‘ಇಪಿಎಫ್ಒನ ಕೇಂದ್ರೀಯ ಧರ್ಮದರ್ಶಿ ಮಂಡಳಿಯು ಈ ಬಡ್ಡಿದರ ನೀಡಲು ಸಮ್ಮತಿಸಿದೆ. ಇದಕ್ಕೆ ಹಣಕಾಸು ಸಚಿವಾಲಯ ತನ್ನ ಒಪ್ಪಿಗೆ ನೀಡಬೇಕಿದೆ. ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಅವರು ಹಲವು ಕಾರ್ಯಗಳಲ್ಲಿ ತೊಡಗಿಕೊಂಡಿದ್ದು, ಬಡ್ಡಿದರ ನಿಗದಿಪಡಿಸುವ ಕಡತ ಅವರ ಬಳಿ ಇದೆ. ಪ್ರಸ್ತಾವಕ್ಕೆ ಅವರ ವಿರೋಧವೇನೂ ಇಲ್ಲ. ಒಮ್ಮೆ ಅನುಮತಿ ದೊರೆತರೆ, ಕೆಲವೇ ದಿನಗಳಲ್ಲಿ ಚಂದಾದಾರರಿಗೆ ವರ್ಗಾವಣೆ ಆಗಲಿದೆ’ ಎಂದಿದ್ದಾರೆ.