ಬಜೆಟ್ನಲ್ಲಿ ಎಲ್ಲ ಸಾರಿಗೆ ನಿಗಮಗಳಿಗೆ ಒಟ್ಟು ₹4,000 ಕೋಟಿ ನೀಡಿರುವುದೇ ಬಹಳ ದೊಡ್ಡ ಉಪಕ್ರಮ. ಬಿಎಂಟಿಸಿ ಬಸ್ ಬೆಂಗಳೂರಿನ ಜೀವನಾಡಿಯಾಗಿದ್ದು, ಇಂದಿನ ಬಜೆಟ್ ಈ ಜೀವಸೆಲೆಗೆ ಆಮ್ಲಜನಕ ನೀಡಿದೆ. ಬಿಎಂಟಿಸಿ ದೈನಂದಿನ ಪ್ರಯಾಣಿಕರ ಸಂಖ್ಯೆಯು ದಿನಕ್ಕೆ 30 ಲಕ್ಷದಿಂದ 40 ಲಕ್ಷಗಳಿಗೆ ಏರಿದ್ದರಿಂದ ಶಕ್ತಿ ಯೋಜನೆಯು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು. ಈ ಯೋಜನೆ ಯಶಸ್ವಿಗೊಳ್ಳಬೇಕಿದ್ದರೆ ಅದಕ್ಕೆ ಸರಿಯಾಗಿ ಅನುದಾನ ಒದಗಿಸಬೇಕು. ಇಲ್ಲದೇ ಇದ್ದರೆ ಸಾರಿಗೆ ನಿಗಮಗಳನ್ನು ನಷ್ಟದ ಕೂಪಕ್ಕೆ ದೂಡಿದಂತಾಗುತ್ತದೆ. ಈಗ ಅನುದಾನವನ್ನು ಘೋಷಿಸಿರುವುದು ಆ ಅಪಾಯವನ್ನು ತಪ್ಪಿಸಿದೆ. ಎಲ್ಲ ನಿಗಮಗಳು ನಾಗರಿಕರ ಸೇವೆಗಾಗಿ ಹೆಚ್ಚಿನ ಬಸ್ಗಳನ್ನು ಸೇರ್ಪಡೆಯನ್ನು ಮತ್ತು ಸೇವೆಯ ಗುಣಮಟ್ಟ ಸುಧಾರಣೆಯನ್ನು ಈ ಕ್ರಮವು ಖಾತರಿಪಡಿಸಿದೆ.