ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ನೇತೃತ್ವದಲ್ಲಿ ಸೆಪ್ಟೆಂಬರ್ನಲ್ಲಿ ಸಭೆ ಸೇರಿದ್ದ ಭವಿಷ್ಯ ನಿಧಿ ಸಂಘಟನೆ ಧರ್ಮದರ್ಶಿಗಳ ಮಂಡಳಿಯು, ಶೇಕಡ 8.5ರಷ್ಟು ಬಡ್ಡಿ ಮೊತ್ತವನ್ನು ಎರಡು ಕಂತುಗಳಲ್ಲಿ ಪಾವತಿಸುವ ತೀರ್ಮಾನ ಕೈಗೊಂಡಿತ್ತು. ಶೇಕಡ 8.15ರಷ್ಟು ಬಡ್ಡಿಯನ್ನು ಒಂದು ಕಂತಿನಲ್ಲಿ, ಶೇಕಡ 0.35ರಷ್ಟು ಬಡ್ಡಿಯನ್ನು ಇನ್ನೊಂದು ಕಂತಿನಲ್ಲಿ ಪಾವತಿಸುವ ತೀರ್ಮಾನ ಆಗಿತ್ತು.