ನವದೆಹಲಿ: ಪ್ರಧಾನ ಮಂತ್ರಿ ಫಸಲು ವಿಮಾ ಯೋಜನೆಯು (ಪಿಎಂಎಫ್ಬಿವೈ) ಏಳನೆಯ ವರ್ಷಕ್ಕೆ ಕಾಲಿಡುತ್ತಿದ್ದು, ಮುಂಬರುವ ಮುಂಗಾರು ಅವಧಿಯಲ್ಲಿ ವಿಮಾ ಪಾಲಿಸಿಗಳನ್ನು ರೈತರ ಮನೆಬಾಗಿಲಿಗೆ ತಲುಪಿಸುವ ಅಭಿಯಾನವನ್ನು ಕೇಂದ್ರ ಸರ್ಕಾರ ಆರಂಭಿಸಲಿದೆ.
ಪಾಲಿಸಿಯ ವಿವರ, ಜಮೀನಿನ ದಾಖಲೆಗಳು, ಕ್ಲೇಮ್ ಪ್ರಕ್ರಿಯೆ ಮತ್ತು ದೂರು ಹೇಳಿಕೊಳ್ಳುವ ಬಗ್ಗೆ ಎಲ್ಲ ರೈತರಿಗೂ ಗೊತ್ತಿರಬೇಕು ಎಂಬ ಉದ್ದೇಶವು ‘ಮೇರಿ ಪಾಲಿಸಿ ಮೇರಿ ಹಾಥ್’ ಹೆಸರಿನ ಈ ಅಭಿಯಾನಕ್ಕೆ ಇದೆ ಎಂದು ಕೇಂದ್ರ ಕೃಷಿ ಸಚಿವಾಲಯ ಹೇಳಿದೆ.
ಯೋಜನೆಯು ಜಾರಿಯಲ್ಲಿ ಇರುವ ಎಲ್ಲ ರಾಜ್ಯಗಳಲ್ಲಿಯೂ ಈ ಅಭಿಯಾನ ಆರಂಭವಾಗಲಿದೆ.