<p><strong>ಮುಂಬೈ:</strong> ಹಣಕಾಸು ಮುಗ್ಗಟ್ಟು ಎದುರಿಸುತ್ತಿರುವ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್ವೇಸ್ಗೆ ತುರ್ತಾಗಿ ಹಣಕಾಸು ನೆರವು ಒದಗಿಸುವ ಸಂಬಂಧ ಸೋಮವಾರ ಇಲ್ಲಿ ನಡೆದ ಎಸ್ಬಿಐ ನೇತೃತ್ವದಲ್ಲಿನ ಬ್ಯಾಂಕ್ ಒಕ್ಕೂಟದ ಸಭೆಯು ಖಚಿತ ತೀರ್ಮಾನಕ್ಕೆ ಬರಲು ವಿಫಲಗೊಂಡಿತು.</p>.<p>ದೀರ್ಘ ಸಮಯದವರೆಗೆ ನಡೆದ ಸಭೆಯಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಸಭೆಯನ್ನು ಮುಂದೂಡಲಾಗಿದೆ.</p>.<p><strong>ಇದನ್ನೂ ಓದಿ:<a href="https://www.prajavani.net/stories/national/fleet-down-9-jet-airways-628250.html" target="_blank">ಜೆಟ್ ಏರ್ವೇಸ್ ಬಿಕ್ಕಟ್ಟು ಮತ್ತಷ್ಟು ಕಗ್ಗಂಟು? ಪ್ರಧಾನಿ ಕಚೇರಿಯಿಂದ ತುರ್ತು ಸಭೆ</a></strong></p>.<p>‘ತುರ್ತು ಹಣಕಾಸು ನೆರವು ನೀಡುವುದಕ್ಕೆ ಸಂಬಂಧಿಸಿದಂತೆ ಬ್ಯಾಂಕ್ಗಳು ನಿರ್ಧಾರಕ್ಕೆ ಬಂದಿಲ್ಲ. ಹೀಗಾಗಿ ಮುಂದೆ ಕೈಗೊಳ್ಳಬೇಕಾದ ನಿಲುವಿನ ಬಗ್ಗೆ ಚರ್ಚಿಸಲು ನಿರ್ದೇಶಕ ಮಂಡಳಿಯು ಮಂಗಳವಾರ ಸಭೆ ಸೇರಲಿದೆ’ ಎಂದು ಸಂಸ್ಥೆಯ ಸಿಇಒ ವಿನಯ್ ದುಬೆ ಹೇಳಿದ್ದಾರೆ.</p>.<p>ಸಕಾಲದಲ್ಲಿ ಹಣಕಾಸು ನೆರವು ಬರದಿರುವುದರಿಂದ ಅಂತರರಾಷ್ಟ್ರೀಯ ವಿಮಾನ ಸೇವೆ ರದ್ದುಪಡಿಸಿರುವುದನ್ನು ಇದೇ 18ರವರೆಗೆ ಮುಂದುವರೆಸಲು ಸಂಸ್ಥೆ ನಿರ್ಧರಿಸಿದೆ.</p>.<p><strong>ಇದನ್ನೂ ಓದಿ:<a href="https://www.prajavani.net/business/commerce-news/jet-airways-bids-627026.html" target="_blank">ಜೆಟ್ ಏರ್ವೇಸ್– ಬಿಡ್ ಆಹ್ವಾನ</a></strong></p>.<p>ಸಂಸ್ಥೆಯಲ್ಲಿನ ಪಾಲು ಬಂಡವಾಳ ಸ್ವಾಧೀನಕ್ಕೆ ಪ್ರತಿಯಾಗಿ ₹ 1,500 ಕೋಟಿಗಳ ತುರ್ತು ಸಾಲ ನೀಡಲು ಬ್ಯಾಂಕ್ಗಳ ಒಕ್ಕೂಟವು ಮಾರ್ಚ್ 25ರಂದು ನಿರ್ಧರಿಸಿತ್ತು. ಆದರೆ, ಇದುವರೆಗೆ ಬ್ಯಾಂಕ್ಗಳು ಕೇವಲ ₹ 300 ಕೋಟಿ ವಿತರಿಸಿವೆ. ಇದರಿಂದ ವಿಮಾನಗಳ ಬಾಡಿಗೆ ಪಾವತಿಸಲು ಸಾಧ್ಯವಾಗದ ಕಾರಣಕ್ಕೆ ಸಂಸ್ಥೆಯು ತನ್ನ ಬಹುತೇಕ ವಿಮಾನಗಳ ಸೇವೆ ರದ್ದುಪಡಿಸಿದೆ.</p>.<p>ಡಿಸೆಂಬರ್ನಲ್ಲಿ 123 ವಿಮಾನಗಳ ಸೇವೆ ಒದಗಿಸುತ್ತಿದ್ದ ಸಂಸ್ಥೆಯು ಈಗ ಕೇವಲ ಆರೇಳು ವಿಮಾನಗಳ ಸೇವೆ ಒದಗಿಸುತ್ತಿದೆ.</p>.<p><strong>ಇದನ್ನೂ ಓದಿ:<a href="https://www.prajavani.net/naresh-ghoyal-resighned-jet-623629.html" target="_blank">ಜೆಟ್ ಏರ್ವೇಸ್ ಸಂಸ್ಥೆ ಚೇರ್ಮನ್ ಹುದ್ದೆಗೆ ನರೇಶ್ ಗೋಯಲ್ ರಾಜೀನಾಮೆ</a></strong></p>.<p>ಇಂದಿನ ಸಭೆಯಲ್ಲಿ ಸಂಸ್ಥೆಗೆ ಹಣಕಾಸು ನೆರವು ಒದಗಿಸುವ ಬಗ್ಗೆ ಖಚಿತ ತೀರ್ಮಾನಕ್ಕೆ ಬರುವ ನಿರೀಕ್ಷೆ ಇತ್ತು. ಆದರೆ, ಯಾವುದೇ ನೆರವು ಒದಗಿಸಲು ಬ್ಯಾಂಕ್ಗಳು ಮುಂದೆ ಬರದಿರುವುದರಿಂದ ತೀವ್ರ ನಿರಾಶೆಯಾಗಿದೆ ಎಂದು ಪೈಲಟ್ಗಳ ಸಂಘದ ಮೂಲಗಳು ತಿಳಿಸಿವೆ.</p>.<p>ನಾಳೆಯೂ ಬ್ಯಾಂಕ್ಗಳಿಂದ ಹಣಕಾಸು ನೆರವು ಒದಗದಿದ್ದರೆ ಸಂಸ್ಥೆಯು ತನ್ನ ವಿಮಾನ ಯಾನ ಸೇವೆ ಮುಂದುವರೆಸುವುದು ಸಾಧ್ಯವಾಗಲಿಕ್ಕಿಲ್ಲ ಎನ್ನುವ ಆತಂಕ ಎದುರಾಗಿದೆ. ಮಂಗಳವಾರದ ನಿರ್ದೇಶಕ ಮಂಡಳಿಯ ಫಲಶ್ರುತಿಯನ್ನು ಸಂಸ್ಥೆಯ ಸಿಬ್ಬಂದಿ ಎದುರು ನೋಡುತ್ತಿದ್ದಾರೆ.</p>.<p><strong>ಇದನ್ನೂ ಓದಿ:<a href="https://www.prajavani.net/columns/bhaava-bitthi/jet-takeoff-and-naresh-625118.html" target="_blank">ಜೆಟ್ ಟೇಕ್ಆಫ್ ಮತ್ತು ನರೇಶ್ ಶಸ್ತ್ರತ್ಯಾಗ</a></strong></p>.<p class="Subhead"><strong>ಪ್ರಧಾನಿಗೆ ಮನವಿ:</strong> ಸಂಸ್ಥೆಯಲ್ಲಿನ 20 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳ ಹಿತರಕ್ಷಣೆಗೆ ಮುಂದಾಗಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ನ್ಯಾಷನಲ್ ಏವಿಯೇಟರ್ಸ್ ಗಿಲ್ಡ್ (ಎನ್ಎಜಿ) ಉಪಾಧ್ಯಕ್ಷ ಅಸಿಂ ವಲೈನಿ ತಿಳಿಸಿದ್ದಾರೆ.</p>.<p>ಸಂಸ್ಥೆಯು ತನ್ನ ಕಾರ್ಯಾಚರಣೆ ಮುಂದುವರೆಸಲು ಎಸ್ಬಿಐ ನೇತೃತ್ವದ ಬ್ಯಾಂಕ್ ಒಕ್ಕೂಟವು ₹ 1,500 ಕೋಟಿ ನೆರವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದೂ ‘ಎನ್ಎಜಿ’ ಮನವಿ ಮಾಡಿಕೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಹಣಕಾಸು ಮುಗ್ಗಟ್ಟು ಎದುರಿಸುತ್ತಿರುವ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್ವೇಸ್ಗೆ ತುರ್ತಾಗಿ ಹಣಕಾಸು ನೆರವು ಒದಗಿಸುವ ಸಂಬಂಧ ಸೋಮವಾರ ಇಲ್ಲಿ ನಡೆದ ಎಸ್ಬಿಐ ನೇತೃತ್ವದಲ್ಲಿನ ಬ್ಯಾಂಕ್ ಒಕ್ಕೂಟದ ಸಭೆಯು ಖಚಿತ ತೀರ್ಮಾನಕ್ಕೆ ಬರಲು ವಿಫಲಗೊಂಡಿತು.</p>.<p>ದೀರ್ಘ ಸಮಯದವರೆಗೆ ನಡೆದ ಸಭೆಯಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಸಭೆಯನ್ನು ಮುಂದೂಡಲಾಗಿದೆ.</p>.<p><strong>ಇದನ್ನೂ ಓದಿ:<a href="https://www.prajavani.net/stories/national/fleet-down-9-jet-airways-628250.html" target="_blank">ಜೆಟ್ ಏರ್ವೇಸ್ ಬಿಕ್ಕಟ್ಟು ಮತ್ತಷ್ಟು ಕಗ್ಗಂಟು? ಪ್ರಧಾನಿ ಕಚೇರಿಯಿಂದ ತುರ್ತು ಸಭೆ</a></strong></p>.<p>‘ತುರ್ತು ಹಣಕಾಸು ನೆರವು ನೀಡುವುದಕ್ಕೆ ಸಂಬಂಧಿಸಿದಂತೆ ಬ್ಯಾಂಕ್ಗಳು ನಿರ್ಧಾರಕ್ಕೆ ಬಂದಿಲ್ಲ. ಹೀಗಾಗಿ ಮುಂದೆ ಕೈಗೊಳ್ಳಬೇಕಾದ ನಿಲುವಿನ ಬಗ್ಗೆ ಚರ್ಚಿಸಲು ನಿರ್ದೇಶಕ ಮಂಡಳಿಯು ಮಂಗಳವಾರ ಸಭೆ ಸೇರಲಿದೆ’ ಎಂದು ಸಂಸ್ಥೆಯ ಸಿಇಒ ವಿನಯ್ ದುಬೆ ಹೇಳಿದ್ದಾರೆ.</p>.<p>ಸಕಾಲದಲ್ಲಿ ಹಣಕಾಸು ನೆರವು ಬರದಿರುವುದರಿಂದ ಅಂತರರಾಷ್ಟ್ರೀಯ ವಿಮಾನ ಸೇವೆ ರದ್ದುಪಡಿಸಿರುವುದನ್ನು ಇದೇ 18ರವರೆಗೆ ಮುಂದುವರೆಸಲು ಸಂಸ್ಥೆ ನಿರ್ಧರಿಸಿದೆ.</p>.<p><strong>ಇದನ್ನೂ ಓದಿ:<a href="https://www.prajavani.net/business/commerce-news/jet-airways-bids-627026.html" target="_blank">ಜೆಟ್ ಏರ್ವೇಸ್– ಬಿಡ್ ಆಹ್ವಾನ</a></strong></p>.<p>ಸಂಸ್ಥೆಯಲ್ಲಿನ ಪಾಲು ಬಂಡವಾಳ ಸ್ವಾಧೀನಕ್ಕೆ ಪ್ರತಿಯಾಗಿ ₹ 1,500 ಕೋಟಿಗಳ ತುರ್ತು ಸಾಲ ನೀಡಲು ಬ್ಯಾಂಕ್ಗಳ ಒಕ್ಕೂಟವು ಮಾರ್ಚ್ 25ರಂದು ನಿರ್ಧರಿಸಿತ್ತು. ಆದರೆ, ಇದುವರೆಗೆ ಬ್ಯಾಂಕ್ಗಳು ಕೇವಲ ₹ 300 ಕೋಟಿ ವಿತರಿಸಿವೆ. ಇದರಿಂದ ವಿಮಾನಗಳ ಬಾಡಿಗೆ ಪಾವತಿಸಲು ಸಾಧ್ಯವಾಗದ ಕಾರಣಕ್ಕೆ ಸಂಸ್ಥೆಯು ತನ್ನ ಬಹುತೇಕ ವಿಮಾನಗಳ ಸೇವೆ ರದ್ದುಪಡಿಸಿದೆ.</p>.<p>ಡಿಸೆಂಬರ್ನಲ್ಲಿ 123 ವಿಮಾನಗಳ ಸೇವೆ ಒದಗಿಸುತ್ತಿದ್ದ ಸಂಸ್ಥೆಯು ಈಗ ಕೇವಲ ಆರೇಳು ವಿಮಾನಗಳ ಸೇವೆ ಒದಗಿಸುತ್ತಿದೆ.</p>.<p><strong>ಇದನ್ನೂ ಓದಿ:<a href="https://www.prajavani.net/naresh-ghoyal-resighned-jet-623629.html" target="_blank">ಜೆಟ್ ಏರ್ವೇಸ್ ಸಂಸ್ಥೆ ಚೇರ್ಮನ್ ಹುದ್ದೆಗೆ ನರೇಶ್ ಗೋಯಲ್ ರಾಜೀನಾಮೆ</a></strong></p>.<p>ಇಂದಿನ ಸಭೆಯಲ್ಲಿ ಸಂಸ್ಥೆಗೆ ಹಣಕಾಸು ನೆರವು ಒದಗಿಸುವ ಬಗ್ಗೆ ಖಚಿತ ತೀರ್ಮಾನಕ್ಕೆ ಬರುವ ನಿರೀಕ್ಷೆ ಇತ್ತು. ಆದರೆ, ಯಾವುದೇ ನೆರವು ಒದಗಿಸಲು ಬ್ಯಾಂಕ್ಗಳು ಮುಂದೆ ಬರದಿರುವುದರಿಂದ ತೀವ್ರ ನಿರಾಶೆಯಾಗಿದೆ ಎಂದು ಪೈಲಟ್ಗಳ ಸಂಘದ ಮೂಲಗಳು ತಿಳಿಸಿವೆ.</p>.<p>ನಾಳೆಯೂ ಬ್ಯಾಂಕ್ಗಳಿಂದ ಹಣಕಾಸು ನೆರವು ಒದಗದಿದ್ದರೆ ಸಂಸ್ಥೆಯು ತನ್ನ ವಿಮಾನ ಯಾನ ಸೇವೆ ಮುಂದುವರೆಸುವುದು ಸಾಧ್ಯವಾಗಲಿಕ್ಕಿಲ್ಲ ಎನ್ನುವ ಆತಂಕ ಎದುರಾಗಿದೆ. ಮಂಗಳವಾರದ ನಿರ್ದೇಶಕ ಮಂಡಳಿಯ ಫಲಶ್ರುತಿಯನ್ನು ಸಂಸ್ಥೆಯ ಸಿಬ್ಬಂದಿ ಎದುರು ನೋಡುತ್ತಿದ್ದಾರೆ.</p>.<p><strong>ಇದನ್ನೂ ಓದಿ:<a href="https://www.prajavani.net/columns/bhaava-bitthi/jet-takeoff-and-naresh-625118.html" target="_blank">ಜೆಟ್ ಟೇಕ್ಆಫ್ ಮತ್ತು ನರೇಶ್ ಶಸ್ತ್ರತ್ಯಾಗ</a></strong></p>.<p class="Subhead"><strong>ಪ್ರಧಾನಿಗೆ ಮನವಿ:</strong> ಸಂಸ್ಥೆಯಲ್ಲಿನ 20 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳ ಹಿತರಕ್ಷಣೆಗೆ ಮುಂದಾಗಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ನ್ಯಾಷನಲ್ ಏವಿಯೇಟರ್ಸ್ ಗಿಲ್ಡ್ (ಎನ್ಎಜಿ) ಉಪಾಧ್ಯಕ್ಷ ಅಸಿಂ ವಲೈನಿ ತಿಳಿಸಿದ್ದಾರೆ.</p>.<p>ಸಂಸ್ಥೆಯು ತನ್ನ ಕಾರ್ಯಾಚರಣೆ ಮುಂದುವರೆಸಲು ಎಸ್ಬಿಐ ನೇತೃತ್ವದ ಬ್ಯಾಂಕ್ ಒಕ್ಕೂಟವು ₹ 1,500 ಕೋಟಿ ನೆರವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದೂ ‘ಎನ್ಎಜಿ’ ಮನವಿ ಮಾಡಿಕೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>