ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಎಂಡಿಸಿ: ಪಾಲ್‌ವಂಚಾ ಘಟಕ ಕಾರ್ಯಾರಂಭ

Last Updated 23 ಜನವರಿ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದ (ಎನ್‌ಎಂಡಿಸಿ) ಉತ್ತಮ ಗುಣಮಟ್ಟದ ಮೃದು ಕಬ್ಬಿಣ ತಯಾರಿಕಾ ಘಟಕದ (ಎಸ್‌ಐಯು) ಕಾರ್ಯಾರಂಭಕ್ಕೆ ಚಾಲನೆ ನೀಡಲಾಗಿದೆ.

ಆಡಳಿತಾತ್ಮಕ ಕಾರಣಕ್ಕೆ ಘಟಕವನ್ನು ಮುಚ್ಚಲಾಗಿತ್ತು. ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ ಟಿ. ಎಸ್‌. ಚೆರಿಯನ್‌ ಅವರು ದೀಪ ಬೆಳಗಿಸಿ ಕಾರ್ಯಾರಂಭಕ್ಕೆ ಚಾಲನೆ ನೀಡಿದರು.

ಐಟಿಸಿಗೆ ಲಾಭ

ಬೆಂಗಳೂರು: ವೈವಿಧ್ಯಮಯ ವಹಿವಾಟಿನಲ್ಲಿ ತೊಡಗಿರುವ ಐಟಿಸಿ ಸಮೂಹ 3ನೆ ತ್ರೈಮಾಸಿಕದಲ್ಲಿ ₹ 3,209 ಕೋಟಿ ನಿವ್ವಳ ಲಾಭ ಗಳಿಸಿದೆ.

ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳ (ಎಫ್‌ಎಂಸಿಜಿ) ಉತ್ತಮ ಸಾಧನೆ ಫಲವಾಗಿ ಲಾಭವು ಶೇ 4ರಷ್ಟು ಹೆಚ್ಚಾಗಿದೆ. ಒಟ್ಟಾರೆ ವರಮಾನವು ಶೇ 15ರಷ್ಟು ಹೆಚ್ಚಳಗೊಂಡು ₹ 11,340 ಕೋಟಿಗೆ ತಲುಪಿದೆ.

ಟಿವಿಎಸ್‌ ಮೋಟರ್ಸ್‌ ಲಾಭದಲ್ಲಿ ಹೆಚ್ಚಳ

ಬೆಂಗಳೂರು: ಟಿವಿಎಸ್‌ ಮೋಟರ್ಸ್‌, ಮೂರನೇ ತ್ರೈಮಾಸಿಕದಲ್ಲಿ ₹ 178 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ.

ವರ್ಷದ ಹಿಂದಿನ ₹ 154 ಕೋಟಿಗೆ ಹೋಲಿಸಿದರೆ ಈ ಬಾರಿಯ ಲಾಭ ಶೇ 15.57ರಷ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿನ ವರಮಾನವು
ಶೇ 26ರಷ್ಟು ಹೆಚ್ಚಳವಾಗಿ ₹ 4,664 ಕೋಟಿಗೆ ತಲುಪಿದೆ. ರಫ್ತು ಸೇರಿದಂತೆ ಸಂಸ್ಥೆಯ ದ್ಚಿಚಕ್ರ ವಾಹನಗಳ ಮಾರಾಟವು ಶೇ 19ರಷ್ಟು ಏರಿಕೆಯಾಗಿ 9.50 ಲಕ್ಷಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT