ರಾಜ್ಯದಲ್ಲಿ ಅನ್ನಭಾಗ್ಯಕ್ಕೆ ಅಕ್ಕಿಯ ಕೊರತೆ ಎದುರಾಗಿದೆ. ಪಡಿತರಿಗೆ ರಾಗಿ, ಜೋಳದ ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ವ್ಯಾಪಕ ಅಭಿಪ್ರಾಯ ಮೂಡಿಬಂದಿದೆ. ರಾಜ್ಯದಲ್ಲಿ ಮುಂದಿನ ತಿಂಗಳಲ್ಲಿ ರಾಗಿ, ಜೋಳ ಬಿತ್ತನೆಯಾಗಲಿದ್ದು, ಕೇಂದ್ರದ ಬೆಂಬಲ ಬೆಲೆಯ ಮೇಲೆ ಉತ್ತಮ ಪ್ರೋತ್ಸಾಹ ಧನವನ್ನು ಬಜೆಟ್ನಲ್ಲಿ ಘೋಷಿಸಬೇಕಿತ್ತು. ಇದರಿಂದ ರೈತರಿಗೆ ಉತ್ತೇಜಿಸುವ ಬಲವಾದ ನಿರೀಕ್ಷೆ ಇತ್ತು. ಆದರೆ, ಅದರ ಬಗ್ಗೆ ಪ್ರಸ್ತಾಪಿಸಿಲ್ಲ. ಈ ವರ್ಷ ಮುಂಗಾರು ತಡವಾಗಿದ್ದು, ಬೆಳೆಗಳು ಬಿತ್ತನೆಯಾಗದೆ ರೈತರು ಅನುಭವಿಸುತ್ತಿರುವ ನಷ್ಟಕ್ಕೆ ಪರಿಹಾರದ ಬಗ್ಗೆಯೂ ಪ್ರಸ್ತಾಪವಿಲ್ಲ.