‘ವ್ಯಾಪಕವಾಗಿ ಹರಡುತ್ತಿರುವ ವೈರಸ್ ಸೋಂಕಿನಿಂದಾಗಿ ಸರಕುಗಳ ಜಾಗತಿಕ ಪೂರೈಕೆ ಸರಣಿ ಜತೆಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ತಳಕು ಹಾಕಿಕೊಂಡಿರುವ ಭಾರತದ ಉದ್ದಿಮೆ ಮತ್ತು ವ್ಯಾಪಾರಕ್ಕೆ ಹಾನಿ ತಟ್ಟಲಿದೆ’ ಎಂದು ಡನ್ ಆ್ಯಂಡ್ ಬ್ರಾಡ್ಸ್ಟ್ರೀಟ್ ಇಂಡಿಯಾದ ಮುಖ್ಯ ಆರ್ಥಿಕ ತಜ್ಞ ಅರುಣ್ ಸಿಂಗ್ ಹೇಳಿದ್ದಾರೆ.