ತಿಪಟೂರು: ಏಳೆಂಟು ತಿಂಗಳಿಂದ ಆಶಾದಾಯಕವಾಗಿದ್ದ ತಿಪಟೂರು ಎಪಿಎಂಸಿ ಕೊಬ್ಬರಿ ಧಾರಣೆ ಈಗ ಭಾರಿ ಕುಸಿತ ಕಂಡಿದ್ದು, ರೈತರಲ್ಲಿ ಆತಂಕ ಮೂಡಿದೆ.
ಈಚೆಗೆ ಧಾರಣೆ ಕ್ವಿಂಟಲ್ಗೆ ₹ 17,500ದವರೆಗೆ ಮುಟ್ಟಿತ್ತು. ಬರದ ನಡುವೆ ತೆಂಗಿನ ಮರಗಳು ಸೊರಗಿ ಉತ್ಪನ್ನ ಕುಸಿದಿದ್ದರೂ ಧಾರಣೆ ಸಮಾಧಾನ ತಂದಿತ್ತು. ಬುಧವಾರದ ಎಪಿಎಂಸಿ ಹರಾಜಿನಲ್ಲಿ ₹ 12,500ಕ್ಕೆ ಕುಸಿದಿತ್ತು.
‘ಎಪಿಎಂಸಿ ಮಾರುಕಟ್ಟೆ ಮೂಲಕವೇ ಕೊಬ್ಬರಿ ಮಾರಾಟವಾಗಬೇಕು. ಆದರೆ, ಸಣ್ಣಪುಟ್ಟ ಊರು ಗಳಲ್ಲೂ ರೈತರಿಂದ ನೇರವಾಗಿ ಖರೀದಿಸಿ ಅಕ್ರಮವಾಗಿ ವಹಿವಾಟು ನಡೆಸುವವರು ಹೆಚ್ಚಿದ್ದಾರೆ. ಇದು ಕೂಡ ಧಾರಣೆ ಕುಸಿತಕ್ಕೆ ಕಾರಣ’ ಎಂದು ಎಪಿಎಂಸಿ ಉಪಾಧ್ಯಕ್ಷಬಜಗೂರು ಮಂಜುನಾಥ್ ಹೇಳಿದರು.