ನಾವು ಕಾದು ನೋಡಲಿದ್ದೇವೆ ಎಂದಿರುವರಜನೀಶ್ ಕುಮಾರ್, ಟೆಲಿಕಾಂ ಕಂಪನಿಗಳು ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸುತ್ತವೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವ ಹೊಣೆಗಾರಿಕೆ ಸರ್ಕಾರದ ಅಧೀನದಲ್ಲಿರುವ ದೂರಸಂಪರ್ಕ ಇಲಾಖೆಗೆ ಸಂಬಂಧಿಸಿದ್ದು ಎಂದಿದ್ದಾರೆ.
‘ಯಾವುದೇ ಒಂದು ಉದ್ಯಮದ ಮೇಲೆ ನಕಾರಾತ್ಮಕ ಪರಿಣಾಮವಾದರೆ ಅದು ದೊಡ್ಡ ವ್ಯವಸ್ಥೆಯೊಂದರ ಮೇಲೆಯೇ ಪರಿಣಾಮ ಬೀರುತ್ತದೆ. ಬ್ಯಾಂಕ್, ಉದ್ಯೋಗಿ, ಗ್ರಾಹಕ ಎಲ್ಲರಿಗೂ ಅದು ತಟ್ಟುತ್ತದೆ. ಹೀಗಾಗಿ ನಾವೂ ಬೆಲೆ ತೆರಬೇಕಾಗುತ್ತದೆ’ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.