<p><strong>ನವದೆಹಲಿ:</strong>ರೈತರ ಜೇಬಿಗೆ ಹೆಚ್ಚಿನ ಹಣ ಹರಿದುಬರುವಂತೆ ಮಾಡಲು ಕಿಸಾನ್ ರೈಲು ಯೋಜನೆ ಮತ್ತು ಕಿಸಾನ್ ಉಡಾನ್ ಯೋಜನೆಯನ್ನು ಸರ್ಕಾರಜಾರಿಗೆ ತರಲಿದೆ.</p>.<p>ಭಾರತೀಯ ರೈಲ್ವೆ ಇಲಾಖೆಯ ಸಹಕಾರದೊಂದಿದೆಈ ರೈಲು ದೇಶದಾದ್ಯಂತ ಸಂಚರಿಸಲಿದೆ. ಕಿಸಾನ್ ರೈಲಿನಲ್ಲಿ ರೈತರು ಬೆಳೆದ ತರಕಾರಿ, ಹಣ್ಣುಗಳನ್ನು ಸಂರಕ್ಷಿಸಲು ಶೀತಲೀಗೃಹ ಜಾಲ ನಿರ್ಮಿಸಿ ಆ ಮೂಲಕ ರೈತರಬೆಳೆಗಳಿಗೆ ಸರಿಯಾದ ಬೆಲೆ ದೊರಕಿಸಿಕೊಡಲಾಗುವುದು.ಇದು ಜಾರಿಗೆ ಬಂದಲ್ಲಿ ರೈತರು ತಾವು ಬೆಳೆದ ಬೆಳೆಗಳನ್ನು ಸಂರಕ್ಷಿಸಿ ಬೆಲೆ ಹೆಚ್ಚಾದಾಗ ಮಾರಾಟ ಮಾಡಲು ಅನುಕೂಲವಾಗಲಿದೆ.</p>.<p>ಉದಾಹರಣೆಗೆ ಟೊಮ್ಯಾಟೋ ಹೆಚ್ಚು ಬೆಳೆದರೆ ಅದಕ್ಕೆ ಸರಿಯಾದ ಬೆಲೆ ಸಿಗದಿದ್ದಾಗ ರೈತರು ಹತಾಶರಾಗಿ ರಸ್ತೆಗೆ ಚಲ್ಲುತ್ತಾ, ನಷ್ಟ ಅನುಭವಿಸುತ್ತಿದ್ದರು. ಕಿಶಾನ್ ರೈಲು ಹಾಗೂ ಕಿಸಾನ್ ಉಡಾನ್ಪದ್ದತಿ ಜಾರಿಗೆ ಬಂದರೆ ಈ ರೀತಿಯ ನಷ್ಟ ಸಂಭವಿಸುವ ಪ್ರಮೇಯ ಬರುವುದಿಲ್ಲ.ಈ ಶೀತಲೀಗೃಹ(ಕೋಲ್ಡ್ ಸ್ಟೋರೇಜ್) ವ್ಯವಸ್ಥೆ ಇರುವ ವಿಮಾನಗಳನ್ನು ಯೋಜನೆಯಲ್ಲಿ ಬಳಸಿಕೊಳ್ಳಲಾಗುವುದು. ಇದಕ್ಕಾಗಿ ನಾಗರಿಕವಿಮಾನ ಯಾನ ಖಾತೆ ಸಚಿವಾಲಯದೊಂದಿಗೆ ಮಾತುಕತೆ ನಡೆಸುವ ಸರ್ಕಾರ ಯೋಜನೆಯನ್ನು ಕಾರ್ಯರೂಪಕ್ಕೆ ತರಲಿದೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/business/budget/union-budget-2020-highlights-in-kannada-702204.html" target="_blank">ಕೇಂದ್ರ ಬಜೆಟ್ 2020: ಮುಖ್ಯಾಂಶಗಳು</a></p>.<p>ಈ ಯೋಜನೆಯ ವಚ್ಚಕ್ಕಾಗಿ ₹15 ಲಕ್ಷ ಕೋಟಿ ಹೂಡಿಕೆ ಮಾಡಲಾಗುವುದು. ಖಾಸಗಿ ಸಹಭಾಗಿತ್ವದಲ್ಲಿ ರಾಷ್ಟ್ರೀಯ ಶೀತಲೀಗೃಹ ಜಾಲ ನಿರ್ಮಾಣಕ್ಕೆ ನಬಾರ್ಡ್ನಿಂದ ಈ ಹಣಕಾಸು ಯೋಜನೆ ವಿಸ್ತರಣೆ ಮಾಡಲಾಗುವುದು.</p>.<p><strong>ಮೀನು ರಫ್ತಿನಿಂದ ಅಧಿಕ ಆದಾಯ</strong></p>.<p>ನೀಲಿ ಕ್ರಾಂತಿಯಿಂದ ಹೆಚ್ಚಿನ ಆದಾಯ ಬರುವ ನಿರೀಕ್ಷೆ ಇದ್ದು, 2024-25ನೇ ಸಾಲಿಗೆ 1ಲಕ್ಷ ಕೋಟಿ ಮೀನು ಉತ್ಪಾದಿಸಿ ರಫ್ತು ಮಾಡುವ ಗುರಿ ಹೊಂದಲಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.</p>.<p>ಬಜೆಟ್ ಭಾಷಣದಲ್ಲಿ ಹೇಳಿರುವ ಅವರು, 2022-23ರವರೆಗೆ 200 ಲಕ್ಷ ಟನ್ ಮೀನು ಉತ್ಪಾದಿಸುವ ಗುರಿ ಹೊಂದಲಾಗಿದೆ. 3477 ಸಾಗರ ಮಿತ್ರ ಹಾಗೂ 500 ಮೀನು ಉತ್ಪಾದನಾ ಸಂಘಗಳು ಇದರಲ್ಲಿ ಭಾಗಿಯಾಗಲಿದ್ದಾರೆ. ಸಮುದ್ರಕಳೆ, ಪಂಜರ ಪದ್ದತಿಗೆ ಉತ್ತೇಜನ ನೀಡಲಾಗುವುದು.ಸಮುದ್ರ ಮೀನುಗಾರಿಕೆ, ಸಂಪನ್ಮೂಲಗಳನ್ನು ಸಂರಕ್ಷಿಸಲು ಕಾರ್ಯಕ್ರಮ ರೂಪಿಸಲಾಗುವುದು ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong>ರೈತರ ಜೇಬಿಗೆ ಹೆಚ್ಚಿನ ಹಣ ಹರಿದುಬರುವಂತೆ ಮಾಡಲು ಕಿಸಾನ್ ರೈಲು ಯೋಜನೆ ಮತ್ತು ಕಿಸಾನ್ ಉಡಾನ್ ಯೋಜನೆಯನ್ನು ಸರ್ಕಾರಜಾರಿಗೆ ತರಲಿದೆ.</p>.<p>ಭಾರತೀಯ ರೈಲ್ವೆ ಇಲಾಖೆಯ ಸಹಕಾರದೊಂದಿದೆಈ ರೈಲು ದೇಶದಾದ್ಯಂತ ಸಂಚರಿಸಲಿದೆ. ಕಿಸಾನ್ ರೈಲಿನಲ್ಲಿ ರೈತರು ಬೆಳೆದ ತರಕಾರಿ, ಹಣ್ಣುಗಳನ್ನು ಸಂರಕ್ಷಿಸಲು ಶೀತಲೀಗೃಹ ಜಾಲ ನಿರ್ಮಿಸಿ ಆ ಮೂಲಕ ರೈತರಬೆಳೆಗಳಿಗೆ ಸರಿಯಾದ ಬೆಲೆ ದೊರಕಿಸಿಕೊಡಲಾಗುವುದು.ಇದು ಜಾರಿಗೆ ಬಂದಲ್ಲಿ ರೈತರು ತಾವು ಬೆಳೆದ ಬೆಳೆಗಳನ್ನು ಸಂರಕ್ಷಿಸಿ ಬೆಲೆ ಹೆಚ್ಚಾದಾಗ ಮಾರಾಟ ಮಾಡಲು ಅನುಕೂಲವಾಗಲಿದೆ.</p>.<p>ಉದಾಹರಣೆಗೆ ಟೊಮ್ಯಾಟೋ ಹೆಚ್ಚು ಬೆಳೆದರೆ ಅದಕ್ಕೆ ಸರಿಯಾದ ಬೆಲೆ ಸಿಗದಿದ್ದಾಗ ರೈತರು ಹತಾಶರಾಗಿ ರಸ್ತೆಗೆ ಚಲ್ಲುತ್ತಾ, ನಷ್ಟ ಅನುಭವಿಸುತ್ತಿದ್ದರು. ಕಿಶಾನ್ ರೈಲು ಹಾಗೂ ಕಿಸಾನ್ ಉಡಾನ್ಪದ್ದತಿ ಜಾರಿಗೆ ಬಂದರೆ ಈ ರೀತಿಯ ನಷ್ಟ ಸಂಭವಿಸುವ ಪ್ರಮೇಯ ಬರುವುದಿಲ್ಲ.ಈ ಶೀತಲೀಗೃಹ(ಕೋಲ್ಡ್ ಸ್ಟೋರೇಜ್) ವ್ಯವಸ್ಥೆ ಇರುವ ವಿಮಾನಗಳನ್ನು ಯೋಜನೆಯಲ್ಲಿ ಬಳಸಿಕೊಳ್ಳಲಾಗುವುದು. ಇದಕ್ಕಾಗಿ ನಾಗರಿಕವಿಮಾನ ಯಾನ ಖಾತೆ ಸಚಿವಾಲಯದೊಂದಿಗೆ ಮಾತುಕತೆ ನಡೆಸುವ ಸರ್ಕಾರ ಯೋಜನೆಯನ್ನು ಕಾರ್ಯರೂಪಕ್ಕೆ ತರಲಿದೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/business/budget/union-budget-2020-highlights-in-kannada-702204.html" target="_blank">ಕೇಂದ್ರ ಬಜೆಟ್ 2020: ಮುಖ್ಯಾಂಶಗಳು</a></p>.<p>ಈ ಯೋಜನೆಯ ವಚ್ಚಕ್ಕಾಗಿ ₹15 ಲಕ್ಷ ಕೋಟಿ ಹೂಡಿಕೆ ಮಾಡಲಾಗುವುದು. ಖಾಸಗಿ ಸಹಭಾಗಿತ್ವದಲ್ಲಿ ರಾಷ್ಟ್ರೀಯ ಶೀತಲೀಗೃಹ ಜಾಲ ನಿರ್ಮಾಣಕ್ಕೆ ನಬಾರ್ಡ್ನಿಂದ ಈ ಹಣಕಾಸು ಯೋಜನೆ ವಿಸ್ತರಣೆ ಮಾಡಲಾಗುವುದು.</p>.<p><strong>ಮೀನು ರಫ್ತಿನಿಂದ ಅಧಿಕ ಆದಾಯ</strong></p>.<p>ನೀಲಿ ಕ್ರಾಂತಿಯಿಂದ ಹೆಚ್ಚಿನ ಆದಾಯ ಬರುವ ನಿರೀಕ್ಷೆ ಇದ್ದು, 2024-25ನೇ ಸಾಲಿಗೆ 1ಲಕ್ಷ ಕೋಟಿ ಮೀನು ಉತ್ಪಾದಿಸಿ ರಫ್ತು ಮಾಡುವ ಗುರಿ ಹೊಂದಲಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.</p>.<p>ಬಜೆಟ್ ಭಾಷಣದಲ್ಲಿ ಹೇಳಿರುವ ಅವರು, 2022-23ರವರೆಗೆ 200 ಲಕ್ಷ ಟನ್ ಮೀನು ಉತ್ಪಾದಿಸುವ ಗುರಿ ಹೊಂದಲಾಗಿದೆ. 3477 ಸಾಗರ ಮಿತ್ರ ಹಾಗೂ 500 ಮೀನು ಉತ್ಪಾದನಾ ಸಂಘಗಳು ಇದರಲ್ಲಿ ಭಾಗಿಯಾಗಲಿದ್ದಾರೆ. ಸಮುದ್ರಕಳೆ, ಪಂಜರ ಪದ್ದತಿಗೆ ಉತ್ತೇಜನ ನೀಡಲಾಗುವುದು.ಸಮುದ್ರ ಮೀನುಗಾರಿಕೆ, ಸಂಪನ್ಮೂಲಗಳನ್ನು ಸಂರಕ್ಷಿಸಲು ಕಾರ್ಯಕ್ರಮ ರೂಪಿಸಲಾಗುವುದು ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>