<p class="title"><strong>ನವದೆಹಲಿ (ಪಿಟಿಐ):</strong> ಹನ್ನೆರಡು ವರ್ಷಗಳ ಅವಧಿಯಲ್ಲಿ ಎನ್ಪಿಎಸ್ನ (ರಾಷ್ಟ್ರೀಯ ಪಿಂಚಣಿ ಯೋಜನೆ) ಈಕ್ವಿಟಿ ಯೋಜನೆಗಳಲ್ಲಿ ಮಾಡಿರುವ ಹೂಡಿಕೆಗಳು ವಾರ್ಷಿಕ ಶೇಕಡ 12ರಷ್ಟಕ್ಕಿಂತ ಹೆಚ್ಚು ಲಾಭಾಂಶ ತಂದುಕೊಟ್ಟಿವೆ ಎಂದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಪಿಎಫ್ಆರ್ಡಿಎ) ಅಧ್ಯಕ್ಷ ಸುಪ್ರತಿಮ್ ವಂದ್ಯೋಪಾಧ್ಯಾಯ ಹೇಳಿದ್ದಾರೆ.</p>.<p class="bodytext">ಸರ್ಕಾರಿ ಸಾಲಪತ್ರಗಳಲ್ಲಿನ ಹೂಡಿಕೆ ಯೋಜನೆಯು ಸರಿಸುಮಾರು ಶೇ 9.9ರಷ್ಟು, ಕಾರ್ಪೊರೇಟ್ ಬಾಂಡ್ಗಳಲ್ಲಿನ ಹೂಡಿಕೆ ಯೋಜನೆಯು ಶೇ 9.59ರಷ್ಟು ಲಾಭಾಂಶ ತಂದುಕೊಟ್ಟಿದೆ ಎಂದು ಅವರು ತಿಳಿಸಿದ್ದಾರೆ. ಸಿಐಐ ಆಯೋಜಿಸಿದ್ದ ವಿಮೆ ಮತ್ತು ಪಿಂಚಣಿ ಶೃಂಗದಲ್ಲಿ ಅವರು ಈ ವಿಚಾರ ತಿಳಿಸಿದ್ದಾರೆ.</p>.<p class="bodytext">ಭಾರತದಲ್ಲಿ ಪಿಂಚಣಿ ಲಭ್ಯತೆಯನ್ನು ಹೆಚ್ಚಿಸಲು ಇನ್ನಷ್ಟು ಉಪಕ್ರಮಗಳ ಅಗತ್ಯ ಇದೆ. ವಿಮಾ ನಿಯಂತ್ರಣ ಮತ್ತು ಅಭಿವೃದ್ದಿ ಪ್ರಾಧಿಕಾರ (ಐಅರ್ಡಿಎಐ), ಪಿಎಫ್ಆರ್ಡಿಎ ಮತ್ತು ಸಿಐಐ ಜೊತೆಯಾಗಿ ಪಿಂಚಣಿ ವಿಚಾರವಾಗಿ ಜಾಗೃತಿ ಮೂಡಿಸಬಹುದು ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ (ಪಿಟಿಐ):</strong> ಹನ್ನೆರಡು ವರ್ಷಗಳ ಅವಧಿಯಲ್ಲಿ ಎನ್ಪಿಎಸ್ನ (ರಾಷ್ಟ್ರೀಯ ಪಿಂಚಣಿ ಯೋಜನೆ) ಈಕ್ವಿಟಿ ಯೋಜನೆಗಳಲ್ಲಿ ಮಾಡಿರುವ ಹೂಡಿಕೆಗಳು ವಾರ್ಷಿಕ ಶೇಕಡ 12ರಷ್ಟಕ್ಕಿಂತ ಹೆಚ್ಚು ಲಾಭಾಂಶ ತಂದುಕೊಟ್ಟಿವೆ ಎಂದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಪಿಎಫ್ಆರ್ಡಿಎ) ಅಧ್ಯಕ್ಷ ಸುಪ್ರತಿಮ್ ವಂದ್ಯೋಪಾಧ್ಯಾಯ ಹೇಳಿದ್ದಾರೆ.</p>.<p class="bodytext">ಸರ್ಕಾರಿ ಸಾಲಪತ್ರಗಳಲ್ಲಿನ ಹೂಡಿಕೆ ಯೋಜನೆಯು ಸರಿಸುಮಾರು ಶೇ 9.9ರಷ್ಟು, ಕಾರ್ಪೊರೇಟ್ ಬಾಂಡ್ಗಳಲ್ಲಿನ ಹೂಡಿಕೆ ಯೋಜನೆಯು ಶೇ 9.59ರಷ್ಟು ಲಾಭಾಂಶ ತಂದುಕೊಟ್ಟಿದೆ ಎಂದು ಅವರು ತಿಳಿಸಿದ್ದಾರೆ. ಸಿಐಐ ಆಯೋಜಿಸಿದ್ದ ವಿಮೆ ಮತ್ತು ಪಿಂಚಣಿ ಶೃಂಗದಲ್ಲಿ ಅವರು ಈ ವಿಚಾರ ತಿಳಿಸಿದ್ದಾರೆ.</p>.<p class="bodytext">ಭಾರತದಲ್ಲಿ ಪಿಂಚಣಿ ಲಭ್ಯತೆಯನ್ನು ಹೆಚ್ಚಿಸಲು ಇನ್ನಷ್ಟು ಉಪಕ್ರಮಗಳ ಅಗತ್ಯ ಇದೆ. ವಿಮಾ ನಿಯಂತ್ರಣ ಮತ್ತು ಅಭಿವೃದ್ದಿ ಪ್ರಾಧಿಕಾರ (ಐಅರ್ಡಿಎಐ), ಪಿಎಫ್ಆರ್ಡಿಎ ಮತ್ತು ಸಿಐಐ ಜೊತೆಯಾಗಿ ಪಿಂಚಣಿ ವಿಚಾರವಾಗಿ ಜಾಗೃತಿ ಮೂಡಿಸಬಹುದು ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>