<p><strong>ನವದೆಹಲಿ:</strong> ವೇದಾಂತ ಸಮೂಹದ ಬಗ್ಗೆ ಅಮೆರಿಕದ ಶಾರ್ಟ್ ಸೆಲ್ಲರ್ ‘ವೈಸ್ರಾಯ್ ರಿಸರ್ಚ್’ ಸಂಸ್ಥೆ ಸಿದ್ಧಪಡಿಸಿರುವ ವರದಿಯು ವಿಶ್ವಾಸಾರ್ಹತೆಯನ್ನು ಹೊಂದಿಲ್ಲ ಎಂದು ಸುಪ್ರೀಂ ಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಹೇಳಿದ್ದಾರೆ.</p>.<p>ಈ ವರದಿಯ ವಿಚಾರವಾಗಿ ಕಾನೂನಿನ ಅಡಿ ಪರಿಹಾರ ಕ್ರಮಕ್ಕೆ ಮುಂದಾಗಲು ವೇದಾಂತ ಸಮೂಹಕ್ಕೆ ಅವಕಾಶ ಇದೆ ಎಂದು ಅವರು ಅಭಿಪ್ರಾಯ ನೀಡಿದ್ದಾರೆ.</p>.<p>ವೇದಾಂತ ಸಮೂಹವು ‘ನಿರ್ವಹಿಸಲು ಸಾಧ್ಯವಾಗದಂತಹ ಸಾಲದ ನೆಲಗಟ್ಟಿನ ಮೇಲೆ ಇಸ್ಪೀಟಿನ ಎಲೆಗಳಿಂದ ಕಟ್ಟಿರುವ ಮನೆಯಂತೆ ಇದೆ’ ಎಂದು ವೈಸ್ರಾಯ್ ರಿಸರ್ಚ್ ಸಂಸ್ಥೆಯು ವರದಿ ಪ್ರಕಟಿಸಿತ್ತು. ಅಲ್ಲದೆ, ವೈಸ್ರಾಯ್ ರಿಸರ್ಚ್ ಸಂಸ್ಥೆಯು ವೇದಾಂತ ರಿಸೋರ್ಸಸ್ನ ಸಾಲಪತ್ರಗಳನ್ನು ಶಾರ್ಟ್ ಸೆಲ್ಲಿಂಗ್ಗೆ ಸಿದ್ಧಪಡಿಸಿಕೊಂಡಿತ್ತು. ಈ ವರದಿಗೆ ಸಂಬಂಧಿಸಿದಂತೆ ಸ್ವತಂತ್ರವಾದ ಕಾನೂನು ಅಭಿಪ್ರಾಯ ನೀಡಬೇಕು ಎಂದು ವೇದಾಂತ ಸಮೂಹವು ನ್ಯಾಯಮೂರ್ತಿ ಚಂದ್ರಚೂಡ್ ಅವರನ್ನು ಕೋರಿತ್ತು.</p>.<p class="title">‘ಷೇರುಪೇಟೆಯಲ್ಲಿ ನೋಂದಾಯಿತ ಆಗಿರುವ ಕಂಪನಿಗಳ ಷೇರು, ಬಾಂಡ್ಗಳ ಶಾರ್ಟ್ ಸೆಲ್ಲಿಂಗ್ ವಹಿವಾಟಿನಲ್ಲಿ ತೊಡಗಿಕೊಂಡು, ನಂತರ ಅಂತಹ ಕಂಪನಿಗಳ ಬಗ್ಗೆ ತಪ್ಪುದಾರಿಗೆ ಎಳೆಯುವ ವರದಿ ಪ್ರಕಟಿಸಿ, ಅದರಿಂದ ಮಾರುಕಟ್ಟೆಯ ಮೇಲೆ ಆಗುವ ಪರಿಣಾಮದ ಸಂದರ್ಭದಲ್ಲಿ ಅಕ್ರಮವಾಗಿ ಲಾಭ ಮಾಡಿಕೊಳ್ಳುವ ಚರಿತ್ರೆಯು ಈ ಸಂಸ್ಥೆಗೆ ಇದೆ’ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಅಭಿಪ್ರಾಯ ನೀಡಿದ್ದಾರೆ ಎಂದು ವೇದಾಂತ ಸಮೂಹವು ಷೇರುಪೇಟೆಗೆ ಮಾಹಿತಿ ನೀಡಿದೆ. </p>.<p class="title">ವೇದಾಂತ ಸಮೂಹದ ಬಗ್ಗೆ ವೈಸ್ರಾಯ್ ರಿಸರ್ಚ್ ಪ್ರಕಟಿಸಿರುವ ವರದಿಯು ಗಂಭೀರ ಆರೋಪಗಳನ್ನು ಒಳಗೊಂಡಿದೆ, ವೇದಾಂತ ಸಮೂಹದ ವಹಿವಾಟುಗಳಿಗೆ ಹಾಗೂ ಪ್ರತಿಷ್ಠೆಗೆ ಕೆಡುಕು ಉಂಟುಮಾಡುವಂತೆ ಇದೆ ಎಂದು ಅವರು ಅಭಿಪ್ರಾಯ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ವೇದಾಂತ ಸಮೂಹದ ಬಗ್ಗೆ ಅಮೆರಿಕದ ಶಾರ್ಟ್ ಸೆಲ್ಲರ್ ‘ವೈಸ್ರಾಯ್ ರಿಸರ್ಚ್’ ಸಂಸ್ಥೆ ಸಿದ್ಧಪಡಿಸಿರುವ ವರದಿಯು ವಿಶ್ವಾಸಾರ್ಹತೆಯನ್ನು ಹೊಂದಿಲ್ಲ ಎಂದು ಸುಪ್ರೀಂ ಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಹೇಳಿದ್ದಾರೆ.</p>.<p>ಈ ವರದಿಯ ವಿಚಾರವಾಗಿ ಕಾನೂನಿನ ಅಡಿ ಪರಿಹಾರ ಕ್ರಮಕ್ಕೆ ಮುಂದಾಗಲು ವೇದಾಂತ ಸಮೂಹಕ್ಕೆ ಅವಕಾಶ ಇದೆ ಎಂದು ಅವರು ಅಭಿಪ್ರಾಯ ನೀಡಿದ್ದಾರೆ.</p>.<p>ವೇದಾಂತ ಸಮೂಹವು ‘ನಿರ್ವಹಿಸಲು ಸಾಧ್ಯವಾಗದಂತಹ ಸಾಲದ ನೆಲಗಟ್ಟಿನ ಮೇಲೆ ಇಸ್ಪೀಟಿನ ಎಲೆಗಳಿಂದ ಕಟ್ಟಿರುವ ಮನೆಯಂತೆ ಇದೆ’ ಎಂದು ವೈಸ್ರಾಯ್ ರಿಸರ್ಚ್ ಸಂಸ್ಥೆಯು ವರದಿ ಪ್ರಕಟಿಸಿತ್ತು. ಅಲ್ಲದೆ, ವೈಸ್ರಾಯ್ ರಿಸರ್ಚ್ ಸಂಸ್ಥೆಯು ವೇದಾಂತ ರಿಸೋರ್ಸಸ್ನ ಸಾಲಪತ್ರಗಳನ್ನು ಶಾರ್ಟ್ ಸೆಲ್ಲಿಂಗ್ಗೆ ಸಿದ್ಧಪಡಿಸಿಕೊಂಡಿತ್ತು. ಈ ವರದಿಗೆ ಸಂಬಂಧಿಸಿದಂತೆ ಸ್ವತಂತ್ರವಾದ ಕಾನೂನು ಅಭಿಪ್ರಾಯ ನೀಡಬೇಕು ಎಂದು ವೇದಾಂತ ಸಮೂಹವು ನ್ಯಾಯಮೂರ್ತಿ ಚಂದ್ರಚೂಡ್ ಅವರನ್ನು ಕೋರಿತ್ತು.</p>.<p class="title">‘ಷೇರುಪೇಟೆಯಲ್ಲಿ ನೋಂದಾಯಿತ ಆಗಿರುವ ಕಂಪನಿಗಳ ಷೇರು, ಬಾಂಡ್ಗಳ ಶಾರ್ಟ್ ಸೆಲ್ಲಿಂಗ್ ವಹಿವಾಟಿನಲ್ಲಿ ತೊಡಗಿಕೊಂಡು, ನಂತರ ಅಂತಹ ಕಂಪನಿಗಳ ಬಗ್ಗೆ ತಪ್ಪುದಾರಿಗೆ ಎಳೆಯುವ ವರದಿ ಪ್ರಕಟಿಸಿ, ಅದರಿಂದ ಮಾರುಕಟ್ಟೆಯ ಮೇಲೆ ಆಗುವ ಪರಿಣಾಮದ ಸಂದರ್ಭದಲ್ಲಿ ಅಕ್ರಮವಾಗಿ ಲಾಭ ಮಾಡಿಕೊಳ್ಳುವ ಚರಿತ್ರೆಯು ಈ ಸಂಸ್ಥೆಗೆ ಇದೆ’ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಅಭಿಪ್ರಾಯ ನೀಡಿದ್ದಾರೆ ಎಂದು ವೇದಾಂತ ಸಮೂಹವು ಷೇರುಪೇಟೆಗೆ ಮಾಹಿತಿ ನೀಡಿದೆ. </p>.<p class="title">ವೇದಾಂತ ಸಮೂಹದ ಬಗ್ಗೆ ವೈಸ್ರಾಯ್ ರಿಸರ್ಚ್ ಪ್ರಕಟಿಸಿರುವ ವರದಿಯು ಗಂಭೀರ ಆರೋಪಗಳನ್ನು ಒಳಗೊಂಡಿದೆ, ವೇದಾಂತ ಸಮೂಹದ ವಹಿವಾಟುಗಳಿಗೆ ಹಾಗೂ ಪ್ರತಿಷ್ಠೆಗೆ ಕೆಡುಕು ಉಂಟುಮಾಡುವಂತೆ ಇದೆ ಎಂದು ಅವರು ಅಭಿಪ್ರಾಯ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>