<p><strong>ನವದೆಹಲಿ:</strong> ‘ಭಾರತದ ಬೆಳವಣಿಗೆಗೆ ಬಂಡವಾಳ ಮಾರುಕಟ್ಟೆಗಳು ಎಂಜಿನ್ ಆಗಿವೆ. ಇವುಗಳನ್ನು ಪೋಷಿಸುವ ಬಗ್ಗೆ ನೀತಿ ನಿರೂಪಕರು ಗಮನ ಹರಿಸಬೇಕು’ ಎಂದು ಭಾbusರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಅಧ್ಯಕ್ಷ ಉದಯ್ ಕೋಟಕ್ ಹೇಳಿದ್ದಾರೆ.</p>.<p>‘ಕೋವಿಡ್–19 ಸಾಂಕ್ರಾಮಿಕದ ಸಂದರ್ಭದಲ್ಲಿ ಬಂಡವಾಳ ಮಾರುಕಟ್ಟೆಗಳು ಆರ್ಥಿಕತೆಗೆ ಬೆಂಬಲ ನೀಡಿವೆ. ಕಾರ್ಪೊರೇಟ್ ಸಂಸ್ಥೆಗಳ ಪೋಷಣೆಗೆ ಅಗತ್ಯ ಇರುವಷ್ಟು ಬಂಡವಾಳ ಸಂಗ್ರಹಿಸಲು ನೆರವಾಗಿವೆ’ ಎಂದು ಅವರು ತಿಳಿಸಿದ್ದಾರೆ.</p>.<p>‘ಬಂಡವಾಳ ಮಾರುಕಟ್ಟೆ ಪ್ರವೇಶಿಸಲು ಕಂಪನಿಗಳು ಕಾರ್ಪೊರೇಟ್ ಆಡಳಿತದ ಬಗ್ಗೆ ಗಮನ ಹರಿಸುವ ಅಗತ್ಯವಿದೆ. ಏಕೆಂದರೆ ಮಾರುಕಟ್ಟೆಯು ಬಂಡವಾಳ ಸಂಗ್ರಹಿಸಲು ಸಹಾಯ ಮಾಡುತ್ತದೆ. ಉದ್ಯಮಗಳ ಯಶಸ್ಸು ಮತ್ತು ವೈಫಲ್ಯವನ್ನು ಈಗ ಕಾರ್ಪೊರೇಟ್ ಆಡಳಿತವು ನಿರ್ಧರಿಸುತ್ತದೆ’ ಎಂದಿದ್ದಾರೆ.</p>.<p>ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಎಚ್ಡಿಎಫ್ಸಿ ಲಿಮಿಟೆಡ್ನ ಸಿಇಒ ಕೇಕಿ ಮಿಸ್ತ್ರಿ, ‘ಜಾಗತಿಕ ಹೂಡಿಕೆದಾರರು ಬಂಡವಾಳ ಹೂಡಿಕೆ ಮಾಡುವಾಗ ಮೊದಲು ಗಮನ ಹರಿಸುವುದೇ ಉತ್ತಮ ಆಡಳಿತದ ಬಗ್ಗೆ. ಎಲ್ಲಿ ಕಾರ್ಪೊರೇಟ್ ಆಡಳಿತವು ಉತ್ತಮವಾಗಿದೆ ಎಂದು ಗ್ರಹಿಸುತ್ತಾರೋ ಅಲ್ಲಿ ಅವರು ಹೂಡಿಕೆ ಮಾಡಲು ಬಯಸುತ್ತಾರೆ’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘ಭಾರತದ ಬೆಳವಣಿಗೆಗೆ ಬಂಡವಾಳ ಮಾರುಕಟ್ಟೆಗಳು ಎಂಜಿನ್ ಆಗಿವೆ. ಇವುಗಳನ್ನು ಪೋಷಿಸುವ ಬಗ್ಗೆ ನೀತಿ ನಿರೂಪಕರು ಗಮನ ಹರಿಸಬೇಕು’ ಎಂದು ಭಾbusರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಅಧ್ಯಕ್ಷ ಉದಯ್ ಕೋಟಕ್ ಹೇಳಿದ್ದಾರೆ.</p>.<p>‘ಕೋವಿಡ್–19 ಸಾಂಕ್ರಾಮಿಕದ ಸಂದರ್ಭದಲ್ಲಿ ಬಂಡವಾಳ ಮಾರುಕಟ್ಟೆಗಳು ಆರ್ಥಿಕತೆಗೆ ಬೆಂಬಲ ನೀಡಿವೆ. ಕಾರ್ಪೊರೇಟ್ ಸಂಸ್ಥೆಗಳ ಪೋಷಣೆಗೆ ಅಗತ್ಯ ಇರುವಷ್ಟು ಬಂಡವಾಳ ಸಂಗ್ರಹಿಸಲು ನೆರವಾಗಿವೆ’ ಎಂದು ಅವರು ತಿಳಿಸಿದ್ದಾರೆ.</p>.<p>‘ಬಂಡವಾಳ ಮಾರುಕಟ್ಟೆ ಪ್ರವೇಶಿಸಲು ಕಂಪನಿಗಳು ಕಾರ್ಪೊರೇಟ್ ಆಡಳಿತದ ಬಗ್ಗೆ ಗಮನ ಹರಿಸುವ ಅಗತ್ಯವಿದೆ. ಏಕೆಂದರೆ ಮಾರುಕಟ್ಟೆಯು ಬಂಡವಾಳ ಸಂಗ್ರಹಿಸಲು ಸಹಾಯ ಮಾಡುತ್ತದೆ. ಉದ್ಯಮಗಳ ಯಶಸ್ಸು ಮತ್ತು ವೈಫಲ್ಯವನ್ನು ಈಗ ಕಾರ್ಪೊರೇಟ್ ಆಡಳಿತವು ನಿರ್ಧರಿಸುತ್ತದೆ’ ಎಂದಿದ್ದಾರೆ.</p>.<p>ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಎಚ್ಡಿಎಫ್ಸಿ ಲಿಮಿಟೆಡ್ನ ಸಿಇಒ ಕೇಕಿ ಮಿಸ್ತ್ರಿ, ‘ಜಾಗತಿಕ ಹೂಡಿಕೆದಾರರು ಬಂಡವಾಳ ಹೂಡಿಕೆ ಮಾಡುವಾಗ ಮೊದಲು ಗಮನ ಹರಿಸುವುದೇ ಉತ್ತಮ ಆಡಳಿತದ ಬಗ್ಗೆ. ಎಲ್ಲಿ ಕಾರ್ಪೊರೇಟ್ ಆಡಳಿತವು ಉತ್ತಮವಾಗಿದೆ ಎಂದು ಗ್ರಹಿಸುತ್ತಾರೋ ಅಲ್ಲಿ ಅವರು ಹೂಡಿಕೆ ಮಾಡಲು ಬಯಸುತ್ತಾರೆ’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>