<p><strong>ಮಂಗಳೂರು: </strong>ಅಡಿಕೆ ಧಾರಣೆಯಲ್ಲಿ ಹೆಚ್ಚಳವಾಗಿದ್ದು ಡಬಲ್ ಚೋಲ್ ಅಡಿಕೆ ಪ್ರತಿ ಕೆ.ಜಿ.ಗೆ ₹ 430ರಿಂದ ₹ 460, ಸಿಂಗಲ್ ಚೋಲ್ಗೆ ₹ 425ರಿಂದ ₹ 455 ಹಾಗೂ ಹೊಸ ಅಡಿಕೆಗೆ ₹ 345ರಿಂದ ₹ 395 ದರ ಸಿಗುತ್ತಿದೆ.</p>.<p>2020ರ ನವೆಂಬರ್ನಲ್ಲಿ ಸಿಂಗಲ್ ಚೋಲ್ ಅಡಿಕೆಗೆ ₹ 290, ಡಬಲ್ ಚೋಲ್ಗೆ ₹ 300 ಧಾರಣೆ ಇತ್ತು.</p>.<p>ಉತ್ತರ ಭಾರತದಲ್ಲಿ ಅಡಿಕೆಗೆ ಬೇಡಿಕೆ ಹೆಚ್ಚಳವಾಗಿದೆ, ವಿದೇಶದಿಂದ ಅಕ್ರಮವಾಗಿ ಬರುತ್ತಿದ್ದ ಅಡಿಕೆಗೆ ಕೋವಿಡ್–19 ಸಂದರ್ಭದಲ್ಲಿ ಕಡಿವಾಣ ಬಿದ್ದಿದೆ. ಇದರಿಂದ ಧಾರಣೆ ಹೆಚ್ಚಾಗಿದೆ ಎಂದು ವಿಶ್ಲೇಷಿಸಲಾಗಿದೆ. ಕ್ಯಾಂಪ್ಕೊ ಸಂಸ್ಥೆಯು ಅಡಿಕೆಗೆ ಉತ್ತಮ ಧಾರಣೆ ನೀಡುತ್ತಿರುವ ಪರಿಣಾಮ, ಖಾಸಗಿ ವರ್ತಕರೂ ಹೆಚ್ಚಿನ ಬೆಲೆಗೆ ಖರೀದಿಸುತ್ತಿದ್ದಾರೆ.</p>.<p>‘ಅಡಿಕೆ ಇಳುವರಿ ಶೇ 40ರಷ್ಟು ಕಡಿಮೆ ಇದ್ದು, ದಾಸ್ತಾನು ಕುಸಿದಿದೆ. ಹೀಗಾಗಿಯೂ ಧಾರಣೆ ಹೆಚ್ಚಾಗಿದೆ’ ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ತಿಳಿಸಿದರು.</p>.<p>‘ಅಡಿಕೆಗೆ ಕೊಳೆ ರೋಗದಿಂದಾಗಿ ಇಳುವರಿ ಕಡಿಮೆಯಾಗಿದೆ. ಹೀಗಾಗಿ ಧಾರಣೆ ಹೆಚ್ಚಳವಾಗಿದ್ದರೂ, ಅಡಿಕೆ ದಾಸ್ತಾನು ಇಲ್ಲ’ ಎಂದು ಕೃಷಿಕರು ಹೇಳುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು: </strong>ಅಡಿಕೆ ಧಾರಣೆಯಲ್ಲಿ ಹೆಚ್ಚಳವಾಗಿದ್ದು ಡಬಲ್ ಚೋಲ್ ಅಡಿಕೆ ಪ್ರತಿ ಕೆ.ಜಿ.ಗೆ ₹ 430ರಿಂದ ₹ 460, ಸಿಂಗಲ್ ಚೋಲ್ಗೆ ₹ 425ರಿಂದ ₹ 455 ಹಾಗೂ ಹೊಸ ಅಡಿಕೆಗೆ ₹ 345ರಿಂದ ₹ 395 ದರ ಸಿಗುತ್ತಿದೆ.</p>.<p>2020ರ ನವೆಂಬರ್ನಲ್ಲಿ ಸಿಂಗಲ್ ಚೋಲ್ ಅಡಿಕೆಗೆ ₹ 290, ಡಬಲ್ ಚೋಲ್ಗೆ ₹ 300 ಧಾರಣೆ ಇತ್ತು.</p>.<p>ಉತ್ತರ ಭಾರತದಲ್ಲಿ ಅಡಿಕೆಗೆ ಬೇಡಿಕೆ ಹೆಚ್ಚಳವಾಗಿದೆ, ವಿದೇಶದಿಂದ ಅಕ್ರಮವಾಗಿ ಬರುತ್ತಿದ್ದ ಅಡಿಕೆಗೆ ಕೋವಿಡ್–19 ಸಂದರ್ಭದಲ್ಲಿ ಕಡಿವಾಣ ಬಿದ್ದಿದೆ. ಇದರಿಂದ ಧಾರಣೆ ಹೆಚ್ಚಾಗಿದೆ ಎಂದು ವಿಶ್ಲೇಷಿಸಲಾಗಿದೆ. ಕ್ಯಾಂಪ್ಕೊ ಸಂಸ್ಥೆಯು ಅಡಿಕೆಗೆ ಉತ್ತಮ ಧಾರಣೆ ನೀಡುತ್ತಿರುವ ಪರಿಣಾಮ, ಖಾಸಗಿ ವರ್ತಕರೂ ಹೆಚ್ಚಿನ ಬೆಲೆಗೆ ಖರೀದಿಸುತ್ತಿದ್ದಾರೆ.</p>.<p>‘ಅಡಿಕೆ ಇಳುವರಿ ಶೇ 40ರಷ್ಟು ಕಡಿಮೆ ಇದ್ದು, ದಾಸ್ತಾನು ಕುಸಿದಿದೆ. ಹೀಗಾಗಿಯೂ ಧಾರಣೆ ಹೆಚ್ಚಾಗಿದೆ’ ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ತಿಳಿಸಿದರು.</p>.<p>‘ಅಡಿಕೆಗೆ ಕೊಳೆ ರೋಗದಿಂದಾಗಿ ಇಳುವರಿ ಕಡಿಮೆಯಾಗಿದೆ. ಹೀಗಾಗಿ ಧಾರಣೆ ಹೆಚ್ಚಳವಾಗಿದ್ದರೂ, ಅಡಿಕೆ ದಾಸ್ತಾನು ಇಲ್ಲ’ ಎಂದು ಕೃಷಿಕರು ಹೇಳುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>