<p><strong>ಮುಂಬೈ</strong>: ಸ್ಥಳೀಯ ಮಟ್ಟದಲ್ಲಿ ಜಾರಿಯಲ್ಲಿ ಇದ್ದ ಲಾಕ್ಡೌನ್ ನಿರ್ಬಂಧಗಳನ್ನು ತೆರವುಗೊಳಿಸಿದ ನಂತರದಲ್ಲಿ ಆರ್ಥಿಕ ಪುನಶ್ಚೇತನವು ವೇಗ ಪಡೆದುಕೊಂಡಿದೆ ಎಂದು ರೇಟಿಂಗ್ಸ್ ಏಜೆನ್ಸಿ ಐಸಿಆರ್ಎ ಹೇಳಿದೆ. ಹೀಗಿದ್ದರೂ, ಪುನಶ್ಚೇತನವು ಪೂರ್ಣ ಪ್ರಮಾಣದಲ್ಲಿ ವೇಗಪಡೆದುಕೊಂಡಿಲ್ಲ ಎಂದು ಅದು ಅಭಿಪ್ರಾಯ ವ್ಯಕ್ತಪಡಿಸಿದೆ.</p>.<p>ಏಪ್ರಿಲ್ನಿಂದ ಜೂನ್ವರೆಗಿನ ತ್ರೈಮಾಸಿಕದಲ್ಲಿ ದೇಶದ ಅರ್ಥ ವ್ಯವಸ್ಥೆಯು ಎರಡು ಅಂಕಿಗಳ ಬೆಳವಣಿಗೆ ಸಾಧಿಸಿದೆ. ಆದರೆ ಇದು 2019–20ರ ಮೊದಲ ತ್ರೈಮಾಸಿಕದಲ್ಲಿ ಕಂಡಿದ್ದ ಬೆಳವಣಿಗೆಗೆ ಹೋಲಿಸಿದರೆ ಕಡಿಮೆ ಎಂದು ಅದು ಹೇಳಿದೆ.</p>.<p>ರಾಜ್ಯಗಳ ಮಟ್ಟದಲ್ಲಿ ಜಾರಿಗೆ ಬಂದಿದ್ದ ಲಾಕ್ಡೌನ್ಗಳನ್ನು ಹಂತಹಂತವಾಗಿ ತೆರವು ಮಾಡಲಾಗುತ್ತಿದೆ. ಇದು ಆರ್ಥಿಕ ಚಟುವಟಿಕೆಗಳಲ್ಲಿ ಚೇತರಿಕೆಗೆ ಕಾರಣವಾಗಿದೆ. ಆದರೂ, ಆರ್ಥಿಕ ಆರೋಗ್ಯದ ಪ್ರಮುಖ ಸೂಚಕಗಳ ಮಟ್ಟವು ಕೂವಿಡ್ಗೂ ಮೊದಲಿನ ಸ್ಥಿತಿಗಿಂತ ಕೆಳಗೆ ಇದೆ ಎಂದು ಸಂಸ್ಥೆಯ ವರದಿಯು ಹೇಳಿದೆ.</p>.<p>‘ಆರ್ಥಿಕ ಪುನಶ್ಚೇತನ ಶುರುವಾಗಿದೆ ಎಂಬುದನ್ನು ಆರ್ಥಿಕ ಚಟುವಟಿಕೆಯ ಸೂಚಕಗಳು ಖಚಿತಪಡಿಸಿವೆ. ಆದರೆ, ಪುಶ್ಚೇತನವು ಪೂರ್ತಿ ಪ್ರಮಾಣದಲ್ಲಿ ಆಗುತ್ತಿಲ್ಲ’ ಎಂದು ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ಸ್ಥಳೀಯ ಮಟ್ಟದಲ್ಲಿ ಜಾರಿಯಲ್ಲಿ ಇದ್ದ ಲಾಕ್ಡೌನ್ ನಿರ್ಬಂಧಗಳನ್ನು ತೆರವುಗೊಳಿಸಿದ ನಂತರದಲ್ಲಿ ಆರ್ಥಿಕ ಪುನಶ್ಚೇತನವು ವೇಗ ಪಡೆದುಕೊಂಡಿದೆ ಎಂದು ರೇಟಿಂಗ್ಸ್ ಏಜೆನ್ಸಿ ಐಸಿಆರ್ಎ ಹೇಳಿದೆ. ಹೀಗಿದ್ದರೂ, ಪುನಶ್ಚೇತನವು ಪೂರ್ಣ ಪ್ರಮಾಣದಲ್ಲಿ ವೇಗಪಡೆದುಕೊಂಡಿಲ್ಲ ಎಂದು ಅದು ಅಭಿಪ್ರಾಯ ವ್ಯಕ್ತಪಡಿಸಿದೆ.</p>.<p>ಏಪ್ರಿಲ್ನಿಂದ ಜೂನ್ವರೆಗಿನ ತ್ರೈಮಾಸಿಕದಲ್ಲಿ ದೇಶದ ಅರ್ಥ ವ್ಯವಸ್ಥೆಯು ಎರಡು ಅಂಕಿಗಳ ಬೆಳವಣಿಗೆ ಸಾಧಿಸಿದೆ. ಆದರೆ ಇದು 2019–20ರ ಮೊದಲ ತ್ರೈಮಾಸಿಕದಲ್ಲಿ ಕಂಡಿದ್ದ ಬೆಳವಣಿಗೆಗೆ ಹೋಲಿಸಿದರೆ ಕಡಿಮೆ ಎಂದು ಅದು ಹೇಳಿದೆ.</p>.<p>ರಾಜ್ಯಗಳ ಮಟ್ಟದಲ್ಲಿ ಜಾರಿಗೆ ಬಂದಿದ್ದ ಲಾಕ್ಡೌನ್ಗಳನ್ನು ಹಂತಹಂತವಾಗಿ ತೆರವು ಮಾಡಲಾಗುತ್ತಿದೆ. ಇದು ಆರ್ಥಿಕ ಚಟುವಟಿಕೆಗಳಲ್ಲಿ ಚೇತರಿಕೆಗೆ ಕಾರಣವಾಗಿದೆ. ಆದರೂ, ಆರ್ಥಿಕ ಆರೋಗ್ಯದ ಪ್ರಮುಖ ಸೂಚಕಗಳ ಮಟ್ಟವು ಕೂವಿಡ್ಗೂ ಮೊದಲಿನ ಸ್ಥಿತಿಗಿಂತ ಕೆಳಗೆ ಇದೆ ಎಂದು ಸಂಸ್ಥೆಯ ವರದಿಯು ಹೇಳಿದೆ.</p>.<p>‘ಆರ್ಥಿಕ ಪುನಶ್ಚೇತನ ಶುರುವಾಗಿದೆ ಎಂಬುದನ್ನು ಆರ್ಥಿಕ ಚಟುವಟಿಕೆಯ ಸೂಚಕಗಳು ಖಚಿತಪಡಿಸಿವೆ. ಆದರೆ, ಪುಶ್ಚೇತನವು ಪೂರ್ತಿ ಪ್ರಮಾಣದಲ್ಲಿ ಆಗುತ್ತಿಲ್ಲ’ ಎಂದು ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>