ನವದೆಹಲಿ: ಆರ್ಥಿಕ ಸ್ಥಿತಿಗತಿ ಕುರಿತು ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ 'ಶ್ವೇತಪತ್ರ' ಮಂಡಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಇಂದು ಲೋಕಸಭೆಯಲ್ಲಿ 2024–25ನೇ ಹಣಕಾಸು ವರ್ಷದ ಕೇಂದ್ರದ ಮಧ್ಯಂತರ ಬಜೆಟ್ ಮಂಡಿಸಿದ ನಿರ್ಮಲಾ, ಈ ಕುರಿತು ಮಾಹಿತಿ ನೀಡಿದ್ದಾರೆ.
ಆ ವರ್ಷಗಳ ಬಿಕ್ಕಟ್ಟನ್ನು ದಾಟಿ ಬಂದಿದ್ದೇವೆ. ಆರ್ಥಿಕತೆಯು ಈಗ ಸುಸ್ಥಿರವಾದ ಪ್ರಗತಿಯ ಪಥದಲ್ಲಿ, ಸರ್ವಾಂಗೀಣ ಅಭಿವೃದ್ಧಿಯ ಹಾದಿಯಲ್ಲಿದೆ. 2014ರವರೆಗೂ ನಾವೆಲ್ಲಿದ್ದೆವು ಮತ್ತು ಈಗ ಎಲ್ಲಿದ್ದೇವೆ ಎಂಬುದನ್ನು ಹಿಂತಿರುಗಿ ನೋಡಲು ಇದು ಸಕಾಲ. ಆ ಕಾಲದ ದುರಾಡಳಿತದಿಂದ ಪಾಠ ಕಲಿಯುವುದಷ್ಟೇ ಇದರ ಹಿಂದಿನ ಉದ್ದೇಶ. ಈ ಕುರಿತು ಸರ್ಕಾರವು ಶ್ವೇತ ಪತ್ರವನ್ನು ಸಂಸತ್ತಿನ ಮುಂದಿಡಲಿದೆ ಎಂದು ಹೇಳಿದ್ದಾರೆ.