ಕರ್ನಾಟಕ ಬಜೆಟ್ 2023| ಸಾಲ ತಗ್ಗಿಸಬೇಕು, ವರಮಾನ ಹೆಚ್ಚಿಸಬೇಕು
ಮುಂಬರುವ ಆರ್ಥಿಕ ವರ್ಷದಲ್ಲಿ ರಾಜ್ಯ ಸರ್ಕಾರವು ವಿತ್ತೀಯ ಕೊರತೆಯುನ್ನು ರಾಜ್ಯದ ಒಟ್ಟು ಆಂತರಿಕ ಉತ್ಪಾದನೆಯ (ಜಿಎಸ್ಡಿಪಿ) ಶೇಕಡ 2.6ಕ್ಕೆ ಹಾಗೂ ಸಾಲಗಳನ್ನು ಶೇ 24.2ಕ್ಕೆ ಮಿತಿಗೊಳಿಸಬೇಕು ಎಂಬ ಗುರಿಯನ್ನು ಹೊಂದಿದೆ. ₹ 402 ಕೋಟಿಯ ಮಿಗತೆ ವರಮಾನ ಹೊಂದುವ ಗುರಿಯನ್ನೂ ಇರಿಸಿಕೊಂಡಿದೆ. ಇವೆಲ್ಲವೂ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಪರಿಧಿಯೊಳಗೇ ಇವೆ. ವಿತ್ತೀಯ ಕೊರತೆಯು 2020–21ರಿಂದ ನಿರಂತರವಾಗಿ ಕಡಿಮೆ ಆಗುತ್ತಿದೆ. ರಾಜ್ಯ ಸರ್ಕಾರವು ವಿತ್ತೀಯ ನಿರ್ವಹಣೆಯನ್ನು, ಕೊರತೆಯನ್ನು ತಗ್ಗಿಸುವುದನ್ನು ಬದ್ಧತೆಯಾಗಿ ಇರಿಸಿಕೊಂಡಿದೆ ಎಂಬುದನ್ನು ಇದು ತೋರಿಸುತ್ತದೆ.Last Updated 17 ಫೆಬ್ರುವರಿ 2023, 19:09 IST