ನವದೆಹಲಿ: ಮುಂದಿನ ವರ್ಷದಜೂನ್ ತಿಂಗಳಿಗೂ ಮೊದಲು ತಮ್ಮ ವರಮಾನವು ಕೋವಿಡ್–ಪೂರ್ವ ಸ್ಥಿತಿಗೆ ಮರಳಲಿದೆ ಎಂದು ಭಾರತದ ಶೇಕಡ 82ರಷ್ಟು ಕಂಪನಿಗಳು ವಿಶ್ವಾಸ ವ್ಯಕ್ತಪಡಿಸಿವೆ.
ಪಿಡಬ್ಲ್ಯುಸಿ ಇಂಡಿಯಾ ನಡೆಸಿರುವ ಸಮೀಕ್ಷೆಯಲ್ಲಿ ಈ ಮಾಹಿತಿ ಇದೆ. ಮುಖ್ಯ ಅನುಭವಿ ಅಧಿಕಾರಿಗಳು ಮತ್ತು ಆಡಳಿತ ಮಂಡಳಿಯ ಹಿರಿಯ ಸದಸ್ಯರು ತಮ್ಮ ಅಭಿಪ್ರಾಯ ನೀಡಿದ್ಧಾರೆ.
ಸಮೀಕ್ಷೆಯ ವಿವರ
225 -ಅಭಿಪ್ರಾಯ ನೀಡಿರುವ ಮುಖ್ಯ ಅನುಭವಿ ಅಧಿಕಾರಿಗಳು (ಸಿಎಕ್ಸ್ಒ)
ಜೂನ್ 17–ಜುಲೈ 10 -ಸಮೀಕ್ಷೆ ಕೈಗೊಂಡ ಅವಧಿ
73% -2020-21ರಲ್ಲಿ ವರಮಾನ ಕಡಿಮೆಯಾಗಲಿದೆ ಎಂದಿರುವ ಕಂಪನಿಗಳು
15% -ಮುಂದಿನ ಹಣಕಾಸು ವರ್ಷದಲ್ಲಿಯೂ ಕುಸಿತ ಮುಂದುವರಿಯಲಿದೆ ಎಂದಿರುವವರು
77% -ಡಿಜಿಟಲ್ ಅಳವಡಿಕೆಗೆ ವೇಗ ನೀಡಲು ಬಯಸಿರುವವರು
45% -ಸ್ವಾಧೀನಕ್ಕೆ ಉತ್ಸಾಹ ತೋರಿಸಿರುವ ಕಂಪನಿಗಳ ಪ್ರಮಾಣ
20% -ಪ್ರಮುಖವಲ್ಲದ ವಹಿವಾಟನ್ನು ಕೈಬಿಡಲು ಉದ್ದೇಶಿಸಿರುವವರು
26% -ಬಂಡವಾಳ ಸಂಗ್ರಹಕ್ಕೆ ಮುಂದಾಗಿರುವವರು
***
ಹೆಚ್ಚು ವರಮಾನ ನಷ್ಟ: ಮೂಲಸೌಕರ್ಯ, ರಿಯಲ್ ಎಸ್ಟೇಟ್, ಕೈಗಾರಿಕೆಗಳು, ರಿಟೇಲ್, ಆತಿಥ್ಯ, ಮನರಂಜನೆ
ನಷ್ಟಕ್ಕೆ ಕಾರಣಗಳು: ಬೇಡಿಕೆ ಕುಸಿತ, ಪೂರೈಕೆ ವ್ಯವಸ್ಥೆಗೆ ಅಡ್ಡಿ ಮತ್ತು ನಗದು ಬಿಕ್ಕಟ್ಟು
ಕಡಿಮೆ ಪರಿಣಾಮ: ತಂತ್ರಜ್ಞಾನ, ಆರೋಗ್ಯಸೇವೆ, ಔಷಧ, ದೂರಸಂಪರ್ಕ, ಗ್ರಾಹಕ ಬಳಕೆ ವಸ್ತುಗಳು
ಸವಾಲುಗಳು: ತೀವ್ರ ಸ್ಪರ್ಧೆ, ಗರಿಷ್ಠ ವೆಚ್ಚ, ಬಂಡವಾಳ ಸಂಗ್ರಹ
*****
ವಾಣಿಜ್ಯೋದ್ಯಮಿಗಳು ಈ ಅನಿಶ್ಚಿತ ಪರಿಸ್ಥಿತಿಗೆ ಹೊಂದಿಕೊಂಡಿದ್ದು, ವಹಿವಾಟು ಚೇತರಿಸಿಕೊಳ್ಳುವ ಆಶಾವಾದದಲ್ಲಿದ್ದಾರೆ
-ಸಂಜೀವ್ ಕೃಷ್ಣ
ಪಿಡಬ್ಲ್ಯುಸಿ ಇಂಡಿಯಾದ ಪಾಲುದಾರ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.