<p><strong>ಮಂಗಳೂರು:</strong> ಕುದುರೆಮುಖ ಕಬ್ಬಿಣ ಅದಿರು ಕಾರ್ಖಾನೆಯು (ಕೆಐಒಸಿಎಲ್) ವಾರ್ಷಿಕ 2 ದಶಲಕ್ಷ ಟನ್ ಸಾಮರ್ಥ್ಯದ ಮೂರು ಘಟಕಗಳನ್ನು ವಿಶಾಖಪಟ್ಟಣ, ಬೊಕಾರೊ ಮತ್ತು ಭಿಲಾಯಿಯಲ್ಲಿ ಸ್ಥಾಪಿಸಲಿದೆ.</p>.<p>‘ಕೆಐಒಸಿಎಲ್’ನ ಅಧ್ಯಕ್ಷ ಎಂ.ವಿ. ಸುಬ್ಬರಾವ್ ಅವರು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಕೆಐಒಸಿಎಲ್ ನಿರ್ದೇಶಕರ ಮಂಡಳಿಯು ಈಗಾಗಲೇ ವಿಶಾಖಪಟ್ಟಣ ಘಟಕದ ಡಿಪಿಆರ್ಗೆ (ವಿಸ್ತೃತ ಯೋಜನಾ ವರದಿ) ಅಂಗೀಕಾರ ನೀಡಿದೆ. ಅಂದಾಜು ಒಂದು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಈ ಘಟಕ ಅಸ್ತಿತ್ವಕ್ಕೆ ಬರಲಿದೆ. ‘ಕೆಐಒಸಿಎಲ್’ ಕಂಪನಿಯು ವಿಶಾಖಪಟ್ಟಣ ಸ್ಟೀಲ್ ಪ್ಲಾಂಟ್ಗೆ (ವಿಎಸ್ಪಿ) ಸೇರಿದ ರಾಷ್ಟ್ರೀಯ ಇಸ್ಪಟ್ ನಿಗಮದ (ಆರ್ಐಎನ್ಎಲ್) ಜೊತೆಗೆ ಹಿಂದಿನ ವರ್ಷ ಜಂಟಿ ಒಪ್ಪಂದ ಮಾಡಿಕೊಂಡಿದ್ದು, ಅಲ್ಲಿ ಫ್ಲಕ್ಸ್ ಪೆಲೆಟ್ ಪ್ಲಾಂಟ್ ಸ್ಥಾಪನೆಯಾಗಲಿದೆ. 2021ಕ್ಕೆ ಈ ಘಟಕವು ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ. ಇದಕ್ಕಾಗಿ ‘ಆರ್ಐಎನ್ಎಲ್‘ 75 ಎಕರೆ ಜಾಗವನ್ನು ಗುರುತಿಸಿದೆ ಎಂದು ಅವರು ಹೇಳಿದರು.</p>.<p>‘ಬೊಕಾರೊ ಮತ್ತು ಭಿಲಾಯಿಯಲ್ಲಿ ‘ಬಿಎಫ್ ಗ್ರೇಡ್ ಪೆಲೆಟ್ ಪ್ಲಾಂಟ್’ ಸ್ಥಾಪಿಸುವ ನಿಟ್ಟಿನಲ್ಲಿ ಮುಂದಿನ ವಾರ ‘ಕೆಐಒಸಿಎಲ್‘ ಭಾರತೀಯ ಉಕ್ಕು ಪ್ರಾಧಿಕಾರದ ಜೊತೆ ಒಪ್ಪಂದ ಮಾಡಿಕೊಳ್ಳಲಿದೆ. ಈ ಎರಡೂ ಘಟಕಗಳು 2022 –2023ರ ಸಾಲಿನಲ್ಲಿ ಕಾರ್ಯಾರಂಭ ಮಾಡಲಿವೆ.</p>.<p>‘ಅದಿರಿನ ಉಂಡೆಗಳನ್ನು ಮಂಗಳೂರಿಗೆ ತರಲು ‘ಕೆಐಒಸಿಎಲ್’ ಪ್ರತಿ ಟನ್ಗೆ ಕನಿಷ್ಠ ₹ 2 ಸಾವಿರ ವ್ಯಯಿಸಬೇಕಾಗುತ್ತದೆ. ಮೂರು ಹೊಸ ಘಟಕಗಳನ್ನು ಸ್ಥಾಪಿಸುವುದರಿಂದ ಈ ಸಾಗಾಣಿಕಾ ವೆಚ್ಚ ಉಳಿತಾಯವಾಗಲಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ಕುದುರೆಮುಖ ಕಬ್ಬಿಣ ಅದಿರು ಕಾರ್ಖಾನೆಯು (ಕೆಐಒಸಿಎಲ್) ವಾರ್ಷಿಕ 2 ದಶಲಕ್ಷ ಟನ್ ಸಾಮರ್ಥ್ಯದ ಮೂರು ಘಟಕಗಳನ್ನು ವಿಶಾಖಪಟ್ಟಣ, ಬೊಕಾರೊ ಮತ್ತು ಭಿಲಾಯಿಯಲ್ಲಿ ಸ್ಥಾಪಿಸಲಿದೆ.</p>.<p>‘ಕೆಐಒಸಿಎಲ್’ನ ಅಧ್ಯಕ್ಷ ಎಂ.ವಿ. ಸುಬ್ಬರಾವ್ ಅವರು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಕೆಐಒಸಿಎಲ್ ನಿರ್ದೇಶಕರ ಮಂಡಳಿಯು ಈಗಾಗಲೇ ವಿಶಾಖಪಟ್ಟಣ ಘಟಕದ ಡಿಪಿಆರ್ಗೆ (ವಿಸ್ತೃತ ಯೋಜನಾ ವರದಿ) ಅಂಗೀಕಾರ ನೀಡಿದೆ. ಅಂದಾಜು ಒಂದು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಈ ಘಟಕ ಅಸ್ತಿತ್ವಕ್ಕೆ ಬರಲಿದೆ. ‘ಕೆಐಒಸಿಎಲ್’ ಕಂಪನಿಯು ವಿಶಾಖಪಟ್ಟಣ ಸ್ಟೀಲ್ ಪ್ಲಾಂಟ್ಗೆ (ವಿಎಸ್ಪಿ) ಸೇರಿದ ರಾಷ್ಟ್ರೀಯ ಇಸ್ಪಟ್ ನಿಗಮದ (ಆರ್ಐಎನ್ಎಲ್) ಜೊತೆಗೆ ಹಿಂದಿನ ವರ್ಷ ಜಂಟಿ ಒಪ್ಪಂದ ಮಾಡಿಕೊಂಡಿದ್ದು, ಅಲ್ಲಿ ಫ್ಲಕ್ಸ್ ಪೆಲೆಟ್ ಪ್ಲಾಂಟ್ ಸ್ಥಾಪನೆಯಾಗಲಿದೆ. 2021ಕ್ಕೆ ಈ ಘಟಕವು ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ. ಇದಕ್ಕಾಗಿ ‘ಆರ್ಐಎನ್ಎಲ್‘ 75 ಎಕರೆ ಜಾಗವನ್ನು ಗುರುತಿಸಿದೆ ಎಂದು ಅವರು ಹೇಳಿದರು.</p>.<p>‘ಬೊಕಾರೊ ಮತ್ತು ಭಿಲಾಯಿಯಲ್ಲಿ ‘ಬಿಎಫ್ ಗ್ರೇಡ್ ಪೆಲೆಟ್ ಪ್ಲಾಂಟ್’ ಸ್ಥಾಪಿಸುವ ನಿಟ್ಟಿನಲ್ಲಿ ಮುಂದಿನ ವಾರ ‘ಕೆಐಒಸಿಎಲ್‘ ಭಾರತೀಯ ಉಕ್ಕು ಪ್ರಾಧಿಕಾರದ ಜೊತೆ ಒಪ್ಪಂದ ಮಾಡಿಕೊಳ್ಳಲಿದೆ. ಈ ಎರಡೂ ಘಟಕಗಳು 2022 –2023ರ ಸಾಲಿನಲ್ಲಿ ಕಾರ್ಯಾರಂಭ ಮಾಡಲಿವೆ.</p>.<p>‘ಅದಿರಿನ ಉಂಡೆಗಳನ್ನು ಮಂಗಳೂರಿಗೆ ತರಲು ‘ಕೆಐಒಸಿಎಲ್’ ಪ್ರತಿ ಟನ್ಗೆ ಕನಿಷ್ಠ ₹ 2 ಸಾವಿರ ವ್ಯಯಿಸಬೇಕಾಗುತ್ತದೆ. ಮೂರು ಹೊಸ ಘಟಕಗಳನ್ನು ಸ್ಥಾಪಿಸುವುದರಿಂದ ಈ ಸಾಗಾಣಿಕಾ ವೆಚ್ಚ ಉಳಿತಾಯವಾಗಲಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>