‘ಭಾರತವು ಬಲಿಷ್ಠವಾಗಿರಬೇಕು ಎಂದು ನಾವು ಬಯಸುತ್ತೇವೆ. ಆರ್ಥಿಕವಾಗಿ ಶಕ್ತಿಶಾಲಿ ಸ್ಥಾನದಿಂದ ಭಾರತವು ಮಾತನಾಡಬೇಕು ಎಂದು ನಾವು ಆಶಿಸುತ್ತೇವೆ’ ಎಂದರು. ಸ್ಪರ್ಧಾತ್ಮಕತೆಯನ್ನು ಉತ್ತೇಜಿಸುವ ಉದ್ದೇಶದಿಂದ ಅರ್ಥವ್ಯವಸ್ಥೆಯ ಬಹುತೇಕ ಎಲ್ಲ ವಲಯಗಳಲ್ಲೂ ಖಾಸಗಿ ರಂಗದವರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ ನಿರ್ಮಲಾ, ‘ಯಾವುದೇ ಆರ್ಥಿಕ ಕ್ಷೇತ್ರವು ಸರ್ಕಾರಕ್ಕೆ ಮಾತ್ರವೇ ಮೀಸಲು ಆಗಿರುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.