<p><strong>ನವದೆಹಲಿ:</strong> ದೇಶದಲ್ಲಿ 10 ಕೋಟಿ ಬ್ಯಾರಲ್ನಷ್ಟು ಕಚ್ಚಾ ತೈಲದ ದಾಸ್ತಾನು ಇದೆ. ಹೊರ್ಮುಜ್ ಜಲಸಂಧಿಯಲ್ಲಿ ತೈಲ ಸಾಗಣೆಗೆ ಅಡ್ಡಿ ಉಂಟಾದರೆ, ಈ ದಾಸ್ತಾನು ಮುಂದಿನ 40ರಿಂದ 45 ದಿನಗಳವರೆಗೆ ದೇಶದ ತೈಲದ ಅಗತ್ಯವನ್ನು ಪೂರೈಸಬಹುದು ಎಂದು ಜಾಗತಿಕ ವ್ಯಾಪಾರ ವಿಶ್ಲೇಷಕ ಸಂಸ್ಥೆ ಕೆಫ್ಲೆರ್ ತಿಳಿಸಿದೆ.</p>.<p>ಭಾರತವು ತನ್ನ ಅಗತ್ಯವಿರುವ ಕಚ್ಚಾ ತೈಲದ ಪೈಕಿ ಶೇ 88ರಷ್ಟು ಆಮದು ಮಾಡಿಕೊಳ್ಳುತ್ತದೆ. ಈ ಪೈಕಿ, ಪಶ್ಚಿಮ ಏಷ್ಯಾದ ದೇಶಗಳಿಂದ ಶೇ 50ರಷ್ಟು ತೈಲ ಪೂರೈಕೆ ಆಗುತ್ತಿದ್ದು, ಹೊರ್ಮುಜ್ ಜಲಸಂಧಿಯ ಮೂಲಕವೇ ಸಾಗಣೆ ಆಗುತ್ತಿದೆ. </p>.<p>‘ಈ ಮಾರ್ಗದಲ್ಲಿ ಕಚ್ಚಾ ತೈಲ ಪೂರೈಕೆ ತಾತ್ಕಾಲಿಕವಾಗಿ ಸ್ಥಗಿತಗೊಂಡರೆ, ಸಾಗಣೆ ಮೇಲೆ ಪರಿಣಾಮ ಬೀರಲಿದೆ. ದೀರ್ಘಾವಧಿವರೆಗೆ ಜಲಸಂಧಿಯಲ್ಲಿ ಸಂಚಾರ ಸ್ಥಗಿತವಾದರೆ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದ್ದು, ತೈಲ ಬೆಲೆ ಏರಿಕೆ ಆಗಬಹುದು’ ಎಂದು ಕೆಫ್ಲೆರ್ನ ಸಂಶೋಧನಾ ವಿಶ್ಲೇಷಕ (ಸಂಸ್ಕರಣೆ ಮತ್ತು ಮಾಡೆಲಿಂಗ್)<br>ಸುಮಿತ್ ರಿತೋಲಿಯಾ ಹೇಳಿದ್ದಾರೆ. </p>.<p>ಹೊರ್ಮುಜ್ ಜಲಸಂಧಿ ಮುಚ್ಚುವುದರಿಂದ ಆರಂಭದಲ್ಲಿ ಪರಿಣಾಮ ಬೀರುವುದು ಸರಕು ಸಾಗಣೆ ಮೇಲೆ. ಆದಾಗ್ಯೂ, ದೇಶದ ತೈಲ ಸಂಸ್ಕರಣಾಗಾರಗಳು ತೈಲದ ದಾಸ್ತಾನು ಹೊಂದಿದ್ದು, ಈಗಾಗಲೇ ತೈಲ ತುಂಬಿರುವ ಹಡಗುಗಳು ಸಹ ದೇಶಕ್ಕೆ ಬರುತ್ತಿವೆ ಎಂದು ತಿಳಿಸಿದ್ದಾರೆ.</p>.<p>ಹೊರ್ಮುಜ್ ಜಲಸಂಧಿಯ ಮೂಲಕ ಪ್ರತಿನಿತ್ಯ ಸರಾಸರಿ 25 ಲಕ್ಷ ಬ್ಯಾರಲ್ ಕಚ್ಚಾ ತೈಲ ಆಮದಾಗುತ್ತದೆ. 2024–25ರ ಆರ್ಥಿಕ ವರ್ಷದಲ್ಲಿ ದೇಶವು ಕಚ್ಚಾ ತೈಲ ಆಮದಿಗೆ ₹12.61 ಲಕ್ಷ ಕೋಟಿಯಷ್ಟು ವ್ಯಯಿಸಿದೆ. ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್ನಿಂದ ಜನವರಿವರೆಗೆ 20.6 ಕೋಟಿ ಟನ್ ಕಚ್ಚಾ ತೈಲ ಆಮದಾಗಿದೆ. ಇದಕ್ಕಾಗಿ ₹9.24 ಲಕ್ಷ ಕೋಟಿ ಖರ್ಚು ಮಾಡಿದೆ.</p>.<p>ಭಾರತವು ವಿಶ್ವದಲ್ಲಿಯೇ ಮೂರನೇ ಅತಿದೊಡ್ಡ ತೈಲ ಆಮದು ರಾಷ್ಟ್ರವಾಗಿದೆ. ಕತಾರ್ನಲ್ಲಿರುವ ದ್ರವೀಕೃತ ನೈಸರ್ಗಿಕ ಅನಿಲ (ಎಲ್ಎನ್ಜಿ) ಪೂರೈಕೆದಾರರೂ ಸಹ ಭಾರತಕ್ಕೆ ತೈಲವನ್ನು ಸಾಗಿಸಲು ಈ ಜಲಸಂಧಿಯನ್ನೇ ಬಳಸುತ್ತಾರೆ ಎಂದು ಹೇಳಿದೆ.</p>.<p>ಒಂದು ವೇಳೆ ಹೊರ್ಮುಜ್ ಜಲಸಂಧಿ ಮುಚ್ಚಿದರೆ, ಭಾರತವು ಪಶ್ಚಿಮ ಆಫ್ರಿಕಾ, ಲ್ಯಾಟಿನ್ ಅಮೆರಿಕ ಮತ್ತು ಅಮೆರಿಕದಿಂದ ಆಮದು ಮಾಡಿಕೊಳ್ಳುತ್ತದೆ. ಕೊರತೆಯನ್ನು ಸರಿದೂಗಿಸಲು ರಷ್ಯಾದಿಂದಲೂ ಸಹ ಭಾರತ ಆಮದು ಮಾಡಿಕೊಳ್ಳಬಹುದು.</p>.<p>2024–25ರಲ್ಲಿ ಭಾರತವು 2.37 ಕೋಟಿ ಟನ್ನಷ್ಟು ಪೆಟ್ರೋಲಿಯಂ ಉತ್ಪನ್ನಗಳನ್ನು ರಫ್ತು ಮಾಡಿತ್ತು. ಇದು ದೇಶದ ಒಟ್ಟು ಇಂಧನ ಬಳಕೆಯಲ್ಲಿ ಶೇ 10ರಷ್ಟು. ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್ನಿಂದ ಜನವರಿವರೆಗೆ 5.33 ಕೋಟಿ ಟನ್ ರಫ್ತು ಮಾಡಿದೆ ಎಂದು ತಿಳಿಸಿದೆ. </p>.<p><strong>ಎಂಟು ವಾರಕ್ಕೆ ಸಾಕಾಗುವಷ್ಟು ಇಂಧನ</strong></p><p><strong>ನವದೆಹಲಿ:</strong> ದೇಶದಲ್ಲಿ ಮುಂದಿನ ಆರರಿಂದ ಎಂಟು ವಾರಗಳಿಗೆ ಸಾಕಾಗುವಷ್ಟು ಪೆಟ್ರೋಲ್, ಡೀಸೆಲ್ ಮತ್ತು ಇತರೆ ಇಂಧನ ದಾಸ್ತಾನು ಇದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>ತೈಲ ದಾಸ್ತಾನು ಟ್ಯಾಂಕ್ಗಳು, ಪೈಪ್ಲೈನ್ಗಳು ಮತ್ತು ದೇಶಕ್ಕೆ ಬರುತ್ತಿರುವ ಹಡಗುಗಳಲ್ಲಿನ ತೈಲವು ದೇಶದ 25 ದಿನಗಳ ಅಗತ್ಯವನ್ನು ಪೂರೈಸಲಿದೆ. ಸಂಸ್ಕರಣಾಗಾರಗಳು, ಸಂಗ್ರಹ ಮತ್ತು ಇತರೆ ದಾಸ್ತಾನು ಘಟಕಗಳಲ್ಲಿ ಇಷ್ಟೇ ದಿನಗಳಿಗೆ ಆಗುವಷ್ಟು ಇಂಧನದ ದಾಸ್ತಾನು ಇದೆ ಎಂದು ಹೇಳಿದ್ದಾರೆ.</p>.<p>ದೇಶದಲ್ಲಿ ತಕ್ಷಣಕ್ಕೆ ತೈಲ ಕೊರೆತೆ ಉಂಟಾಗುವ ಸಾಧ್ಯತೆ ಇಲ್ಲ. ಕಚ್ಚಾ ತೈಲದ ಬೆಲೆ ಏರಿಕೆ, ಸಾಗಣೆ ಮತ್ತು ವಿಮಾ ವೆಚ್ಚದಲ್ಲಿನ ಹೆಚ್ಚಳವು ದೇಶದ ಆಮದು ಮತ್ತು ಹಣದುಬ್ಬರದ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದ್ದಾರೆ.</p>.<p>‘ದೇಶದಲ್ಲಿ ಕಚ್ಚಾ ತೈಲ, ಪೆಟ್ರೋಲ್, ಡೀಸೆಲ್ ಮತ್ತು ವಿಮಾನ ಇಂಧನ (ಎಟಿಎಫ್) ದಾಸ್ತಾನು ಪ್ರಮಾಣ ಉತ್ತಮ ಸ್ಥಿತಿಯಲ್ಲಿದೆ’ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. ಆದರೆ, ದಾಸ್ತಾನು ಎಷ್ಟಿದೆ ಎಂದು ತಿಳಿಸಿಲ್ಲ.</p>.<p>ದೇಶಾದ್ಯಂತ ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆ ಮತ್ತು ದಾಸ್ತಾನು ಸ್ಥಿತಿಯ ಮೇಲೆ ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಸಚಿವಾಲಯವು 24×7 ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ ಎಂದು ಹೇಳಿದ್ದಾರೆ.</p>.<p><strong>ಕಚ್ಚಾ ತೈಲ ದರ ಏರಿಕೆ</strong></p><p><strong>ಲಂಡನ್:</strong> ಬ್ರೆಂಟ್ ಕಚ್ಚಾ ತೈಲ ದರವು ಮಂಗಳವಾರದ ವಹಿವಾಟಿನಲ್ಲಿ ಶೇ 8ರಷ್ಟು ಏರಿಕೆಯಾಗಿದ್ದು, ಪ್ರತೀ ಬ್ಯಾರಲ್ ದರವು 85.12 ಡಾಲರ್ಗೆ ತಲುಪಿದೆ. ಇದು 2024ರ ಜುಲೈ ಬಳಿಕ ದಾಖಲಾದ ಗರಿಷ್ಠ ಏರಿಕೆ ಆಗಿದೆ.</p>.<p>ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ದರವು ಶೇ 7ರಷ್ಟು ಹೆಚ್ಚಾಗಿ, ಪ್ರತೀ ಬ್ಯಾರಲ್ 76.47 ಡಾಲರ್ ಆಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ದೇಶದಲ್ಲಿ 10 ಕೋಟಿ ಬ್ಯಾರಲ್ನಷ್ಟು ಕಚ್ಚಾ ತೈಲದ ದಾಸ್ತಾನು ಇದೆ. ಹೊರ್ಮುಜ್ ಜಲಸಂಧಿಯಲ್ಲಿ ತೈಲ ಸಾಗಣೆಗೆ ಅಡ್ಡಿ ಉಂಟಾದರೆ, ಈ ದಾಸ್ತಾನು ಮುಂದಿನ 40ರಿಂದ 45 ದಿನಗಳವರೆಗೆ ದೇಶದ ತೈಲದ ಅಗತ್ಯವನ್ನು ಪೂರೈಸಬಹುದು ಎಂದು ಜಾಗತಿಕ ವ್ಯಾಪಾರ ವಿಶ್ಲೇಷಕ ಸಂಸ್ಥೆ ಕೆಫ್ಲೆರ್ ತಿಳಿಸಿದೆ.</p>.<p>ಭಾರತವು ತನ್ನ ಅಗತ್ಯವಿರುವ ಕಚ್ಚಾ ತೈಲದ ಪೈಕಿ ಶೇ 88ರಷ್ಟು ಆಮದು ಮಾಡಿಕೊಳ್ಳುತ್ತದೆ. ಈ ಪೈಕಿ, ಪಶ್ಚಿಮ ಏಷ್ಯಾದ ದೇಶಗಳಿಂದ ಶೇ 50ರಷ್ಟು ತೈಲ ಪೂರೈಕೆ ಆಗುತ್ತಿದ್ದು, ಹೊರ್ಮುಜ್ ಜಲಸಂಧಿಯ ಮೂಲಕವೇ ಸಾಗಣೆ ಆಗುತ್ತಿದೆ. </p>.<p>‘ಈ ಮಾರ್ಗದಲ್ಲಿ ಕಚ್ಚಾ ತೈಲ ಪೂರೈಕೆ ತಾತ್ಕಾಲಿಕವಾಗಿ ಸ್ಥಗಿತಗೊಂಡರೆ, ಸಾಗಣೆ ಮೇಲೆ ಪರಿಣಾಮ ಬೀರಲಿದೆ. ದೀರ್ಘಾವಧಿವರೆಗೆ ಜಲಸಂಧಿಯಲ್ಲಿ ಸಂಚಾರ ಸ್ಥಗಿತವಾದರೆ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದ್ದು, ತೈಲ ಬೆಲೆ ಏರಿಕೆ ಆಗಬಹುದು’ ಎಂದು ಕೆಫ್ಲೆರ್ನ ಸಂಶೋಧನಾ ವಿಶ್ಲೇಷಕ (ಸಂಸ್ಕರಣೆ ಮತ್ತು ಮಾಡೆಲಿಂಗ್)<br>ಸುಮಿತ್ ರಿತೋಲಿಯಾ ಹೇಳಿದ್ದಾರೆ. </p>.<p>ಹೊರ್ಮುಜ್ ಜಲಸಂಧಿ ಮುಚ್ಚುವುದರಿಂದ ಆರಂಭದಲ್ಲಿ ಪರಿಣಾಮ ಬೀರುವುದು ಸರಕು ಸಾಗಣೆ ಮೇಲೆ. ಆದಾಗ್ಯೂ, ದೇಶದ ತೈಲ ಸಂಸ್ಕರಣಾಗಾರಗಳು ತೈಲದ ದಾಸ್ತಾನು ಹೊಂದಿದ್ದು, ಈಗಾಗಲೇ ತೈಲ ತುಂಬಿರುವ ಹಡಗುಗಳು ಸಹ ದೇಶಕ್ಕೆ ಬರುತ್ತಿವೆ ಎಂದು ತಿಳಿಸಿದ್ದಾರೆ.</p>.<p>ಹೊರ್ಮುಜ್ ಜಲಸಂಧಿಯ ಮೂಲಕ ಪ್ರತಿನಿತ್ಯ ಸರಾಸರಿ 25 ಲಕ್ಷ ಬ್ಯಾರಲ್ ಕಚ್ಚಾ ತೈಲ ಆಮದಾಗುತ್ತದೆ. 2024–25ರ ಆರ್ಥಿಕ ವರ್ಷದಲ್ಲಿ ದೇಶವು ಕಚ್ಚಾ ತೈಲ ಆಮದಿಗೆ ₹12.61 ಲಕ್ಷ ಕೋಟಿಯಷ್ಟು ವ್ಯಯಿಸಿದೆ. ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್ನಿಂದ ಜನವರಿವರೆಗೆ 20.6 ಕೋಟಿ ಟನ್ ಕಚ್ಚಾ ತೈಲ ಆಮದಾಗಿದೆ. ಇದಕ್ಕಾಗಿ ₹9.24 ಲಕ್ಷ ಕೋಟಿ ಖರ್ಚು ಮಾಡಿದೆ.</p>.<p>ಭಾರತವು ವಿಶ್ವದಲ್ಲಿಯೇ ಮೂರನೇ ಅತಿದೊಡ್ಡ ತೈಲ ಆಮದು ರಾಷ್ಟ್ರವಾಗಿದೆ. ಕತಾರ್ನಲ್ಲಿರುವ ದ್ರವೀಕೃತ ನೈಸರ್ಗಿಕ ಅನಿಲ (ಎಲ್ಎನ್ಜಿ) ಪೂರೈಕೆದಾರರೂ ಸಹ ಭಾರತಕ್ಕೆ ತೈಲವನ್ನು ಸಾಗಿಸಲು ಈ ಜಲಸಂಧಿಯನ್ನೇ ಬಳಸುತ್ತಾರೆ ಎಂದು ಹೇಳಿದೆ.</p>.<p>ಒಂದು ವೇಳೆ ಹೊರ್ಮುಜ್ ಜಲಸಂಧಿ ಮುಚ್ಚಿದರೆ, ಭಾರತವು ಪಶ್ಚಿಮ ಆಫ್ರಿಕಾ, ಲ್ಯಾಟಿನ್ ಅಮೆರಿಕ ಮತ್ತು ಅಮೆರಿಕದಿಂದ ಆಮದು ಮಾಡಿಕೊಳ್ಳುತ್ತದೆ. ಕೊರತೆಯನ್ನು ಸರಿದೂಗಿಸಲು ರಷ್ಯಾದಿಂದಲೂ ಸಹ ಭಾರತ ಆಮದು ಮಾಡಿಕೊಳ್ಳಬಹುದು.</p>.<p>2024–25ರಲ್ಲಿ ಭಾರತವು 2.37 ಕೋಟಿ ಟನ್ನಷ್ಟು ಪೆಟ್ರೋಲಿಯಂ ಉತ್ಪನ್ನಗಳನ್ನು ರಫ್ತು ಮಾಡಿತ್ತು. ಇದು ದೇಶದ ಒಟ್ಟು ಇಂಧನ ಬಳಕೆಯಲ್ಲಿ ಶೇ 10ರಷ್ಟು. ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್ನಿಂದ ಜನವರಿವರೆಗೆ 5.33 ಕೋಟಿ ಟನ್ ರಫ್ತು ಮಾಡಿದೆ ಎಂದು ತಿಳಿಸಿದೆ. </p>.<p><strong>ಎಂಟು ವಾರಕ್ಕೆ ಸಾಕಾಗುವಷ್ಟು ಇಂಧನ</strong></p><p><strong>ನವದೆಹಲಿ:</strong> ದೇಶದಲ್ಲಿ ಮುಂದಿನ ಆರರಿಂದ ಎಂಟು ವಾರಗಳಿಗೆ ಸಾಕಾಗುವಷ್ಟು ಪೆಟ್ರೋಲ್, ಡೀಸೆಲ್ ಮತ್ತು ಇತರೆ ಇಂಧನ ದಾಸ್ತಾನು ಇದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>ತೈಲ ದಾಸ್ತಾನು ಟ್ಯಾಂಕ್ಗಳು, ಪೈಪ್ಲೈನ್ಗಳು ಮತ್ತು ದೇಶಕ್ಕೆ ಬರುತ್ತಿರುವ ಹಡಗುಗಳಲ್ಲಿನ ತೈಲವು ದೇಶದ 25 ದಿನಗಳ ಅಗತ್ಯವನ್ನು ಪೂರೈಸಲಿದೆ. ಸಂಸ್ಕರಣಾಗಾರಗಳು, ಸಂಗ್ರಹ ಮತ್ತು ಇತರೆ ದಾಸ್ತಾನು ಘಟಕಗಳಲ್ಲಿ ಇಷ್ಟೇ ದಿನಗಳಿಗೆ ಆಗುವಷ್ಟು ಇಂಧನದ ದಾಸ್ತಾನು ಇದೆ ಎಂದು ಹೇಳಿದ್ದಾರೆ.</p>.<p>ದೇಶದಲ್ಲಿ ತಕ್ಷಣಕ್ಕೆ ತೈಲ ಕೊರೆತೆ ಉಂಟಾಗುವ ಸಾಧ್ಯತೆ ಇಲ್ಲ. ಕಚ್ಚಾ ತೈಲದ ಬೆಲೆ ಏರಿಕೆ, ಸಾಗಣೆ ಮತ್ತು ವಿಮಾ ವೆಚ್ಚದಲ್ಲಿನ ಹೆಚ್ಚಳವು ದೇಶದ ಆಮದು ಮತ್ತು ಹಣದುಬ್ಬರದ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದ್ದಾರೆ.</p>.<p>‘ದೇಶದಲ್ಲಿ ಕಚ್ಚಾ ತೈಲ, ಪೆಟ್ರೋಲ್, ಡೀಸೆಲ್ ಮತ್ತು ವಿಮಾನ ಇಂಧನ (ಎಟಿಎಫ್) ದಾಸ್ತಾನು ಪ್ರಮಾಣ ಉತ್ತಮ ಸ್ಥಿತಿಯಲ್ಲಿದೆ’ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. ಆದರೆ, ದಾಸ್ತಾನು ಎಷ್ಟಿದೆ ಎಂದು ತಿಳಿಸಿಲ್ಲ.</p>.<p>ದೇಶಾದ್ಯಂತ ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆ ಮತ್ತು ದಾಸ್ತಾನು ಸ್ಥಿತಿಯ ಮೇಲೆ ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಸಚಿವಾಲಯವು 24×7 ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ ಎಂದು ಹೇಳಿದ್ದಾರೆ.</p>.<p><strong>ಕಚ್ಚಾ ತೈಲ ದರ ಏರಿಕೆ</strong></p><p><strong>ಲಂಡನ್:</strong> ಬ್ರೆಂಟ್ ಕಚ್ಚಾ ತೈಲ ದರವು ಮಂಗಳವಾರದ ವಹಿವಾಟಿನಲ್ಲಿ ಶೇ 8ರಷ್ಟು ಏರಿಕೆಯಾಗಿದ್ದು, ಪ್ರತೀ ಬ್ಯಾರಲ್ ದರವು 85.12 ಡಾಲರ್ಗೆ ತಲುಪಿದೆ. ಇದು 2024ರ ಜುಲೈ ಬಳಿಕ ದಾಖಲಾದ ಗರಿಷ್ಠ ಏರಿಕೆ ಆಗಿದೆ.</p>.<p>ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ದರವು ಶೇ 7ರಷ್ಟು ಹೆಚ್ಚಾಗಿ, ಪ್ರತೀ ಬ್ಯಾರಲ್ 76.47 ಡಾಲರ್ ಆಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>