ತೆರಿಗೆ ಪಾಲು ಹಂಚಿಕೆಯಲ್ಲಿ ಕೇಂದ್ರವು ಅನ್ಯಾಯ ಮುಂದುವರಿಸಿದೆ. ನಾವು ಕನಿಷ್ಠ 14ನೇ ಹಣಕಾಸು ಆಯೋಗದಲ್ಲಿ ನಿಗದಿಯಾಗಿದ್ದ ಶೇ 4.71ರಷ್ಟಾದರೂ ಕೊಡಿ ಎಂದು 16ನೇ ಹಣಕಾಸು ಆಯೋಗದ ಎದುರು ವಾದ ಮಂಡಿಸಿದ್ದೆವು. ತೆರಿಗೆ ಹಂಚಿಕೆಯಲ್ಲಿ ನ್ಯಾಯಯುತ ಪಾಲಿಗಾಗಿ ಪ್ರಧಾನಿ, ಕೇಂದ್ರ ಹಣಕಾಸು ಸಚಿವರನ್ನು ಭೇಟಿಯಾಗಿ ಮನವಿ ಮಾಡಿದ್ದೆವು. ಆದರೂ, ತೆರಿಗೆಯಲ್ಲಿ ಬರೀ ಶೇ 4.13ರಷ್ಟು ಪಾಲು ಕೊಡಲಾಗಿದೆ. ನಗರ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಮುಂದಿನ ಐದು ವರ್ಷಗಳಿಗೆ ರಾಜ್ಯಕ್ಕೆ ಕೇವಲ ತಲಾ ₹ 18 ಸಾವಿರ ಕೋಟಿಗಳಷ್ಟು ಹಂಚಿಕೆ ಮಾಡಿದೆ. ಕರ್ನಾಟಕದಿಂದ ವರ್ಷಕ್ಕೆ ₹ 4.50 ಲಕ್ಷ ಕೋಟಿಗಳಷ್ಟು ತೆರಿಗೆ ಕೇಂದ್ರಕ್ಕೆ ಹೋಗುತ್ತದೆ. ರಾಜ್ಯ ಒಂದು ರೂಪಾಯಿ ತೆರಿಗೆ ಕಟ್ಟಿದರೆ ಬರೀ 14 ಪೈಸೆ ತೆರಿಗೆ ರೂಪದಲ್ಲಿ ಕೊಡುತ್ತಿದೆ. ಇದು ಅನ್ಯಾಯವಲ್ಲವೇ?