<p><strong>ನವದೆಹಲಿ: </strong>ಲಾಕ್ಡೌನ್ ಪರಿಣಾಮದಿಂದ ಶೇ 38ರಷ್ಟು ನವೋದ್ಯಮಗಳು ನಗದು ಸಮಸ್ಯೆ ಎದುರಿಸುತ್ತಿದ್ದರೆ ಶೇ 4ರಷ್ಟು ಬಾಗಿಲು ಮುಚ್ಚಿವೆ ಎಂದು ವರದಿಯೊಂದು ತಿಳಿಸಿದೆ.</p>.<p>ಲಾಕ್ಡೌನ್ ಅವಧಿಯಲ್ಲಿ ನವೋದ್ಯಮಗಳ ಸ್ಥಿತಿಗತಿಯ ಬಗ್ಗೆಲೋಕಲ್ ಸರ್ಕಲ್ಸ್ ಸಮೀಕ್ಷೆ ನಡೆಸಿದ್ದು, 8,400ಕ್ಕೂ ಅಧಿಕ ನವೋದ್ಯಮಗಳು, ಎಸ್ಎಂಇ ಮತ್ತು ಉದ್ಯಮಿಗಳಿಂದ 28 ಸಾವಿರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ.</p>.<p>ಕಳೆದೆರಡು ತಿಂಗಳಿನಲ್ಲಿ ಶೇ 80–90ರಷ್ಟು ವರಮಾನ ನಷ್ಟವಾಗಿದ್ದು, ನೆಲೆ ಕಂಡುಕೊಳ್ಳುವುದೇ ಕಷ್ಟವಾಗುತ್ತಿದೆ ಎಂದು ಹಲವು ಉದ್ದಿಮೆಗಳು ಹೇಳಿವೆ. ಏಪ್ರಿಲ್ನಿಂದ ಜೂನ್ ಅವಧಿಗೆ ಹೋಲಿಸಿದರೆ ಹಣವಿಲ್ಲದೇ ಇರುವ ನವೋದ್ಯಮಗಳ ಪ್ರಮಾಣ ಶೇ 27 ರಿಂದ ಶೇ 42ಕ್ಕೆ ಏರಿಕೆಯಾಗಿದ್ದು, ಪರಿಸ್ಥಿತಿಯ ಗಂಭೀರತೆ ತೋರಿಸುತ್ತಿದೆ.</p>.<p>ವಹಿವಾಟು ಮುಂದುವರಿಸಲು ಕಂಪನಿಗಳು ವೆಚ್ಚ ಕಡಿತಕ್ಕೆ ಮುಂದಾಗಿವೆ. ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲಾಗುತ್ತಿದೆ. ಆತ್ಮನಿರ್ಭರ ಭಾರತ ಯೋಜನೆಯಿಂದ ನವೋದ್ಯಮಗಳಿಗೆ ಪ್ರಯೋಜನ ಆಗುವುದಿಲ್ಲ. ಏಕೆಂದರೆ ಇವು ವೆಂಚರ್ ಕ್ಯಾಪಿಟಲ್ನಿಂದ ವಹಿವಾಟು ಆರಂಭಿಸುತ್ತವೆ. ಹೀಗಾಗಿ ಯೋಜನೆಗೆ ಅರ್ಹರಾಗುವುದಿಲ್ಲ ಎಂದು ತಿಳಿಸಿದೆ.</p>.<p><strong>ಸಮೀಕ್ಷೆಯ ವಿವರ</strong></p>.<p>ಹಣವೇ ಇಲ್ಲ ಎಂದಿರುವ ನವೋದ್ಯಮಗಳು - ಶೇ38</p>.<p>1–3 ತಿಂಗಳಿಗೆ ಸಾಲುವಷ್ಟು ನಗದು ಇದೆ ಎಂದಿರುವವರು - ಶೇ 30</p>.<p>3–6 ತಿಂಗಳಿಗೆ ಸಾಲುವಷ್ಟು ನಗದು ಇದೆ ಎಂದಿರುವವರು - ಶೇ 16</p>.<p>ಬಾಗಿಲು ಮುಚ್ಚಿರುವ ನವೋದ್ಯಮಗಳು - ಶೇ 4</p>.<p>ಆರು ತಿಂಗಳಿನಲ್ಲಿ ಚೇತರಿಸಿಕೊಳ್ಳುವ ವಿಶ್ವಾಸ ಹೊಂದಿರುವವರು - ಶೇ 35</p>.<p>ವಹಿವಾಟು ಮುಚ್ಚುವ ಹಂತಕ್ಕೆ ತಲುಪಿದೆ ಎಂದಿರುವವರು - ಶೇ 14</p>.<p>ಭವಿಷ್ಯದ ಬಗ್ಗೆ ಖಾತರಿ ಇಲ್ಲದೇ ಇರುವವರು - ಶೇ 16</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಲಾಕ್ಡೌನ್ ಪರಿಣಾಮದಿಂದ ಶೇ 38ರಷ್ಟು ನವೋದ್ಯಮಗಳು ನಗದು ಸಮಸ್ಯೆ ಎದುರಿಸುತ್ತಿದ್ದರೆ ಶೇ 4ರಷ್ಟು ಬಾಗಿಲು ಮುಚ್ಚಿವೆ ಎಂದು ವರದಿಯೊಂದು ತಿಳಿಸಿದೆ.</p>.<p>ಲಾಕ್ಡೌನ್ ಅವಧಿಯಲ್ಲಿ ನವೋದ್ಯಮಗಳ ಸ್ಥಿತಿಗತಿಯ ಬಗ್ಗೆಲೋಕಲ್ ಸರ್ಕಲ್ಸ್ ಸಮೀಕ್ಷೆ ನಡೆಸಿದ್ದು, 8,400ಕ್ಕೂ ಅಧಿಕ ನವೋದ್ಯಮಗಳು, ಎಸ್ಎಂಇ ಮತ್ತು ಉದ್ಯಮಿಗಳಿಂದ 28 ಸಾವಿರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ.</p>.<p>ಕಳೆದೆರಡು ತಿಂಗಳಿನಲ್ಲಿ ಶೇ 80–90ರಷ್ಟು ವರಮಾನ ನಷ್ಟವಾಗಿದ್ದು, ನೆಲೆ ಕಂಡುಕೊಳ್ಳುವುದೇ ಕಷ್ಟವಾಗುತ್ತಿದೆ ಎಂದು ಹಲವು ಉದ್ದಿಮೆಗಳು ಹೇಳಿವೆ. ಏಪ್ರಿಲ್ನಿಂದ ಜೂನ್ ಅವಧಿಗೆ ಹೋಲಿಸಿದರೆ ಹಣವಿಲ್ಲದೇ ಇರುವ ನವೋದ್ಯಮಗಳ ಪ್ರಮಾಣ ಶೇ 27 ರಿಂದ ಶೇ 42ಕ್ಕೆ ಏರಿಕೆಯಾಗಿದ್ದು, ಪರಿಸ್ಥಿತಿಯ ಗಂಭೀರತೆ ತೋರಿಸುತ್ತಿದೆ.</p>.<p>ವಹಿವಾಟು ಮುಂದುವರಿಸಲು ಕಂಪನಿಗಳು ವೆಚ್ಚ ಕಡಿತಕ್ಕೆ ಮುಂದಾಗಿವೆ. ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲಾಗುತ್ತಿದೆ. ಆತ್ಮನಿರ್ಭರ ಭಾರತ ಯೋಜನೆಯಿಂದ ನವೋದ್ಯಮಗಳಿಗೆ ಪ್ರಯೋಜನ ಆಗುವುದಿಲ್ಲ. ಏಕೆಂದರೆ ಇವು ವೆಂಚರ್ ಕ್ಯಾಪಿಟಲ್ನಿಂದ ವಹಿವಾಟು ಆರಂಭಿಸುತ್ತವೆ. ಹೀಗಾಗಿ ಯೋಜನೆಗೆ ಅರ್ಹರಾಗುವುದಿಲ್ಲ ಎಂದು ತಿಳಿಸಿದೆ.</p>.<p><strong>ಸಮೀಕ್ಷೆಯ ವಿವರ</strong></p>.<p>ಹಣವೇ ಇಲ್ಲ ಎಂದಿರುವ ನವೋದ್ಯಮಗಳು - ಶೇ38</p>.<p>1–3 ತಿಂಗಳಿಗೆ ಸಾಲುವಷ್ಟು ನಗದು ಇದೆ ಎಂದಿರುವವರು - ಶೇ 30</p>.<p>3–6 ತಿಂಗಳಿಗೆ ಸಾಲುವಷ್ಟು ನಗದು ಇದೆ ಎಂದಿರುವವರು - ಶೇ 16</p>.<p>ಬಾಗಿಲು ಮುಚ್ಚಿರುವ ನವೋದ್ಯಮಗಳು - ಶೇ 4</p>.<p>ಆರು ತಿಂಗಳಿನಲ್ಲಿ ಚೇತರಿಸಿಕೊಳ್ಳುವ ವಿಶ್ವಾಸ ಹೊಂದಿರುವವರು - ಶೇ 35</p>.<p>ವಹಿವಾಟು ಮುಚ್ಚುವ ಹಂತಕ್ಕೆ ತಲುಪಿದೆ ಎಂದಿರುವವರು - ಶೇ 14</p>.<p>ಭವಿಷ್ಯದ ಬಗ್ಗೆ ಖಾತರಿ ಇಲ್ಲದೇ ಇರುವವರು - ಶೇ 16</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>