<p><strong>ನವದೆಹಲಿ:</strong> ಬ್ಯಾಂಕ್ ಸಾಲದ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯ(ಇ.ಡಿ) ಶುಕ್ರವಾರ ದೆಹಲಿಯಲ್ಲಿ ಉದ್ಯಮಿ ಅನಿಲ್ ಅಂಬಾನಿ ಅವರ ಪುತ್ರ ಜಯ್ ಅನ್ಮೋಲ್ ಅಂಬಾನಿ ಅವರನ್ನು ವಿಚಾರಣೆಗೆ ಒಳಪಡಿಸಿತು.</p>.<p>ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ 34 ವರ್ಷದ ಜಯ್ ಅನ್ಮೋಲ್ ಅವರ ಹೇಳಿಕೆ ದಾಖಲಿಸಿಕೊಂಡಿರುವ ಇ.ಡಿ. ಅಧಿಕಾರಿಗಳು, ನಾಳೆಯೂ ವಿಚಾರಣೆಯನ್ನು ಮುಂದುವರೆಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.</p>.<p>ಅಧಿಕಾರಿಗಳ ಪ್ರಕಾರ ಯೆಸ್ ಬ್ಯಾಂಕ್ ಸಾಲಕ್ಕೆ ಸಂಬಂಧಿಸಿದಂತೆ ಇ.ಡಿ.ತನಿಖೆ ನಡೆಸುತ್ತಿದೆ. 2017ರ ಮಾರ್ಚ್ 31ರವರೆಗೆ ರಿಲಯನ್ಸ್ ಧೀರೂಭಾಯ್ ಅಂಬಾನಿ ಸಮೂಹಕ್ಕೆ(ಎಡಿಎಜಿ) ₹6,000 ಕೋಟಿ ಹಣ ಬ್ಯಾಂಕ್ನಿಂದ ವರ್ಗಾವಣೆ ಆಗಿತ್ತು. ಈ ಮೊತ್ತವು ಒಂದೇ ವರ್ಷದಲ್ಲಿ ( 2028 ಮಾರ್ಚ್ 31) ದ್ವಿಗುಣಗೊಂಡು ₹13,000 ಕೋಟಿಯಷ್ಟಾಗಿತ್ತು.</p>.<p>ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ (ಆರ್ಎಚ್ಎಫ್ಎಲ್) ಮತ್ತು ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್ ಕಂಪನಿಗಳ ಹೆಸರಲ್ಲಿ ಹೂಡಿಕೆ ನಡೆದಿತ್ತು.</p>.<p>ಈ ಬೃಹತ್ ಮೊತ್ತದ ಹೂಡಿಕೆಗಳು ಅನುತ್ಪಾದಕ ಹೂಡಿಕೆಗಳಾಗಿ(ಎನ್ಪಿಐ) ಪರಿವರ್ತನೆ ಆಗಿದ್ದವು. ಕಂಪನಿ ಮತ್ತು ಬ್ಯಾಂಕ್ ನಡುವಿನ ಈ ವ್ಯವಹಾರದಿಂದ ಯೆಸ್ ಬ್ಯಾಂಕ್ ₹ 3,300 ಕೋಟಿ ನಷ್ಟ ಅನುಭವಿಸಿತ್ತು ಎಂದು ಇ.ಡಿ.ಆರೋಪಿಸಿದೆ.</p>.<p>ರಿಲಯನ್ಸ್ ಕಂಪನಿಗಳ ಸಮೂಹದ ಬ್ಯಾಂಕ್ ಸಾಲದ ವಂಚನೆ ಸಂಬಂಧ ಈಗಾಗಲೇ ಅನಿಲ್ ಅಂಬಾನಿ ಅವರನ್ನೂ ಇ.ಡಿ. ವಿಚಾರಣೆ ನಡೆಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಬ್ಯಾಂಕ್ ಸಾಲದ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯ(ಇ.ಡಿ) ಶುಕ್ರವಾರ ದೆಹಲಿಯಲ್ಲಿ ಉದ್ಯಮಿ ಅನಿಲ್ ಅಂಬಾನಿ ಅವರ ಪುತ್ರ ಜಯ್ ಅನ್ಮೋಲ್ ಅಂಬಾನಿ ಅವರನ್ನು ವಿಚಾರಣೆಗೆ ಒಳಪಡಿಸಿತು.</p>.<p>ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ 34 ವರ್ಷದ ಜಯ್ ಅನ್ಮೋಲ್ ಅವರ ಹೇಳಿಕೆ ದಾಖಲಿಸಿಕೊಂಡಿರುವ ಇ.ಡಿ. ಅಧಿಕಾರಿಗಳು, ನಾಳೆಯೂ ವಿಚಾರಣೆಯನ್ನು ಮುಂದುವರೆಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.</p>.<p>ಅಧಿಕಾರಿಗಳ ಪ್ರಕಾರ ಯೆಸ್ ಬ್ಯಾಂಕ್ ಸಾಲಕ್ಕೆ ಸಂಬಂಧಿಸಿದಂತೆ ಇ.ಡಿ.ತನಿಖೆ ನಡೆಸುತ್ತಿದೆ. 2017ರ ಮಾರ್ಚ್ 31ರವರೆಗೆ ರಿಲಯನ್ಸ್ ಧೀರೂಭಾಯ್ ಅಂಬಾನಿ ಸಮೂಹಕ್ಕೆ(ಎಡಿಎಜಿ) ₹6,000 ಕೋಟಿ ಹಣ ಬ್ಯಾಂಕ್ನಿಂದ ವರ್ಗಾವಣೆ ಆಗಿತ್ತು. ಈ ಮೊತ್ತವು ಒಂದೇ ವರ್ಷದಲ್ಲಿ ( 2028 ಮಾರ್ಚ್ 31) ದ್ವಿಗುಣಗೊಂಡು ₹13,000 ಕೋಟಿಯಷ್ಟಾಗಿತ್ತು.</p>.<p>ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ (ಆರ್ಎಚ್ಎಫ್ಎಲ್) ಮತ್ತು ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್ ಕಂಪನಿಗಳ ಹೆಸರಲ್ಲಿ ಹೂಡಿಕೆ ನಡೆದಿತ್ತು.</p>.<p>ಈ ಬೃಹತ್ ಮೊತ್ತದ ಹೂಡಿಕೆಗಳು ಅನುತ್ಪಾದಕ ಹೂಡಿಕೆಗಳಾಗಿ(ಎನ್ಪಿಐ) ಪರಿವರ್ತನೆ ಆಗಿದ್ದವು. ಕಂಪನಿ ಮತ್ತು ಬ್ಯಾಂಕ್ ನಡುವಿನ ಈ ವ್ಯವಹಾರದಿಂದ ಯೆಸ್ ಬ್ಯಾಂಕ್ ₹ 3,300 ಕೋಟಿ ನಷ್ಟ ಅನುಭವಿಸಿತ್ತು ಎಂದು ಇ.ಡಿ.ಆರೋಪಿಸಿದೆ.</p>.<p>ರಿಲಯನ್ಸ್ ಕಂಪನಿಗಳ ಸಮೂಹದ ಬ್ಯಾಂಕ್ ಸಾಲದ ವಂಚನೆ ಸಂಬಂಧ ಈಗಾಗಲೇ ಅನಿಲ್ ಅಂಬಾನಿ ಅವರನ್ನೂ ಇ.ಡಿ. ವಿಚಾರಣೆ ನಡೆಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>