗೆ ತಿಳಿಸಿದ್ದೇವೆ. ಆದೇಶಕ್ಕಾಗಿ ಕಾಯಬೇಡಿ ಎಂದೂ ಹೇಳಿದ್ದೇವೆ</p>.<p><strong>-ಚೋಳರಾಜ್,</strong> ಡಿಸಿಎಫ್, ಅರಣ್ಯ ವಿಭಾಗ, ಬಿಬಿಎಂಪಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>