ಇಂಡಸ್ಇಂಡ್ ಬ್ಯಾಂಕ್ ಮನವಿಯಂತೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್ಸಿಎಲ್ಟಿ) ಮುಂಬೈ ಪೀಠವು ದಿವಾಳಿ ಪ್ರಕ್ರಿಯೆ ಜಾರಿಗೊಳಿಸಲು ಒಪ್ಪಿಗೆ ನೀಡಿತ್ತು. ಅಲ್ಲದೆ, ದಿವಾಳಿ ಪ್ರಕ್ರಿಯೆ ಪೂರ್ಣಗೊಳಿಸಲು ಸಂಜೀವ್ ಕುಮಾರ್ ಜಲನ್ ಅವರನ್ನು ನೇಮಕ ಮಾಡಿತ್ತು. ಇದಕ್ಕೆ ತಡೆ ನೀಡುವಂತೆ ಕೋರಿ ಜೀ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪುನಿತ್ ಗೋಯೆಂಕಾ ಅವರು ಎನ್ಸಿಎಲ್ಎಟಿಗೆ ಮನವಿ ಮಾಡಿದ್ದರು.