‘ಶೇಖರಣೆ ಸಮಸ್ಯೆ ಹಾಗೂ ಪೂರೈಕೆ ಕೊರತೆಯಿಂದಾಗಿ ಈರುಳ್ಳಿ ಬೆಲೆಯಲ್ಲಿ ಏರಿಳಿತ ಸಹಜ. ಹಾಗಾಗಿ, ದೀರ್ಘಕಾಲದವರೆಗೆ ಕೆಡದಂತೆ ಇಡಲು ಹಾಗೂ ಶೇಖರಣೆ ಸಂದರ್ಭದಲ್ಲಿನ ನಷ್ಟ ತಪ್ಪಿಸಲು ವಿಕಿರಣ ತಂತ್ರಜ್ಞಾನ ನೆರವಾಗಲಿದೆ. ಈರುಳ್ಳಿ ಸಂಗ್ರಹಿಸಲು ಈ ತಂತ್ರಜ್ಞಾನ ಅಳವಡಿಸಿಕೊಂಡಿರುವ 50 ಶೈತ್ಯಾಗಾರಗಳನ್ನು ಗುರುತಿಸಲಾಗಿದೆ’ ಎಂದು ಸಚಿವಾಲಯದ ಕಾರ್ಯದರ್ಶಿ ನಿಧಿ ಖರೆ ಅವರು, ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.