ಸುದೀರ್ಘವಾದ ಭಾಷಣದ ಪ್ರತಿ ಓದಿ ಸುಸ್ತಾದವರಂತೆ ಕಂಡು ಬಂದ ನಿರ್ಮಲಾ ಸೀತಾರಾಮನ್ ಅವರನ್ನು ಗಮನಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕುಳಿತು
ಕೊಂಡು ಓದು ಮುಂದುವರಿಸುವಂತೆ ಸೂಚಿಸಿದರು. ನಿಶ್ಶಕ್ತ
ರಾದಂತೆ ಕಂಡು ಬಂದ ಅವರಿಗೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಸಕ್ಕರೆ ಮಿಠಾಯಿ ನೀಡಿದರು. ಅಷ್ಟರಲ್ಲಿ, ಅವರ ಆಸನದತ್ತ ಧಾವಿಸಿದ ಆಹಾರ ಸಂಸ್ಕರಣಾ ಸಚಿವೆ ಹರ್ಸಿಮ್ರತ್ ಸಿಂಗ್ ಬಾದಲ್, ತೃಣಮೂಲ ಕಾಂಗ್ರೆಸ್ ಸಂಸದೆ ಕಾಕೋಳಿ ಘೋಷ್ ದಸ್ತಿದಾರ್, ನಿರ್ಮಲಾ ಅವರ ಕುಶಲ ವಿಚಾರಿಸಿದರು. ನಂತರ, ‘ಇನ್ನೂ ಎರಡೇ ಪುಟಗಳು ಉಳಿದಿವೆ’ ಎಂದು ಹಿರಿಯ ಸಚಿವ ರಾಜನಾಥ್ ಸಿಂಗ್ ಅವರ ಗಮನಕ್ಕೆ ತಂದ ನಿರ್ಮಲಾ ಸೀತಾರಾಮನ್, ‘ಬಾಕಿ ಉಳಿದ ಭಾಷಣದ ಅಂಶಗಳನ್ನು ಸದನ
ದಲ್ಲಿ ಮಂಡಿಸುತ್ತೇನೆ’ ಎಂದು ಸ್ಪೀಕರ್ ಓಂ ಬಿರ್ಲಾ ಅವರಲ್ಲಿ ಮನವಿ ಮಾಡಿ, ಬಜೆಟ್ ಭಾಷಣಕ್ಕೆ ವಿರಾಮ
ಹೇಳಿದರು.