‘ಚೀನಾ ಬಂಡವಾಳ ಹಾಗೂ ‘ಕಾಂಪಿಟ್ ವಿತ್ ಚೀನಾ’ ಕುರಿತು ಜುಲೈನಲ್ಲಿ ಒಂದು ದಿನದ ವಿಚಾರ ಸಂಕಿರಣ ಏರ್ಪಡಿಸಲಾಗುವುದು. ವಿಷಯ ತಜ್ಞರನ್ನು ಕರೆಸಿ ಚರ್ಚೆ, ಮಾತುಕತೆ ನಡೆಸಲಾಗುವುದು.ರಾಜ್ಯ ಸರ್ಕಾರ ರಚಿಸಿರುವ ಹೂಡಿಕೆ ಕಾರ್ಯಪಡೆಯಲ್ಲಿ ಎಫ್ಕೆಸಿಸಿಐಗೆ ಪ್ರಾತಿನಿಧ್ಯ ನೀಡಲು ಮನವಿ ಮಾಡಿಕೊಳ್ಳಲಾಗಿದೆ. ನಮ್ಮ ಕೋರಿಕೆಯನ್ನು ಸರ್ಕಾರ ಇನ್ನೂ ಪರಿಗಣಿಸಿಲ್ಲ. ಈ ವಿಷಯವನ್ನು ಕೈಗಾರಿಕಾ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಗಮನಕ್ಕೆ ತರಲಾಗಿದೆ. ನಮ್ಮ ಬೇಡಿಕೆ ಪರಿಗಣಿಸಲು ಆಗ್ರಹಿಸುತ್ತೇನೆ’ ಎಂದು ಹೇಳಿದ್ದಾರೆ.