<p><strong>ಯಾದಗಿರಿ:</strong> ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಹೆಸರುಕಾಳಿಗೆ ಬಂಪರ್ ಬೆಲೆ ಬಂದಿದೆ. ಬೆಲೆಯು 10 ದಿನಗಳಲ್ಲಿ ಕ್ವಿಂಟಲ್ಗೆ ₹3,179 ಹೆಚ್ಚಾಗಿದೆ.</p>. <p>ಆಗಸ್ಟ್ 5ರಂದು ಹೆಸರುಕಾಳು ಕ್ವಿಂಟಲ್ಗೆ ಗರಿಷ್ಠ ದರ ₹6,531 ಇತ್ತು. ಆಗಸ್ಟ್ 16ಕ್ಕೆ ₹9,710ಕ್ಕೆ ಏರಿಕೆಯಾಗಿದೆ. ಇದು ಕೇಂದ್ರ ನಿಗದಿಪಡಿಸಿರುವ ಬೆಂಬಲ ಬೆಲೆಗಿಂತ (₹8,768) ಹೆಚ್ಚು. ಕಳೆದ ವರ್ಷ ಇದೇ ದಿನ (ಆ.16) ₹8,365 ಆಸುಪಾಸಿನಲ್ಲಿ ಹೆಸರುಕಾಳು ಮಾರಾಟ ಆಗಿತ್ತು. </p>. <p>ಹೆಸರುಕಾಳು ಆವಕ ಈಗ 2 ಸಾವಿರ ಕ್ವಿಂಟಲ್ಗೆ ತಲುಪಿದೆ. 11 ದಿನಗಳಲ್ಲಿ 13,302 ಕ್ವಿಂಟಲ್ ಹೆಸರು ಕಾಳು ಯಾದಗಿರಿ ಎಪಿಎಂಸಿಗೆ ಆವಕ ಆಗಿದೆ. ಯಾದಗಿರಿ ಜಿಲ್ಲೆ, ನೆರೆಯ ಜಿಲ್ಲೆಗಳು, ಪಕ್ಕದ ತೆಲಂಗಾಣ ರಾಜ್ಯದಿಂದಲೂ ಪೂರೈಕೆ ಆಗುತ್ತಿದೆ.</p>.<div><div class="bigfact-title">ಕಾರಣ ಏನು?:</div><div class="bigfact-description">‘ಜಿಲ್ಲೆಯಲ್ಲಿ ಕಳೆದ ವರ್ಷ 21,205 ಹೆಕ್ಟೇರ್ ಪ್ರದೇಶದಲ್ಲಿ ಹೆಸರುಕಾಳು ಬಿತ್ತನೆಯಾಗಿತ್ತು. ಇದು ಈ ವರ್ಷ 13,178 ಹೆಕ್ಟೇರ್ ಪ್ರದೇಶಕ್ಕೆ ಇಳಿದಿದೆ.</div></div>. <p>ವಾರದಿಂದ ಮಳೆ ಸುರಿಯುತ್ತಿದೆ. ಹೆಸರುಕಾಳುಗಳು ತೇವಾಂಶದಿಂದ ಕಪ್ಪಾಗಬಹುದು. ಮಳೆಗೂ ಮುನ್ನ ರಾಶಿಯಾಗಿರುವ ಗುಣಮಟ್ಟದ ಹೆಸರುಕಾಳಿಗೆ ಬೇಡಿಕೆ ಬಂದಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ರಾಜಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><blockquote>ಇನ್ನೂ ನಾಲ್ಕೈದು ದಿನ ಮಳೆ ಬಂದರೆ ಹೆಸರು ಕಾಳು ಕಪ್ಪಾಗುವ ಸಾಧ್ಯತೆ ಇದೆ. ಆಗ ದರದಲ್ಲಿ ವ್ಯತ್ಯಾಸ<br> ಆಗಬಹುದು <br></blockquote><span class="attribution">ಶಿವಕುಮಾರ ಎಪಿಎಂಸಿ ಕಾರ್ಯದರ್ಶಿ, ಯಾದಗಿರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ:</strong> ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಹೆಸರುಕಾಳಿಗೆ ಬಂಪರ್ ಬೆಲೆ ಬಂದಿದೆ. ಬೆಲೆಯು 10 ದಿನಗಳಲ್ಲಿ ಕ್ವಿಂಟಲ್ಗೆ ₹3,179 ಹೆಚ್ಚಾಗಿದೆ.</p>. <p>ಆಗಸ್ಟ್ 5ರಂದು ಹೆಸರುಕಾಳು ಕ್ವಿಂಟಲ್ಗೆ ಗರಿಷ್ಠ ದರ ₹6,531 ಇತ್ತು. ಆಗಸ್ಟ್ 16ಕ್ಕೆ ₹9,710ಕ್ಕೆ ಏರಿಕೆಯಾಗಿದೆ. ಇದು ಕೇಂದ್ರ ನಿಗದಿಪಡಿಸಿರುವ ಬೆಂಬಲ ಬೆಲೆಗಿಂತ (₹8,768) ಹೆಚ್ಚು. ಕಳೆದ ವರ್ಷ ಇದೇ ದಿನ (ಆ.16) ₹8,365 ಆಸುಪಾಸಿನಲ್ಲಿ ಹೆಸರುಕಾಳು ಮಾರಾಟ ಆಗಿತ್ತು. </p>. <p>ಹೆಸರುಕಾಳು ಆವಕ ಈಗ 2 ಸಾವಿರ ಕ್ವಿಂಟಲ್ಗೆ ತಲುಪಿದೆ. 11 ದಿನಗಳಲ್ಲಿ 13,302 ಕ್ವಿಂಟಲ್ ಹೆಸರು ಕಾಳು ಯಾದಗಿರಿ ಎಪಿಎಂಸಿಗೆ ಆವಕ ಆಗಿದೆ. ಯಾದಗಿರಿ ಜಿಲ್ಲೆ, ನೆರೆಯ ಜಿಲ್ಲೆಗಳು, ಪಕ್ಕದ ತೆಲಂಗಾಣ ರಾಜ್ಯದಿಂದಲೂ ಪೂರೈಕೆ ಆಗುತ್ತಿದೆ.</p>.<div><div class="bigfact-title">ಕಾರಣ ಏನು?:</div><div class="bigfact-description">‘ಜಿಲ್ಲೆಯಲ್ಲಿ ಕಳೆದ ವರ್ಷ 21,205 ಹೆಕ್ಟೇರ್ ಪ್ರದೇಶದಲ್ಲಿ ಹೆಸರುಕಾಳು ಬಿತ್ತನೆಯಾಗಿತ್ತು. ಇದು ಈ ವರ್ಷ 13,178 ಹೆಕ್ಟೇರ್ ಪ್ರದೇಶಕ್ಕೆ ಇಳಿದಿದೆ.</div></div>. <p>ವಾರದಿಂದ ಮಳೆ ಸುರಿಯುತ್ತಿದೆ. ಹೆಸರುಕಾಳುಗಳು ತೇವಾಂಶದಿಂದ ಕಪ್ಪಾಗಬಹುದು. ಮಳೆಗೂ ಮುನ್ನ ರಾಶಿಯಾಗಿರುವ ಗುಣಮಟ್ಟದ ಹೆಸರುಕಾಳಿಗೆ ಬೇಡಿಕೆ ಬಂದಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ರಾಜಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><blockquote>ಇನ್ನೂ ನಾಲ್ಕೈದು ದಿನ ಮಳೆ ಬಂದರೆ ಹೆಸರು ಕಾಳು ಕಪ್ಪಾಗುವ ಸಾಧ್ಯತೆ ಇದೆ. ಆಗ ದರದಲ್ಲಿ ವ್ಯತ್ಯಾಸ<br> ಆಗಬಹುದು <br></blockquote><span class="attribution">ಶಿವಕುಮಾರ ಎಪಿಎಂಸಿ ಕಾರ್ಯದರ್ಶಿ, ಯಾದಗಿರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>