ಕೇಂದ್ರ ಸರ್ಕಾರವು ‘ಕೋವಿಡ್–19’, ಪಿಡುಗು ಎಂದು ಘೋಷಿಸಿರುವುದರಿಂದ ಕೊರೊನಾ ವೈರಾಣು ಸೋಂಕು ತಗುಲುವುದನ್ನು ಜೀವಕ್ಕೆ ಅಪಾಯ ತಂದೊಡ್ಡುವ ಗಂಭೀರ ಸ್ವರೂಪದ ಕಾಯಿಲೆ ಎಂದು ಪರಿಗಣಿಸಲಾಗಿದೆ. 'ಎನ್ಪಿಎಸ್" ಚಂದಾದಾರರ ಸಂಗಾತಿ, ಮಕ್ಕಳು, ಅವಲಂಬಿತ ಪಾಲಕರ ಚಿಕಿತ್ಸೆಗಾಗಿ ಹಣ ಹಿಂದೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಪಿಎಫ್ಆರ್ಡಿಎ) ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.