<p><strong>ನವದೆಹಲಿ</strong>: ಎ.ಐ. (ಕೃತಕ ಬುದ್ಧಿಮತ್ತೆ) ಸಂಪರ್ಕವನ್ನು ಬಲಪಡಿಸುವ ಉದ್ದೇಶದಿಂದ ಭಾರತ ಮತ್ತು ಅಮೆರಿಕದ ನಡುವೆ ಸಮುದ್ರದ ಅಡಿಯಲ್ಲಿ ಹೊಸ ಕೇಬಲ್ ಜಾಲ ಅಳವಡಿಕೆ ಮಾಡುವುದಾಗಿ ಗೂಗಲ್ ಕಂಪನಿಯ ಸಿಇಒ ಸುಂದರ್ ಪಿಚೈ ಬುಧವಾರ ಪ್ರಕಟಿಸಿದ್ದಾರೆ.</p>.<p>ಗೂಗಲ್ ಕಂಪನಿಯು ಅಟಲ್ ಟಿಂಕರಿಂಗ್ ಲ್ಯಾಬ್ಗಳ ಜೊತೆ ಪಾಲುದಾರಿಕೆ ಮಾಡಿಕೊಳ್ಳಲಿದ್ದು, 10 ಸಾವಿರಕ್ಕೂ ಹೆಚ್ಚಿನ ಶಾಲೆಗಳ 1.1 ಕೋಟಿ ಮಕ್ಕಳಿಗೆ ಎ.ಐ. ನೆರವು ಒದಗಿಸಲಿದೆ. ತರಗತಿಗಳಲ್ಲಿ ರೊಬೋಟಿಕ್ಸ್ ಮತ್ತು ಕೋಡಿಂಗ್ ಬಗ್ಗೆ ಮಾಹಿತಿ ನೀಡಲಿದೆ.</p>.<p class="bodytext">ಭಾರತ ಮತ್ತು ಅಮೆರಿಕ ನಡುವಿನ ಹೊಸ ಕೇಬಲ್ ಜಾಲವು ಈ ಎರಡು ದೇಶಗಳ ನಡುವೆ ಎ.ಐ ಸಂಪರ್ಕ ಹೆಚ್ಚಿಸುವುದಲ್ಲದೆ, ದಕ್ಷಿಣಾರ್ಧಗೋಳದ ಹಲವು ದೇಶಗಳ ನಡುವೆ ಸಂಪರ್ಕ ಬಲಪಡಿಸುವ ಕೆಲಸವನ್ನೂ ಮಾಡಲಿದೆ.</p>.<p class="bodytext">ಪಿಚೈ ಅವರು ‘ಎ.ಐ ಇಂಪ್ಯಾಕ್ಟ್ ಶೃಂಗಸಭೆ’ಯಲ್ಲಿ ಭಾಗಿಯಾಗಲು ಇಲ್ಲಿಗೆ ಬಂದಿದ್ದಾರೆ. ಈಚೆಗೆ ಘೋಷಿಸಲಾಗಿರುವ, ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ತಲೆ ಎತ್ತಲಿರುವ ಎ.ಐ ಕೇಂದ್ರವು ಒಂದು ಗಿಗಾವಾಟ್ಗಿಂತ ಹೆಚ್ಚಿನ ಸಾಮರ್ಥ್ಯ ಹೊಂದಿರಲಿದೆ ಎಂದು ಹೇಳಿದ್ದಾರೆ. ಈ ಎ.ಐ. ಕೇಂದ್ರಕ್ಕಾಗಿ ಗೂಗಲ್ ಕಂಪನಿಯು ಅಂದಾಜು ₹1.36 ಲಕ್ಷ ಕೋಟಿ ವೆಚ್ಚ ಮಾಡುತ್ತಿದೆ.</p>.<p class="bodytext">ಇದರ ನಿರ್ಮಾಣ ಪೂರ್ಣಗೊಂಡ ನಂತರದಲ್ಲಿ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ, ಅತ್ಯಾಧುನಿಕ ಎ.ಐ ಸೌಲಭ್ಯಗಳು ದೇಶದ ಎಲ್ಲೆಡೆ ಜನರಿಗೆ ಮತ್ತು ಉದ್ದಿಮೆಗಳಿಗೆ ಲಭ್ಯವಾಗಲಿವೆ ಎಂದು ಪಿಚೈ ಹೇಳಿದ್ದಾರೆ.</p>.<p>ಇದರ ಜೊತೆಯಲ್ಲೇ, 800 ಜಿಲ್ಲೆಗಳಲ್ಲಿನ ಎರಡು ಕೋಟಿ ಸರ್ಕಾರಿ ನೌಕರರಿಗೆ 18 ಭಾಷೆಗಳಲ್ಲಿ ನೆರವು ಒದಗಿಸುವ ಸುರಕ್ಷಿತ ಮೂಲಸೌಕರ್ಯ ಕಲ್ಪಿಸುವ ಕೆಲಸವನ್ನು ‘ಗೂಗಲ್ ಕ್ಲೌಡ್’ ಮಾಡಲಿದೆ ಎಂದು ಅವರು ಇಲ್ಲಿ ಮಾಧ್ಯಮ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.</p>.<p class="bodytext">‘ನಮ್ಮ ಜೀವಮಾನದಲ್ಲಿ ಕಾಣುತ್ತಿರುವ ಅತ್ಯಂತ ದೊಡ್ಡದಾದ ಸ್ಥಿತ್ಯಂತರ ಎ.ಐ ಮೂಲಕ ಆಗುತ್ತಿದೆ. ಭಾರತದಂತಹ ದೇಶಗಳಿಗೆ ಇದು ಹೊಸ ಅವಕಾಶಗಳನ್ನು ಸೃಷ್ಟಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ’ ಎಂದಿದ್ದಾರೆ.</p>.<p class="bodytext">ವಿದ್ಯಾರ್ಥಿಗಳು ಹಾಗೂ ವೃತ್ತಿಬದುಕನ್ನು ಪ್ರವೇಶಿಸುತ್ತಿರುವವರನ್ನು ಗುರಿಯಾಗಿಸಿಕೊಂಡ ‘ಗೂಗಲ್ ಎಐ ವೃತ್ತಿಪರ ಪ್ರಮಾಣಪತ್ರ’ ಯೋಜನೆಯನ್ನು ಪಿಚೈ ಅನಾವರಣ ಮಾಡಿದ್ದಾರೆ. </p>.<p><strong>ನೌಕರರಿಗೆ ತರಬೇತಿ</strong></p><p>ಗೂಗಲ್ ಕಂಪನಿಯು ವಿಶೇಷ ಉದ್ದೇಶದ ಘಟಕ (ಎಸ್ಪಿವಿ) ‘ಕರ್ಮ ಯೋಗಿ ಭಾರತ್’ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ಇದರ ಅಡಿಯಲ್ಲಿ ಅದು 800 ಜಿಲ್ಲೆಗಳಲ್ಲಿನ 2 ಕೋಟಿ ಸರ್ಕಾರಿ ನೌಕರರಿಗೆ 18 ಭಾಷೆಗಳಲ್ಲಿ ತರಬೇತಿ ಒದಗಿಸಲಿದೆ.</p>.<p><strong>ಪ್ರಧಾನಿ ಮೋದಿ ಜೊತೆ ಚರ್ಚೆ</strong></p><p>ಸುಂದರ್ ಪಿಚೈ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಬುಧವಾರ ಮಾತುಕತೆ ನಡೆಸಿದರು. ‘ಆರೋಗ್ಯ ಸುಧಾರಣೆ, ಎಲ್ಲ ಭಾಷೆಗಳಲ್ಲಿ ಮಾಹಿತಿ ಲಭ್ಯತೆ ಹೆಚ್ಚಿಸುವುದು, ನವೋದ್ಯಮ ಹಾಗೂ ಕೃಷಿಗೆ ನೆರವು ನೀಡುವುದು ಸೇರಿದಂತೆ ಪ್ರಧಾನಿಯವರ ಇಂತಹ ಹಲವು ಗುರಿಗಳಿಗೆ ಅನುಗುಣವಾಗಿ ಗೂಗಲ್ ಹೇಗೆ ಕೆಲಸ ಮಾಡುತ್ತಿದೆ ಎಂಬುದರ ಬಗ್ಗೆ ನಾವು ಚರ್ಚಿಸಿದೆವು’ ಎಂದು ಪಿಚೈ ಅವರು ಎಕ್ಸ್ ಮೂಲಕ ತಿಳಿಸಿದ್ದಾರೆ.</p><p>ಗೂಗಲ್ ಕಂಪನಿಯು ಒಂದು ದಶಕಕ್ಕೂ ಹೆಚ್ಚಿನ ಅವಧಿಯಿಂದ ಎ.ಐ ಮೇಲೆ ಹೂಡಿಕೆ ಮಾಡುತ್ತಿದೆ... ಎ.ಐ ತಂತ್ರಜ್ಞಾನವು ಜನರು ಗೂಗಲ್ ಶೋಧ ಉಪಕರಣವನ್ನು ಬಳಕೆ ಮಾಡುವ ಬಗೆಯನ್ನು ಬದಲಾಯಿಸುತ್ತಿದೆ. ಗೂಗಲ್ ಮೂಲಕ ಬೇರೆ ಬೇರೆ ವಿಷಯಗಳ ಬಗ್ಗೆ ಹುಡುಕಾಟ ನಡೆಸಿದಾಗ, ಎ.ಐ ನೆರವಿನಿಂದ ನೀಡಲಾಗುವ ಸಂಕ್ಷಿಪ್ತ ವಿವರಗಳು ಕಳೆದ ಒಂದು ದಶಕದ ಅತ್ಯಂತ ಯಶಸ್ವಿ<br>ಉಪಕ್ರಮಗಳಲ್ಲಿ ಒಂದಾಗಿವೆ ಎಂದು ಪಿಚೈ ತಿಳಿಸಿದ್ದಾರೆ.</p><p>‘ಎ.ಐ ಮಾದರಿಯಲ್ಲಿ ಶೋಧ ಸೌಲಭ್ಯವು 35 ಭಾಷೆಗಳಲ್ಲಿ ಲಭ್ಯವಿದೆ, 200 ದೇಶಗಳಲ್ಲಿ ಸಿಗುತ್ತಿದೆ. ಧ್ವನಿ ಮತ್ತು ದೃಶ್ಯ ಆಧಾರಿತ ಶೋಧ ಸೌಲಭ್ಯವನ್ನು ಅಳವಡಿಕೆ ಮಾಡುವಲ್ಲಿ ಭಾರತೀಯರು ಬಹಳ ಮುಂದಿದ್ದಾರೆ... ಮುಂದಿನ ವಾರಗಳಲ್ಲಿ ಧ್ವನಿ ಹಾಗೂ ಕ್ಯಾಮೆರಾ ಮೂಲಕವೂ ಶೋಧ ಸೌಲಭ್ಯವನ್ನು ಬಳಕೆ ಮಾಡಬಹುದು. ಜನ ತಮಗೆ ಕಾಣಿಸುವ ಸಂಗತಿಗಳನ್ನು ತಮ್ಮದೇ ಭಾಷೆಯಲ್ಲಿ ಗೂಗಲ್ ಮೂಲಕ ಹುಡುಕಬಹುದು’ ಎಂದು ಪಿಚೈ ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಎ.ಐ. (ಕೃತಕ ಬುದ್ಧಿಮತ್ತೆ) ಸಂಪರ್ಕವನ್ನು ಬಲಪಡಿಸುವ ಉದ್ದೇಶದಿಂದ ಭಾರತ ಮತ್ತು ಅಮೆರಿಕದ ನಡುವೆ ಸಮುದ್ರದ ಅಡಿಯಲ್ಲಿ ಹೊಸ ಕೇಬಲ್ ಜಾಲ ಅಳವಡಿಕೆ ಮಾಡುವುದಾಗಿ ಗೂಗಲ್ ಕಂಪನಿಯ ಸಿಇಒ ಸುಂದರ್ ಪಿಚೈ ಬುಧವಾರ ಪ್ರಕಟಿಸಿದ್ದಾರೆ.</p>.<p>ಗೂಗಲ್ ಕಂಪನಿಯು ಅಟಲ್ ಟಿಂಕರಿಂಗ್ ಲ್ಯಾಬ್ಗಳ ಜೊತೆ ಪಾಲುದಾರಿಕೆ ಮಾಡಿಕೊಳ್ಳಲಿದ್ದು, 10 ಸಾವಿರಕ್ಕೂ ಹೆಚ್ಚಿನ ಶಾಲೆಗಳ 1.1 ಕೋಟಿ ಮಕ್ಕಳಿಗೆ ಎ.ಐ. ನೆರವು ಒದಗಿಸಲಿದೆ. ತರಗತಿಗಳಲ್ಲಿ ರೊಬೋಟಿಕ್ಸ್ ಮತ್ತು ಕೋಡಿಂಗ್ ಬಗ್ಗೆ ಮಾಹಿತಿ ನೀಡಲಿದೆ.</p>.<p class="bodytext">ಭಾರತ ಮತ್ತು ಅಮೆರಿಕ ನಡುವಿನ ಹೊಸ ಕೇಬಲ್ ಜಾಲವು ಈ ಎರಡು ದೇಶಗಳ ನಡುವೆ ಎ.ಐ ಸಂಪರ್ಕ ಹೆಚ್ಚಿಸುವುದಲ್ಲದೆ, ದಕ್ಷಿಣಾರ್ಧಗೋಳದ ಹಲವು ದೇಶಗಳ ನಡುವೆ ಸಂಪರ್ಕ ಬಲಪಡಿಸುವ ಕೆಲಸವನ್ನೂ ಮಾಡಲಿದೆ.</p>.<p class="bodytext">ಪಿಚೈ ಅವರು ‘ಎ.ಐ ಇಂಪ್ಯಾಕ್ಟ್ ಶೃಂಗಸಭೆ’ಯಲ್ಲಿ ಭಾಗಿಯಾಗಲು ಇಲ್ಲಿಗೆ ಬಂದಿದ್ದಾರೆ. ಈಚೆಗೆ ಘೋಷಿಸಲಾಗಿರುವ, ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ತಲೆ ಎತ್ತಲಿರುವ ಎ.ಐ ಕೇಂದ್ರವು ಒಂದು ಗಿಗಾವಾಟ್ಗಿಂತ ಹೆಚ್ಚಿನ ಸಾಮರ್ಥ್ಯ ಹೊಂದಿರಲಿದೆ ಎಂದು ಹೇಳಿದ್ದಾರೆ. ಈ ಎ.ಐ. ಕೇಂದ್ರಕ್ಕಾಗಿ ಗೂಗಲ್ ಕಂಪನಿಯು ಅಂದಾಜು ₹1.36 ಲಕ್ಷ ಕೋಟಿ ವೆಚ್ಚ ಮಾಡುತ್ತಿದೆ.</p>.<p class="bodytext">ಇದರ ನಿರ್ಮಾಣ ಪೂರ್ಣಗೊಂಡ ನಂತರದಲ್ಲಿ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ, ಅತ್ಯಾಧುನಿಕ ಎ.ಐ ಸೌಲಭ್ಯಗಳು ದೇಶದ ಎಲ್ಲೆಡೆ ಜನರಿಗೆ ಮತ್ತು ಉದ್ದಿಮೆಗಳಿಗೆ ಲಭ್ಯವಾಗಲಿವೆ ಎಂದು ಪಿಚೈ ಹೇಳಿದ್ದಾರೆ.</p>.<p>ಇದರ ಜೊತೆಯಲ್ಲೇ, 800 ಜಿಲ್ಲೆಗಳಲ್ಲಿನ ಎರಡು ಕೋಟಿ ಸರ್ಕಾರಿ ನೌಕರರಿಗೆ 18 ಭಾಷೆಗಳಲ್ಲಿ ನೆರವು ಒದಗಿಸುವ ಸುರಕ್ಷಿತ ಮೂಲಸೌಕರ್ಯ ಕಲ್ಪಿಸುವ ಕೆಲಸವನ್ನು ‘ಗೂಗಲ್ ಕ್ಲೌಡ್’ ಮಾಡಲಿದೆ ಎಂದು ಅವರು ಇಲ್ಲಿ ಮಾಧ್ಯಮ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.</p>.<p class="bodytext">‘ನಮ್ಮ ಜೀವಮಾನದಲ್ಲಿ ಕಾಣುತ್ತಿರುವ ಅತ್ಯಂತ ದೊಡ್ಡದಾದ ಸ್ಥಿತ್ಯಂತರ ಎ.ಐ ಮೂಲಕ ಆಗುತ್ತಿದೆ. ಭಾರತದಂತಹ ದೇಶಗಳಿಗೆ ಇದು ಹೊಸ ಅವಕಾಶಗಳನ್ನು ಸೃಷ್ಟಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ’ ಎಂದಿದ್ದಾರೆ.</p>.<p class="bodytext">ವಿದ್ಯಾರ್ಥಿಗಳು ಹಾಗೂ ವೃತ್ತಿಬದುಕನ್ನು ಪ್ರವೇಶಿಸುತ್ತಿರುವವರನ್ನು ಗುರಿಯಾಗಿಸಿಕೊಂಡ ‘ಗೂಗಲ್ ಎಐ ವೃತ್ತಿಪರ ಪ್ರಮಾಣಪತ್ರ’ ಯೋಜನೆಯನ್ನು ಪಿಚೈ ಅನಾವರಣ ಮಾಡಿದ್ದಾರೆ. </p>.<p><strong>ನೌಕರರಿಗೆ ತರಬೇತಿ</strong></p><p>ಗೂಗಲ್ ಕಂಪನಿಯು ವಿಶೇಷ ಉದ್ದೇಶದ ಘಟಕ (ಎಸ್ಪಿವಿ) ‘ಕರ್ಮ ಯೋಗಿ ಭಾರತ್’ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ಇದರ ಅಡಿಯಲ್ಲಿ ಅದು 800 ಜಿಲ್ಲೆಗಳಲ್ಲಿನ 2 ಕೋಟಿ ಸರ್ಕಾರಿ ನೌಕರರಿಗೆ 18 ಭಾಷೆಗಳಲ್ಲಿ ತರಬೇತಿ ಒದಗಿಸಲಿದೆ.</p>.<p><strong>ಪ್ರಧಾನಿ ಮೋದಿ ಜೊತೆ ಚರ್ಚೆ</strong></p><p>ಸುಂದರ್ ಪಿಚೈ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಬುಧವಾರ ಮಾತುಕತೆ ನಡೆಸಿದರು. ‘ಆರೋಗ್ಯ ಸುಧಾರಣೆ, ಎಲ್ಲ ಭಾಷೆಗಳಲ್ಲಿ ಮಾಹಿತಿ ಲಭ್ಯತೆ ಹೆಚ್ಚಿಸುವುದು, ನವೋದ್ಯಮ ಹಾಗೂ ಕೃಷಿಗೆ ನೆರವು ನೀಡುವುದು ಸೇರಿದಂತೆ ಪ್ರಧಾನಿಯವರ ಇಂತಹ ಹಲವು ಗುರಿಗಳಿಗೆ ಅನುಗುಣವಾಗಿ ಗೂಗಲ್ ಹೇಗೆ ಕೆಲಸ ಮಾಡುತ್ತಿದೆ ಎಂಬುದರ ಬಗ್ಗೆ ನಾವು ಚರ್ಚಿಸಿದೆವು’ ಎಂದು ಪಿಚೈ ಅವರು ಎಕ್ಸ್ ಮೂಲಕ ತಿಳಿಸಿದ್ದಾರೆ.</p><p>ಗೂಗಲ್ ಕಂಪನಿಯು ಒಂದು ದಶಕಕ್ಕೂ ಹೆಚ್ಚಿನ ಅವಧಿಯಿಂದ ಎ.ಐ ಮೇಲೆ ಹೂಡಿಕೆ ಮಾಡುತ್ತಿದೆ... ಎ.ಐ ತಂತ್ರಜ್ಞಾನವು ಜನರು ಗೂಗಲ್ ಶೋಧ ಉಪಕರಣವನ್ನು ಬಳಕೆ ಮಾಡುವ ಬಗೆಯನ್ನು ಬದಲಾಯಿಸುತ್ತಿದೆ. ಗೂಗಲ್ ಮೂಲಕ ಬೇರೆ ಬೇರೆ ವಿಷಯಗಳ ಬಗ್ಗೆ ಹುಡುಕಾಟ ನಡೆಸಿದಾಗ, ಎ.ಐ ನೆರವಿನಿಂದ ನೀಡಲಾಗುವ ಸಂಕ್ಷಿಪ್ತ ವಿವರಗಳು ಕಳೆದ ಒಂದು ದಶಕದ ಅತ್ಯಂತ ಯಶಸ್ವಿ<br>ಉಪಕ್ರಮಗಳಲ್ಲಿ ಒಂದಾಗಿವೆ ಎಂದು ಪಿಚೈ ತಿಳಿಸಿದ್ದಾರೆ.</p><p>‘ಎ.ಐ ಮಾದರಿಯಲ್ಲಿ ಶೋಧ ಸೌಲಭ್ಯವು 35 ಭಾಷೆಗಳಲ್ಲಿ ಲಭ್ಯವಿದೆ, 200 ದೇಶಗಳಲ್ಲಿ ಸಿಗುತ್ತಿದೆ. ಧ್ವನಿ ಮತ್ತು ದೃಶ್ಯ ಆಧಾರಿತ ಶೋಧ ಸೌಲಭ್ಯವನ್ನು ಅಳವಡಿಕೆ ಮಾಡುವಲ್ಲಿ ಭಾರತೀಯರು ಬಹಳ ಮುಂದಿದ್ದಾರೆ... ಮುಂದಿನ ವಾರಗಳಲ್ಲಿ ಧ್ವನಿ ಹಾಗೂ ಕ್ಯಾಮೆರಾ ಮೂಲಕವೂ ಶೋಧ ಸೌಲಭ್ಯವನ್ನು ಬಳಕೆ ಮಾಡಬಹುದು. ಜನ ತಮಗೆ ಕಾಣಿಸುವ ಸಂಗತಿಗಳನ್ನು ತಮ್ಮದೇ ಭಾಷೆಯಲ್ಲಿ ಗೂಗಲ್ ಮೂಲಕ ಹುಡುಕಬಹುದು’ ಎಂದು ಪಿಚೈ ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>