<p><strong>ಮೊಳಕಾಲ್ಮುರು:</strong> ಮೊಳಕಾಲ್ಮುರು ಸೀತಾಫಲ ಹಣ್ಣಿಗೆ ಪ್ರಸಿದ್ಧಿ. ತಾಲ್ಲೂಕಿನಲ್ಲಿರುವ ಬೆಟ್ಟಗಳಲ್ಲಿ ಪ್ರಕೃತಿದತ್ತವಾಗಿ ನೂರಾರು ವರ್ಷಗಳಿಂದ ಸೀತಾಫಲ ಗಿಡಗಳು ಬೆಳೆದಿವೆ.</p>.<p>ತಾಲ್ಲೂಕಿನಲ್ಲಿ ಮುಖ್ಯವಾಗಿ ಮೊಳಕಾಲ್ಮುರು, ನುಂಕಮಲೆ ಬೆಟ್ಟ, ಕೂಗಿಬಂಡಿ, ಹಾನಗಲ್, ಪೂಜಾರಹಟ್ಟಿ, ಕೆಳಗಹಳಹಟ್ಟಿ, ಮೇಗಲಹಟ್ಟಿ, ರಾಯದುರ್ಗ ರಸ್ತೆಯಲ್ಲಿ ಹರಡಿಕೊಂಡಿರುವ ಬೆಟ್ಟದಲ್ಲಿ ಹಾಗೂ ಅರಣ್ಯ ಪ್ರದೇಶದಲ್ಲಿ ಸೀತಾಫಲ ಗಿಡಗಳು ಬೆಳೆದಿವೆ.</p>.<p>ಡಿಸೆಂಬರ್ ಹಾಗೂ ಜನವರಿಯಲ್ಲಿ ಈ ಹಣ್ಣಿನ ಭರಾಟೆ ಹೆಚ್ಚು. ಆದರೆ, ಈ ಬಾರಿ ಶೇ 10ರಷ್ಟು ಮಾತ್ರ ಇಳುವರಿ ಇದೆ ಎಂದು ಹಣ್ಣಿನ ವ್ಯಾಪಾರಿ ತಿಪ್ಪೇಸ್ವಾಮಿ ಹೇಳಿದರು.</p>.<p>ಬೆಂಗಳೂರು, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಮಾರುಕಟ್ಟೆಗಳಿಗೆ ಇಲ್ಲಿನ ಹಣ್ಣು ರಫ್ತು ಮಾಡಲಾಗುತ್ತಿತ್ತು. ಎರಡು ತಿಂಗಳ ಸೀಜನ್ ಹೊಂದಿರುವ ಈ ಹಣ್ಣು ತಾಲ್ಲೂಕಿನ ನೂರಾರು ಕೂಲಿ ಕಾರ್ಮಿಕರ ಹೊಟ್ಟೆ ತುಂಬಿಸುತ್ತಿತ್ತು. ಈ ವರ್ಷ ಮಳೆ ಇಲ್ಲದಿರುವುದರಿಂದ ಕಾರ್ಮಿಕರ ಜೀವನೋಪಾಯಕ್ಕೆ ಹೊಡೆತ ಬಿದ್ದಿದೆ ಎಂದು ಹಣ್ಣು ಮಾರಾಟಗಾರ ಸಿದ್ದಣ್ಣ ಬೇಸರದಿಂದ ಹೇಳಿದರು.</p>.<p>ವಲಯ ಅರಣ್ಯಾಧಿಕಾರಿ ಮಂಜುನಾಥ್ ಮಾಹಿತಿ ನೀಡಿ, ‘ನಮ್ಮ ಇಲಾಖೆ ವ್ಯಾಪ್ತಿಯಲ್ಲಿ 200ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಸೀತಾಫಲ ಗಿಡಗಳಿವೆ. ಸಾಮಾನ್ಯವಾಗಿ ಆಗಸ್ಟ್ ತಿಂಗಳಿನಲ್ಲಿ ಗಿಡಗಳು ಹೂ ಬಿಡುತ್ತವೆ. ಈ ವೇಳೆ ಮಳೆ ಪೂರ್ಣ ಕೈಕೊಟ್ಟಿದ್ದ ಪರಿಣಾಮ ಹೂವು ಬಿಡದೇ ಕಾಯಿ ಕಟ್ಟಲಿಲ್ಲ. ಪರಿಣಾಮ ಶೇ 5ರಷ್ಟು ಇಳುವರಿ ಬಂದಿದೆ. ಈ ಕಾರಣಕ್ಕಾಗಿ ಹಣ್ಣು ಮಾರಾಟ ಹರಾಜು ರದ್ದು ಮಾಡಲಾಯಿತು. ಇತ್ತೀಚಿನ ವರ್ಷಗಳಲ್ಲಿ ಹರಾಜು ರದ್ದು ಮಾಡಿರುವುದು ಇದೇ ಮೊದಲು’ ಎಂದು ಹೇಳಿದರು.</p>.<p>*<br />ಮಳೆ ಕೊರತೆಯಾಗಿದ್ದರೂ ಗಿಡಗಳ ಸಂಖ್ಯೆ ಕುಸಿದಿಲ್ಲ. ಕಳೆದ ವರ್ಷ ಅಲ್ಲಲ್ಲಿ ನಾಟಿ ಮಾಡಿಸಲಾಗಿದೆ. ಹೂ ಬಿಡುವಾಗ ಮಳೆ ಕೈಕೊಟ್ಟಿದ್ದೇ ಸಮಸ್ಯೆಗೆ ಮೂಲ ಕಾರಣ<br /><em><strong>-ಮಂಜುನಾಥ್, ವಲಯ ಅರಣ್ಯಾಧಿಕಾರಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೊಳಕಾಲ್ಮುರು:</strong> ಮೊಳಕಾಲ್ಮುರು ಸೀತಾಫಲ ಹಣ್ಣಿಗೆ ಪ್ರಸಿದ್ಧಿ. ತಾಲ್ಲೂಕಿನಲ್ಲಿರುವ ಬೆಟ್ಟಗಳಲ್ಲಿ ಪ್ರಕೃತಿದತ್ತವಾಗಿ ನೂರಾರು ವರ್ಷಗಳಿಂದ ಸೀತಾಫಲ ಗಿಡಗಳು ಬೆಳೆದಿವೆ.</p>.<p>ತಾಲ್ಲೂಕಿನಲ್ಲಿ ಮುಖ್ಯವಾಗಿ ಮೊಳಕಾಲ್ಮುರು, ನುಂಕಮಲೆ ಬೆಟ್ಟ, ಕೂಗಿಬಂಡಿ, ಹಾನಗಲ್, ಪೂಜಾರಹಟ್ಟಿ, ಕೆಳಗಹಳಹಟ್ಟಿ, ಮೇಗಲಹಟ್ಟಿ, ರಾಯದುರ್ಗ ರಸ್ತೆಯಲ್ಲಿ ಹರಡಿಕೊಂಡಿರುವ ಬೆಟ್ಟದಲ್ಲಿ ಹಾಗೂ ಅರಣ್ಯ ಪ್ರದೇಶದಲ್ಲಿ ಸೀತಾಫಲ ಗಿಡಗಳು ಬೆಳೆದಿವೆ.</p>.<p>ಡಿಸೆಂಬರ್ ಹಾಗೂ ಜನವರಿಯಲ್ಲಿ ಈ ಹಣ್ಣಿನ ಭರಾಟೆ ಹೆಚ್ಚು. ಆದರೆ, ಈ ಬಾರಿ ಶೇ 10ರಷ್ಟು ಮಾತ್ರ ಇಳುವರಿ ಇದೆ ಎಂದು ಹಣ್ಣಿನ ವ್ಯಾಪಾರಿ ತಿಪ್ಪೇಸ್ವಾಮಿ ಹೇಳಿದರು.</p>.<p>ಬೆಂಗಳೂರು, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಮಾರುಕಟ್ಟೆಗಳಿಗೆ ಇಲ್ಲಿನ ಹಣ್ಣು ರಫ್ತು ಮಾಡಲಾಗುತ್ತಿತ್ತು. ಎರಡು ತಿಂಗಳ ಸೀಜನ್ ಹೊಂದಿರುವ ಈ ಹಣ್ಣು ತಾಲ್ಲೂಕಿನ ನೂರಾರು ಕೂಲಿ ಕಾರ್ಮಿಕರ ಹೊಟ್ಟೆ ತುಂಬಿಸುತ್ತಿತ್ತು. ಈ ವರ್ಷ ಮಳೆ ಇಲ್ಲದಿರುವುದರಿಂದ ಕಾರ್ಮಿಕರ ಜೀವನೋಪಾಯಕ್ಕೆ ಹೊಡೆತ ಬಿದ್ದಿದೆ ಎಂದು ಹಣ್ಣು ಮಾರಾಟಗಾರ ಸಿದ್ದಣ್ಣ ಬೇಸರದಿಂದ ಹೇಳಿದರು.</p>.<p>ವಲಯ ಅರಣ್ಯಾಧಿಕಾರಿ ಮಂಜುನಾಥ್ ಮಾಹಿತಿ ನೀಡಿ, ‘ನಮ್ಮ ಇಲಾಖೆ ವ್ಯಾಪ್ತಿಯಲ್ಲಿ 200ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಸೀತಾಫಲ ಗಿಡಗಳಿವೆ. ಸಾಮಾನ್ಯವಾಗಿ ಆಗಸ್ಟ್ ತಿಂಗಳಿನಲ್ಲಿ ಗಿಡಗಳು ಹೂ ಬಿಡುತ್ತವೆ. ಈ ವೇಳೆ ಮಳೆ ಪೂರ್ಣ ಕೈಕೊಟ್ಟಿದ್ದ ಪರಿಣಾಮ ಹೂವು ಬಿಡದೇ ಕಾಯಿ ಕಟ್ಟಲಿಲ್ಲ. ಪರಿಣಾಮ ಶೇ 5ರಷ್ಟು ಇಳುವರಿ ಬಂದಿದೆ. ಈ ಕಾರಣಕ್ಕಾಗಿ ಹಣ್ಣು ಮಾರಾಟ ಹರಾಜು ರದ್ದು ಮಾಡಲಾಯಿತು. ಇತ್ತೀಚಿನ ವರ್ಷಗಳಲ್ಲಿ ಹರಾಜು ರದ್ದು ಮಾಡಿರುವುದು ಇದೇ ಮೊದಲು’ ಎಂದು ಹೇಳಿದರು.</p>.<p>*<br />ಮಳೆ ಕೊರತೆಯಾಗಿದ್ದರೂ ಗಿಡಗಳ ಸಂಖ್ಯೆ ಕುಸಿದಿಲ್ಲ. ಕಳೆದ ವರ್ಷ ಅಲ್ಲಲ್ಲಿ ನಾಟಿ ಮಾಡಿಸಲಾಗಿದೆ. ಹೂ ಬಿಡುವಾಗ ಮಳೆ ಕೈಕೊಟ್ಟಿದ್ದೇ ಸಮಸ್ಯೆಗೆ ಮೂಲ ಕಾರಣ<br /><em><strong>-ಮಂಜುನಾಥ್, ವಲಯ ಅರಣ್ಯಾಧಿಕಾರಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>