‘ಕಾರವಾರದ ಮೀನುಗಾರಿಕಾ ಬಂದರಿನ ಅಭಿವೃದ್ಧಿಗೆ ಹಣ ಮೀಸಲಿಟ್ಟಿರುವುದು ಸ್ವಾಗತಾರ್ಹ. ಮೀನುಗಾರ ಮಹಿಳೆಯರಿಗೆ ದ್ವಿಚಕ್ರ ವಾಹನ ನೀಡುವುದಾಗಿ ತಿಳಿಸಿದ್ದಾರೆ. ಆದರೆ, ಅವು ಈಜಿಲ್ಲೆಗೆ ಹೆಚ್ಚು ಬಳಕೆಯಾಗದು. ಅದರ ಬದಲು ಮೀನು ಮಾರಾಟ ಮಾಡುವ ಮಹಿಳೆಯರಿಗೆ ವ್ಯವಹಾರದಲ್ಲಿ ನಷ್ಟ ತಡೆಯಲು ಯೋಜನೆ ಬೇಕಿತ್ತು. ರಿಯಾಯಿತಿ ದರದಲ್ಲಿ ಮೀನು ಖರೀದಿಗೆವ್ಯವಸ್ಥೆ ಪ್ರಕಟಿಸಬೇಕಿತ್ತು’ ಎಂದು ಅಭಿಪ್ರಾಯಪಟ್ಟಿದ್ದಾರೆ.