<p><strong>ನಾಗ್ಪುರ: </strong>ದೇಶದಲ್ಲಿ ಹಸಿರು ಇಂಧನ ಬಳಕೆಗೆ ಉತ್ತೇಜನ ಸಿಗುತ್ತಿದ್ದು, ಐದು ವರ್ಷಗಳ ಬಳಿಕ ದೇಶದಲ್ಲಿ ಪೆಟ್ರೋಲ್ ಬಳಕೆಯೇ ನಿಲ್ಲಲಿದೆ. ಪೆಟ್ರೋಲ್ ಸ್ಥಾನವನ್ನು ಹಸಿರು ಇಂಧನ ತುಂಬಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿಹೇಳಿದ್ದಾರೆ.</p>.<p>ಮಹಾರಾಷ್ಟ್ರದ ಅಕೋಲಾದಲ್ಲಿ ಈ ಕುರಿತು ಮಾತನಾಡಿರುವ ಗಡ್ಕರಿ, ಐದು ವರ್ಷಗಳ ಬಳಿಕ ರಾಷ್ಟ್ರದಲ್ಲಿ ಪೆಟ್ರೋಲ್ ನಿಂತು ಹೋಗಲಿದೆ ಎಂದು ನಾನು ಆತ್ಮವಿಶ್ವಾಸದಿಂದ ಹೇಳಬಲ್ಲೆ. ನಿಮ್ಮ ಕಾರುಗಳು-ಸ್ಕೂಟರ್ಗಳು ಹಸಿರು ಹೈಡ್ರೋಜನ್, ಎಥಾನಲ್ ಫ್ಲೆಕ್ಸ್ ಇಂಧನ, ಸಿಎನ್ಜಿ ಅಥವಾ ಎನ್ಎನ್ಜಿಯಲ್ಲಿ ಚಲಿಸಲಿವೆ ಎಂದು ಹೇಳಿದ್ದಾರೆ.</p>.<p>ಇದನ್ನೂ ಓದಿ:<a href="https://www.prajavani.net/business/commerce-news/inflation-may-ease-gradually-in-second-half-of-fiscal-says-rbi-governor-das-952809.html" itemprop="url">ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಹಣದುಬ್ಬರ ಇಳಿಕೆ: ದಾಸ್ </a></p>.<p>ಮುಂದಿನ ಐದು ವರ್ಷಗಳಲ್ಲಿ ಕೃಷಿ ಬೆಳವಣಿಗೆಯನ್ನು ಶೇಕಡ 12ರಿಂದ 20ಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಕೃಷಿ ಸಂಶೋಧಕರು ಹಾಗೂ ತಜ್ಞರಿಗೆ ಗಡ್ಕರಿ ಸಲಹೆ ಮಾಡಿದರು.<br /><br />ಮಹಾರಾಷ್ಟ್ರದ ರೈತರು ಅತ್ಯಂತ ಪ್ರತಿಭಾವಂತರು. ಅವರಿಗೆ ಹೊಸ ಸಂಶೋಧನೆ ಹಾಗೂ ತಂತ್ರಜ್ಞಾನದೊಂದಿಗೆ ಮಾರ್ಗದರ್ಶನ ನೀಡುವ ಅಗತ್ಯತೆಯ ಬಗ್ಗೆಯೂ ಪ್ರತಿಪಾದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗ್ಪುರ: </strong>ದೇಶದಲ್ಲಿ ಹಸಿರು ಇಂಧನ ಬಳಕೆಗೆ ಉತ್ತೇಜನ ಸಿಗುತ್ತಿದ್ದು, ಐದು ವರ್ಷಗಳ ಬಳಿಕ ದೇಶದಲ್ಲಿ ಪೆಟ್ರೋಲ್ ಬಳಕೆಯೇ ನಿಲ್ಲಲಿದೆ. ಪೆಟ್ರೋಲ್ ಸ್ಥಾನವನ್ನು ಹಸಿರು ಇಂಧನ ತುಂಬಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿಹೇಳಿದ್ದಾರೆ.</p>.<p>ಮಹಾರಾಷ್ಟ್ರದ ಅಕೋಲಾದಲ್ಲಿ ಈ ಕುರಿತು ಮಾತನಾಡಿರುವ ಗಡ್ಕರಿ, ಐದು ವರ್ಷಗಳ ಬಳಿಕ ರಾಷ್ಟ್ರದಲ್ಲಿ ಪೆಟ್ರೋಲ್ ನಿಂತು ಹೋಗಲಿದೆ ಎಂದು ನಾನು ಆತ್ಮವಿಶ್ವಾಸದಿಂದ ಹೇಳಬಲ್ಲೆ. ನಿಮ್ಮ ಕಾರುಗಳು-ಸ್ಕೂಟರ್ಗಳು ಹಸಿರು ಹೈಡ್ರೋಜನ್, ಎಥಾನಲ್ ಫ್ಲೆಕ್ಸ್ ಇಂಧನ, ಸಿಎನ್ಜಿ ಅಥವಾ ಎನ್ಎನ್ಜಿಯಲ್ಲಿ ಚಲಿಸಲಿವೆ ಎಂದು ಹೇಳಿದ್ದಾರೆ.</p>.<p>ಇದನ್ನೂ ಓದಿ:<a href="https://www.prajavani.net/business/commerce-news/inflation-may-ease-gradually-in-second-half-of-fiscal-says-rbi-governor-das-952809.html" itemprop="url">ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಹಣದುಬ್ಬರ ಇಳಿಕೆ: ದಾಸ್ </a></p>.<p>ಮುಂದಿನ ಐದು ವರ್ಷಗಳಲ್ಲಿ ಕೃಷಿ ಬೆಳವಣಿಗೆಯನ್ನು ಶೇಕಡ 12ರಿಂದ 20ಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಕೃಷಿ ಸಂಶೋಧಕರು ಹಾಗೂ ತಜ್ಞರಿಗೆ ಗಡ್ಕರಿ ಸಲಹೆ ಮಾಡಿದರು.<br /><br />ಮಹಾರಾಷ್ಟ್ರದ ರೈತರು ಅತ್ಯಂತ ಪ್ರತಿಭಾವಂತರು. ಅವರಿಗೆ ಹೊಸ ಸಂಶೋಧನೆ ಹಾಗೂ ತಂತ್ರಜ್ಞಾನದೊಂದಿಗೆ ಮಾರ್ಗದರ್ಶನ ನೀಡುವ ಅಗತ್ಯತೆಯ ಬಗ್ಗೆಯೂ ಪ್ರತಿಪಾದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>