ನವದೆಹಲಿ: ಪೇಟಿಎಂ ಸಂಸ್ಥಾಪಕ ಹಾಗೂ ಅದರ ಸಿಇಒ ವಿಜಯ್ ಶೇಖರ್ ಶರ್ಮ ಅವರನ್ನು ಹಿಂದಿನ ತಿಂಗಳು ರಸ್ತೆ ಅಪಘಾತವೊಂದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು ಎಂದು ದೆಹಲಿ ಪೊಲೀಸರು ಭಾನುವಾರ ತಿಳಿಸಿದ್ದಾರೆ. ಶರ್ಮ ಅವರು ತಮ್ಮ ಕಾರನ್ನು ದಕ್ಷಿಣ ದೆಹಲಿ ವಿಭಾಗದ ಡಿಸಿಪಿಯವರ ಅಧಿಕೃತ ವಾಹನಕ್ಕೆ ಗುದ್ದಿದ ಆರೋಪದ ಅಡಿ ಬಂಧಿಸಲಾಗಿತ್ತು.