ಬೆಂಗಳೂರು:ರಾಜ್ಯದಬಹುನಿರೀಕ್ಷಿತ ಮಹದಾಯಿ ಮತ್ತು ಎತ್ತಿನಹೊಳೆ ಯೋಜನೆಗಳಿಗೆ ರಾಜ್ಯ ಬಿಜೆಪಿ ಸರ್ಕಾರ ಅನುದಾನ ನಿಗದಿ ಮಾಡಿದೆ.ಮಹದಾಯಿ ಯೋಜನೆಗೆ ₹ 500 ಕೋಟಿ, ಎತ್ತಿನಹೊಳೆಗೆ ₹ 1500 ಕೋಟಿ ಅನುದಾನ ಮೀಸಲಿಡಲಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಬಜೆಟ್ ಭಾಷಣದಲ್ಲಿ ಈ ಎರಡೂ ಯೋಜನೆಗಳಿಗೆ ಅನುದಾನ ಘೋಷಿಸಿದರು.
#Budget2020 #KarnatakaBudget #BudgetSpeech2020 #Mahadayi pic.twitter.com/yW9zQyGGH0
— CM of Karnataka (@CMofKarnataka) March 5, 2020
ಮಹದಾಯಿನದಿ ನೀರು ಹಂಚಿಕೆ ಕುರಿತು ಅಧಿಸೂಚನೆ ಹೊರಡಿಸುವ ಮೂಲಕ ಕೇಂದ್ರ ಸರ್ಕಾರವು ಬಹುದಿ ನಗಳ ನಿರೀಕ್ಷೆಯನ್ನು ಈಡೇರಿಸಿತ್ತು. ಅದರ ಬೆನ್ನಲ್ಲೆ, ಮಹದಾಯಿಯೋಜನೆಯಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ₹ 2,000 ಕೋಟಿ ಅನುದಾನದ ಅವಶ್ಯಕತೆ ಇದ್ದು, 2020–21ನೇ ಸಾಲಿನ ಬಜೆಟ್ನಲ್ಲಿ ಹೆಚ್ಚಿನ ಅನುದಾನ ಒದಗಿಸಬೇಕು ಎಂಬ ಕೂಗು ಕೇಳಿ ಬಂದಿತ್ತು. ಆದರೆ, ನಿರೀಕ್ಷಿಸಿದಷ್ಟು ಸಿಗದೇ ಹೋದರೂ, ಸರ್ಕಾರ ₹500 ಕೋಟಿಗಳ ಅನುದಾನ ನೀಡಿದೆ.
#Budget2020 #KarnatakaBudget #BudgetSpeech2020 #agriculture #Horticulture pic.twitter.com/E4WiO8SknH
— CM of Karnataka (@CMofKarnataka) March 5, 2020
ಇನ್ನು ಬೆಂಗಳೂರು ಸೇರಿದಂತೆ ಬಯಲು ಸೀಮೆಯ ಹಲವು ಜಿಲ್ಲೆಗಳ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೈಗೊಂಡಿರುವ ಎತ್ತಿನಹೊಳೆ ಯೋಜನೆಗೆ ಈ ವರ್ಷ ₹1500 ಕೋಟಿಗಳನ್ನು ನೀಡಲಾಗಿದೆ.2012ರಲ್ಲಿ ₹12,912.36 ಕೋಟಿ ಇದ್ದ ಯೋಜನಾ ವೆಚ್ಚ 2020ರ ಹೊತ್ತಿಗೆ₹24,982 ಕೋಟಿಗೆ ಏರಿದೆ. ಈ ಬೃಹತ್ ಮೊತ್ತದ ಯೋಜನೆಗೆ ಈ ವರ್ಷ ನಿಗದಿಯಾಗಿರುವುದು ₹1500 ಕೋಟಿ ಮಾತ್ರ. ಹೀಗಾಗಿ ಯೋಜನೆ ನಿರೀಕ್ಷಿತ ವೇಗದಲ್ಲಿ ನಡೆಯುವುದೇ ಎಂಬ ಅನುಮಾನ ಮೂಡಿದೆ.
#Budget2020 #KarnatakaBudget #BudgetSpeech2020 #Yettinahole pic.twitter.com/U4N4fY0zJ9
— CM of Karnataka (@CMofKarnataka) March 5, 2020
ನೀರಾವರಿ ಒದಗಿಸಲು ಕ್ರಮ:2020–21ನೇ ಸಾಲಿನಲ್ಲಿ 1 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಹೆಚ್ಚುವರಿಯಾಗಿ ಜಲಸಂಪನ್ಮೂಲ ಇಲಾಖೆಯ ಮೂಲಕ ನೀರಾವರಿ ಒದಗಿಸಲು ಕ್ರಮ ತೆಗೆದುಕೊಳ್ಳುತ್ತೇವೆ.
ಜಲಾನಯನ ಪ್ರದೇಶ ಅಭಿವೃದ್ಧಿಗೆ: ಸುಜಲಾ–3 ಯೋಜನೆ ಮಾದರಿಯಲ್ಲಿಯೇ ವಿಶ್ವಬ್ಯಾಂಕ್ ಸಹಕಾರದಲ್ಲಿ 10 ಲಕ್ಷ ಹೆಕ್ಟೇರ್ ಜಲಾನಯನ ಪ್ರದೇಶದಲ್ಲಿ ಭೂ ಮೌಲ್ಯ ಸಂವರ್ಧನಗೆ ಕ್ರಮ.
ಮಳೆ ನೀರು, ಜಲಸಂರಕ್ಷಣೆಗೆ ವಿಶೇಷ ಯೋಜನೆ: ಜಲಸಂರಕ್ಷಣೆ ಮತ್ತು ಮಳೆ ನೀರು ಸಂರಕ್ಷಣೆಗಾಗಿ ವಿಶೇಷ ಯೋಜನೆ ರೂಪಿಸುತ್ತೇವೆ. 810 ಅತಿ ಸಣ್ಣ ಜಲಾನಯನ ಪ್ರದೇಶಗಳಲ್ಲಿ ಯೋಜನೆ ಜಾರಿ ಮಾಡುತ್ತೇವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.