<p><strong>ನವದೆಹಲಿ:</strong> ಮಾಧ್ಯಮಗಳಲ್ಲಿ ಕಳೆದ ವಾರ ಪ್ರಕಟವಾಗಿದ್ದ ಅನಾಮಧೇಯರ ದೂರುಗಳಲ್ಲಿ ಹೊಸದೇನೂ ಇಲ್ಲ ಎಂದು ಐ.ಟಿ ದೈತ್ಯ ಸಂಸ್ಥೆ ಇನ್ಫೊಸಿಸ್ ಸ್ಪಷ್ಟಪಡಿಸಿದೆ.</p>.<p>ಕಂಪನಿಯ ಸಿಇಒ ಸಲೀಲ್ ಪಾರೇಖ್ ಅವರ ವಿರುದ್ಧ ಇನ್ನೊಂದು ಅನಾಮಧೇಯ ದೂರು ಸಲ್ಲಿಕೆಯಾಗಿದೆ ಎಂದು ಕಳೆದ ವಾರ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿದ್ದವು. ಈ ಸಂಬಂಧ ಷೇರುಪೇಟೆಗಳು ಕಂಪನಿಯಿಂದ ಸ್ಪಷ್ಟನೆ ಬಯಸಿದ್ದವು. ಸಂಸ್ಥೆಯು ಹಿಂದಿನ ತಿಂಗಳು ಬಹಿರಂಗಪಡಿಸಿದ್ದ ಅನಾಮಧೇಯರ ಆರೋಪಗಳೇ ಈ ದೂರಿನಲ್ಲಿ ವಿಸ್ತೃತ ರೂಪದಲ್ಲಿ ಇವೆಯಷ್ಟೆ ಎಂದು ಕಂಪನಿಯು ತಿಳಿಸಿದೆ.</p>.<p>ಅಕ್ಟೋಬರ್ 22ರಂದು ಕಂಪನಿಯು ಷೇರುಪೇಟೆಗಳಿಗೆ ಮಾಹಿತಿ ನೀಡಿದ್ದ ಅನಾಮಧೇಯರ ದಿನಾಂಕ ನಮೂದಿಸದ ಪತ್ರದಲ್ಲಿನ ವಿವರಗಳನ್ನೇ ಮಾಧ್ಯಮಗಳು ಮತ್ತೆ ವಿಸ್ತೃತವಾಗಿ ಪ್ರಕಟಿಸಿದ್ದವು ಎಂದು ಕಂಪನಿಯು ಷೇರುಪೇಟೆಗಳಿಗೆ ವಿವರಣೆ ನೀಡಿದೆ.</p>.<p>ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ನಿಯಮಗಳು ಮತ್ತು ಸಂಸ್ಥೆಯ ಧೋರಣೆಗೆ ಅನುಗುಣವಾಗಿ ದೂರಿಗೆ ಸಂಬಂಧಿಸಿದಂತೆ ಎಲ್ಲ ಮಾಹಿತಿಯನ್ನು ನೀಡಲಾಗಿದೆ. ಅಗತ್ಯ ಬಿದ್ದರೆ ಕಂಪನಿಯು ಯಾವುದೇ ಹೆಚ್ಚುವರಿ ಮಾಹಿತಿ ಮತ್ತು ವಿವರಣೆ ನೀಡಲು ಸಿದ್ಧವಿದೆ ಎಂದೂ ತಿಳಿಸಿದೆ.</p>.<p>ಕಳೆದ ವಾರ ಪ್ರಕಟವಾಗಿದ್ದ ವರದಿಗಳು ಹೊಸ ಆರೋಪಗಳಾಗಿವೆ ಎನ್ನುವ ಅಭಿಪ್ರಾಯ ಮೂಡಿಸಿದ್ದ ಹಿನ್ನೆಲೆಯಲ್ಲಿ ಕಂಪನಿಯು ಈ ಸ್ಪಷ್ಟನೆ ನೀಡಿದೆ.</p>.<p>ಕಂಪನಿಯ ಉನ್ನತ ಅಧಿಕಾರಿಗಳು ನ್ಯಾಯಬಾಹಿರ ವಿಧಾನ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ ಅನಾಮಧೇಯ ದೂರುಗಳು ನಿರ್ದೇಶಕ ಮಂಡಳಿಗೆ ಬಂದಿವೆ ಎಂದು ಕಂಪನಿಯು ಅಕ್ಟೋಬರ್ನಲ್ಲಿಯೇ ಷೇರುಪೇಟೆಗಳ ಗಮನಕ್ಕೆ ತಂದಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಮಾಧ್ಯಮಗಳಲ್ಲಿ ಕಳೆದ ವಾರ ಪ್ರಕಟವಾಗಿದ್ದ ಅನಾಮಧೇಯರ ದೂರುಗಳಲ್ಲಿ ಹೊಸದೇನೂ ಇಲ್ಲ ಎಂದು ಐ.ಟಿ ದೈತ್ಯ ಸಂಸ್ಥೆ ಇನ್ಫೊಸಿಸ್ ಸ್ಪಷ್ಟಪಡಿಸಿದೆ.</p>.<p>ಕಂಪನಿಯ ಸಿಇಒ ಸಲೀಲ್ ಪಾರೇಖ್ ಅವರ ವಿರುದ್ಧ ಇನ್ನೊಂದು ಅನಾಮಧೇಯ ದೂರು ಸಲ್ಲಿಕೆಯಾಗಿದೆ ಎಂದು ಕಳೆದ ವಾರ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿದ್ದವು. ಈ ಸಂಬಂಧ ಷೇರುಪೇಟೆಗಳು ಕಂಪನಿಯಿಂದ ಸ್ಪಷ್ಟನೆ ಬಯಸಿದ್ದವು. ಸಂಸ್ಥೆಯು ಹಿಂದಿನ ತಿಂಗಳು ಬಹಿರಂಗಪಡಿಸಿದ್ದ ಅನಾಮಧೇಯರ ಆರೋಪಗಳೇ ಈ ದೂರಿನಲ್ಲಿ ವಿಸ್ತೃತ ರೂಪದಲ್ಲಿ ಇವೆಯಷ್ಟೆ ಎಂದು ಕಂಪನಿಯು ತಿಳಿಸಿದೆ.</p>.<p>ಅಕ್ಟೋಬರ್ 22ರಂದು ಕಂಪನಿಯು ಷೇರುಪೇಟೆಗಳಿಗೆ ಮಾಹಿತಿ ನೀಡಿದ್ದ ಅನಾಮಧೇಯರ ದಿನಾಂಕ ನಮೂದಿಸದ ಪತ್ರದಲ್ಲಿನ ವಿವರಗಳನ್ನೇ ಮಾಧ್ಯಮಗಳು ಮತ್ತೆ ವಿಸ್ತೃತವಾಗಿ ಪ್ರಕಟಿಸಿದ್ದವು ಎಂದು ಕಂಪನಿಯು ಷೇರುಪೇಟೆಗಳಿಗೆ ವಿವರಣೆ ನೀಡಿದೆ.</p>.<p>ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ನಿಯಮಗಳು ಮತ್ತು ಸಂಸ್ಥೆಯ ಧೋರಣೆಗೆ ಅನುಗುಣವಾಗಿ ದೂರಿಗೆ ಸಂಬಂಧಿಸಿದಂತೆ ಎಲ್ಲ ಮಾಹಿತಿಯನ್ನು ನೀಡಲಾಗಿದೆ. ಅಗತ್ಯ ಬಿದ್ದರೆ ಕಂಪನಿಯು ಯಾವುದೇ ಹೆಚ್ಚುವರಿ ಮಾಹಿತಿ ಮತ್ತು ವಿವರಣೆ ನೀಡಲು ಸಿದ್ಧವಿದೆ ಎಂದೂ ತಿಳಿಸಿದೆ.</p>.<p>ಕಳೆದ ವಾರ ಪ್ರಕಟವಾಗಿದ್ದ ವರದಿಗಳು ಹೊಸ ಆರೋಪಗಳಾಗಿವೆ ಎನ್ನುವ ಅಭಿಪ್ರಾಯ ಮೂಡಿಸಿದ್ದ ಹಿನ್ನೆಲೆಯಲ್ಲಿ ಕಂಪನಿಯು ಈ ಸ್ಪಷ್ಟನೆ ನೀಡಿದೆ.</p>.<p>ಕಂಪನಿಯ ಉನ್ನತ ಅಧಿಕಾರಿಗಳು ನ್ಯಾಯಬಾಹಿರ ವಿಧಾನ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ ಅನಾಮಧೇಯ ದೂರುಗಳು ನಿರ್ದೇಶಕ ಮಂಡಳಿಗೆ ಬಂದಿವೆ ಎಂದು ಕಂಪನಿಯು ಅಕ್ಟೋಬರ್ನಲ್ಲಿಯೇ ಷೇರುಪೇಟೆಗಳ ಗಮನಕ್ಕೆ ತಂದಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>