ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ವಾಹನಕ್ಕೆ ಗುದ್ದಿದ ಪ್ರಕರಣ: ವಿಜಯ್ ಶೇಖರ್ ಶರ್ಮ ಬಂಧನ, ಬಿಡುಗಡೆ

Last Updated 13 ಮಾರ್ಚ್ 2022, 15:38 IST
ಅಕ್ಷರ ಗಾತ್ರ

ನವದೆಹಲಿ: ಪೇಟಿಎಂ ಸಂಸ್ಥಾಪಕ ಹಾಗೂ ಅದರ ಸಿಇಒ ವಿಜಯ್ ಶೇಖರ್ ಶರ್ಮ ಅವರನ್ನು ಹಿಂದಿನ ತಿಂಗಳು ರಸ್ತೆ ಅಪಘಾತವೊಂದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು ಎಂದು ದೆಹಲಿ ಪೊಲೀಸರು ಭಾನುವಾರ ತಿಳಿಸಿದ್ದಾರೆ. ಶರ್ಮ ಅವರು ತಮ್ಮ ಕಾರನ್ನು ದಕ್ಷಿಣ ದೆಹಲಿ ವಿಭಾಗದ ಡಿಸಿಪಿಯವರ ಅಧಿಕೃತ ವಾಹನಕ್ಕೆ ಗುದ್ದಿದ ಆರೋಪದ ಅಡಿ ಬಂಧಿಸಲಾಗಿತ್ತು.

ಈ ಘಟನೆಯು ಫೆಬ್ರುವರಿ 22ರಂದು ನಡೆದಿದೆ. ಅದೇ ದಿನ ಶರ್ಮ ಅವರನ್ನು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಬಂಧನದ ವಿಚಾರವಾಗಿ ಬಂದಿರುವ ವರದಿಗಳು ಅತಿರಂಜಿತವಾಗಿವೆ ಎಂದು ಪೇಟಿಎಂ ವಕ್ತಾರರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT