<p><strong>ನವದೆಹಲಿ:</strong>ಟಾಟಾ ಸನ್ಸ್ ಮತ್ತು ಸೈರಸ್ ಮಿಸ್ತ್ರಿ ಪ್ರಕರಣ ಸಂಬಂಧ ನೀಡಿದ ಆದೇಶದಲ್ಲಿ ಮಾರ್ಪಾಟು ಮಾಡಬೇಕೆಂಬ ಕಂಪನಿ ರಿಜಿಸ್ಟ್ರಾರ್ (ಆರ್ಒಸಿ) ಕೋರಿಕೆಯನ್ನು ರಾಷ್ಟ್ರೀಯ ಕಂಪನಿ ಕಾಯ್ದೆ ಮೇಲ್ಮನವಿ ನ್ಯಾಯಮಂಡಳಿಯು ತಿರಸ್ಕರಿಸಿದೆ.</p>.<p>ಡಿಸೆಂಬರ್ 18ರಂದು ನೀಡಿದ್ದ ಆದೇಶವನ್ನು ಬದಲಿಸುವ ಸಂಬಂಧ ಯಾವುದೇ ಸಮರ್ಥನೀಯ ಕಾರಣಗಳು ಇಲ್ಲ ಎಂದು ಇಬ್ಬರು ಸದಸ್ಯರ ಪೀಠವು ಸೋಮವಾರ ತಿಳಿಸಿದೆ.</p>.<p>ಟಾಟಾ ಸನ್ಸ್ನ ಸ್ಥಾನಮಾನವನ್ನು ಸಾರ್ವಜನಿಕ ಕಂಪನಿಯಿಂದ ಖಾಸಗಿ ಕಂಪನಿ ಎಂದು ಕಂಪನಿ ರಿಜಿಸ್ಟ್ರಾರ್ ಬದಲಿಸಿರುವುದು ಕಾನೂನುಬಾಹಿರವಾಗಿದೆ. ಈ ನಿರ್ಧಾರ ಕೈಬಿಡಬೇಕು ಎಂದು ನ್ಯಾಯಮಂಡಳಿ ಆದೇಶಿಸಿತ್ತು.</p>.<p>ನ್ಯಾಯಮಂಡಳಿಯ ಆದೇಶದಲ್ಲಿ ಉಲ್ಲೇಖಿಸಿರುವ, ‘ಆರ್ಒಸಿ ನೆರವಿನಿಂದ ಟಾಟಾ ಸನ್ಸ್ನ ಸ್ಥಾನಮಾನ ಬದಲಿಸಲಾಗಿದೆ’ ಮತ್ತು ‘ಕಾನೂನುಬಾಹಿರ’ ಪದಗಳನ್ನು ಕೈಬಿಡಬೇಕು ಎಂದು ಕಂಪನಿ ರಿಜಿಸ್ಟ್ರಾರ್ ಪರವಾಗಿ ಮನವಿ ಮಾಡಿಕೊಳ್ಳಲಾಗಿತ್ತು. ಕಂಪನಿ ಕಾಯ್ದೆಗೆ ಅನುಗುಣವಾಗಿಯೇ ಈ ನಿರ್ಧಾರಕ್ಕೆ ಬರಲಾಗಿದೆ ಎಂದೂ ಪ್ರತಿಪಾದಿಸಲಾಗಿತ್ತು. ‘ಆರ್ಒಸಿ’ಯು ಕಂಪನಿ ವ್ಯವಹಾರ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong>ಟಾಟಾ ಸನ್ಸ್ ಮತ್ತು ಸೈರಸ್ ಮಿಸ್ತ್ರಿ ಪ್ರಕರಣ ಸಂಬಂಧ ನೀಡಿದ ಆದೇಶದಲ್ಲಿ ಮಾರ್ಪಾಟು ಮಾಡಬೇಕೆಂಬ ಕಂಪನಿ ರಿಜಿಸ್ಟ್ರಾರ್ (ಆರ್ಒಸಿ) ಕೋರಿಕೆಯನ್ನು ರಾಷ್ಟ್ರೀಯ ಕಂಪನಿ ಕಾಯ್ದೆ ಮೇಲ್ಮನವಿ ನ್ಯಾಯಮಂಡಳಿಯು ತಿರಸ್ಕರಿಸಿದೆ.</p>.<p>ಡಿಸೆಂಬರ್ 18ರಂದು ನೀಡಿದ್ದ ಆದೇಶವನ್ನು ಬದಲಿಸುವ ಸಂಬಂಧ ಯಾವುದೇ ಸಮರ್ಥನೀಯ ಕಾರಣಗಳು ಇಲ್ಲ ಎಂದು ಇಬ್ಬರು ಸದಸ್ಯರ ಪೀಠವು ಸೋಮವಾರ ತಿಳಿಸಿದೆ.</p>.<p>ಟಾಟಾ ಸನ್ಸ್ನ ಸ್ಥಾನಮಾನವನ್ನು ಸಾರ್ವಜನಿಕ ಕಂಪನಿಯಿಂದ ಖಾಸಗಿ ಕಂಪನಿ ಎಂದು ಕಂಪನಿ ರಿಜಿಸ್ಟ್ರಾರ್ ಬದಲಿಸಿರುವುದು ಕಾನೂನುಬಾಹಿರವಾಗಿದೆ. ಈ ನಿರ್ಧಾರ ಕೈಬಿಡಬೇಕು ಎಂದು ನ್ಯಾಯಮಂಡಳಿ ಆದೇಶಿಸಿತ್ತು.</p>.<p>ನ್ಯಾಯಮಂಡಳಿಯ ಆದೇಶದಲ್ಲಿ ಉಲ್ಲೇಖಿಸಿರುವ, ‘ಆರ್ಒಸಿ ನೆರವಿನಿಂದ ಟಾಟಾ ಸನ್ಸ್ನ ಸ್ಥಾನಮಾನ ಬದಲಿಸಲಾಗಿದೆ’ ಮತ್ತು ‘ಕಾನೂನುಬಾಹಿರ’ ಪದಗಳನ್ನು ಕೈಬಿಡಬೇಕು ಎಂದು ಕಂಪನಿ ರಿಜಿಸ್ಟ್ರಾರ್ ಪರವಾಗಿ ಮನವಿ ಮಾಡಿಕೊಳ್ಳಲಾಗಿತ್ತು. ಕಂಪನಿ ಕಾಯ್ದೆಗೆ ಅನುಗುಣವಾಗಿಯೇ ಈ ನಿರ್ಧಾರಕ್ಕೆ ಬರಲಾಗಿದೆ ಎಂದೂ ಪ್ರತಿಪಾದಿಸಲಾಗಿತ್ತು. ‘ಆರ್ಒಸಿ’ಯು ಕಂಪನಿ ವ್ಯವಹಾರ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>