<p><strong>ನವದೆಹಲಿ</strong>: ದೇಶದ ವೃತ್ತಿಪರರು ತಮ್ಮ ವರಮಾನ ಮತ್ತು ಉಳಿತಾಯದ ಬಗ್ಗೆ ಹೊಂದಿರುವ ಸಕಾರಾತ್ಮಕ ಭಾವನೆಯಲ್ಲಿ ಸುಧಾರಣೆ ಕಂಡುಬರುತ್ತಿದೆ ಎಂದು ಲಿಂಕ್ಡ್ಇನ್ ಹೇಳಿದೆ.</p>.<p>ಮೇ 4 ರಿಂದ 17ರವರೆಗೆ ನಡೆಸಿದ್ದ ಸಮೀಕ್ಷೆಗೆ ಹೋಲಿಸಿದರೆ, ವರಮಾನ ಮತ್ತು ಉಳಿತಾಯದ ಬಗ್ಗೆವೃತ್ತಿಪರರು ಹೊಂದಿರುವ ಸಕಾರಾತ್ಮಕ ಭಾವನೆಯು ತುಸು ಹೆಚ್ಚಾಗಿದೆ ಎನ್ನುವುದುಜೂನ್ 1 ರಿಂದ 14ರವರೆಗೆ ನಡೆಸಿದ ಸಮೀಕ್ಷೆಯ ಒಟ್ಟಾರೆ ಸಾರಾಂಶವಾಗಿದೆ ಎಂದು ತಿಳಿಸಿದೆ.</p>.<p>ಮುಂದಿನ ಆರು ತಿಂಗಳಿನಲ್ಲಿ ತಮ್ಮ ವರಮಾನ, ವೈಯಕ್ತಿಕ ವೆಚ್ಚ ಮತ್ತು ಉಳಿತಾಯವು ಹೆಚ್ಚಾಗಲಿದೆ ಎನ್ನುವುದು ನಾಲ್ವರು ವೃತ್ತಿಪರರಲ್ಲಿ ಒಬ್ಬರ ಅಭಿಪ್ರಾಯವಾಗಿದೆ.</p>.<p>1,351 ವೃತ್ತಿಪರರ ಅಭಿಪ್ರಾಯ ಸಂಗ್ರಹಿಸಿ ಈ ವರದಿ ಸಿದ್ಧಪಡಿಸಲಾಗಿದೆ. ವರಮಾನ ಮತ್ತು ವೈಯಕ್ತಿಕ ವೆಚ್ಚವು ಹೆಚ್ಚಾಗಲಿದೆ ಎಂದು ನಾಲ್ವರಲ್ಲಿ ಒಬ್ಬರು ಹೇಳಿದ್ದು, ತಮ್ಮ ವೈಯಕ್ತಿಕ ಉಳಿತಾಯ ಮತ್ತು ಪಾವತಿಸಲೇಬೇಕಾದ ವ್ಯಕ್ತಿಗತ ಸಾಲಗಳೂ ಹೆಚ್ಚಾಗಲಿವೆ ಎಂದು ಹೇಳಿದ್ದಾರೆ.</p>.<p>ಸುರಕ್ಷತಾ ಕ್ರಮಗಳ ಬಗ್ಗೆ ನಿರ್ಲಕ್ಷ್ಯ ಭಾವನೆ ತೋರಿಸಿರುವುದರಿಂದಲೇ ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂದು ಶೇ 55ರಷ್ಟು ವೃತ್ತಿಪರರು ಅಭಿಪ್ರಾಯಪಟ್ಟಿದ್ದಾರೆ.</p>.<p>ಕೆಲಸ ಮಾಡುವ ಸ್ಥಳವು ವಿಶಾಲವಾಗಿ ಇಲ್ಲದೇ ಇರುವುದರಿಂದ ಪರಸ್ಪರ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿಯೇ ಕೆಲಸಕ್ಕೆ ಹಿಂದಿರುಗಲು ಕೆಲವರು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಅಭಿಪ್ರಾಯವೂ ಸಮೀಕ್ಷೆಯಿಂದ ತಿಳಿದುಬಂದಿದೆ.</p>.<p><strong>ಸಮೀಕ್ಷೆಯ ವಿವರ</strong></p>.<p>50%: ಕಾರ್ಪೊರೇಟ್ ಸೇವಾ ವೃತ್ತಿಪರರು</p>.<p>46%:ತಯಾರಿಕಾ ವಲಯದ ವೃತ್ತಿಪರರು</p>.<p>41%:ಶಿಕ್ಷಣ ಕ್ಷೇತ್ರದ ವೃತ್ತಿಪರರು</p>.<p>***</p>.<p>38%:ಅವಕಾಶ ಸಿಕ್ಕರೆ ಕೆಲಸ ಮಾಡುವ ಸ್ಥಳಕ್ಕೆ ಹಿಂದಿರುಗಲು ಸಿದ್ಧವಾಗಿರುವವರು</p>.<p>ಮೂವರಲ್ಲಿ ಒಬ್ಬರು</p>.<p>ಸುರಕ್ಷತಾ ಭಾವನೆ ಮೂಡುವವರೆಗೂ ಮನೆಯಲ್ಲಿಯೇ ಕೆಲಸ ಮಾಡುವುದಾಗಿ ಹೇಳಿರುವವರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ದೇಶದ ವೃತ್ತಿಪರರು ತಮ್ಮ ವರಮಾನ ಮತ್ತು ಉಳಿತಾಯದ ಬಗ್ಗೆ ಹೊಂದಿರುವ ಸಕಾರಾತ್ಮಕ ಭಾವನೆಯಲ್ಲಿ ಸುಧಾರಣೆ ಕಂಡುಬರುತ್ತಿದೆ ಎಂದು ಲಿಂಕ್ಡ್ಇನ್ ಹೇಳಿದೆ.</p>.<p>ಮೇ 4 ರಿಂದ 17ರವರೆಗೆ ನಡೆಸಿದ್ದ ಸಮೀಕ್ಷೆಗೆ ಹೋಲಿಸಿದರೆ, ವರಮಾನ ಮತ್ತು ಉಳಿತಾಯದ ಬಗ್ಗೆವೃತ್ತಿಪರರು ಹೊಂದಿರುವ ಸಕಾರಾತ್ಮಕ ಭಾವನೆಯು ತುಸು ಹೆಚ್ಚಾಗಿದೆ ಎನ್ನುವುದುಜೂನ್ 1 ರಿಂದ 14ರವರೆಗೆ ನಡೆಸಿದ ಸಮೀಕ್ಷೆಯ ಒಟ್ಟಾರೆ ಸಾರಾಂಶವಾಗಿದೆ ಎಂದು ತಿಳಿಸಿದೆ.</p>.<p>ಮುಂದಿನ ಆರು ತಿಂಗಳಿನಲ್ಲಿ ತಮ್ಮ ವರಮಾನ, ವೈಯಕ್ತಿಕ ವೆಚ್ಚ ಮತ್ತು ಉಳಿತಾಯವು ಹೆಚ್ಚಾಗಲಿದೆ ಎನ್ನುವುದು ನಾಲ್ವರು ವೃತ್ತಿಪರರಲ್ಲಿ ಒಬ್ಬರ ಅಭಿಪ್ರಾಯವಾಗಿದೆ.</p>.<p>1,351 ವೃತ್ತಿಪರರ ಅಭಿಪ್ರಾಯ ಸಂಗ್ರಹಿಸಿ ಈ ವರದಿ ಸಿದ್ಧಪಡಿಸಲಾಗಿದೆ. ವರಮಾನ ಮತ್ತು ವೈಯಕ್ತಿಕ ವೆಚ್ಚವು ಹೆಚ್ಚಾಗಲಿದೆ ಎಂದು ನಾಲ್ವರಲ್ಲಿ ಒಬ್ಬರು ಹೇಳಿದ್ದು, ತಮ್ಮ ವೈಯಕ್ತಿಕ ಉಳಿತಾಯ ಮತ್ತು ಪಾವತಿಸಲೇಬೇಕಾದ ವ್ಯಕ್ತಿಗತ ಸಾಲಗಳೂ ಹೆಚ್ಚಾಗಲಿವೆ ಎಂದು ಹೇಳಿದ್ದಾರೆ.</p>.<p>ಸುರಕ್ಷತಾ ಕ್ರಮಗಳ ಬಗ್ಗೆ ನಿರ್ಲಕ್ಷ್ಯ ಭಾವನೆ ತೋರಿಸಿರುವುದರಿಂದಲೇ ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂದು ಶೇ 55ರಷ್ಟು ವೃತ್ತಿಪರರು ಅಭಿಪ್ರಾಯಪಟ್ಟಿದ್ದಾರೆ.</p>.<p>ಕೆಲಸ ಮಾಡುವ ಸ್ಥಳವು ವಿಶಾಲವಾಗಿ ಇಲ್ಲದೇ ಇರುವುದರಿಂದ ಪರಸ್ಪರ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿಯೇ ಕೆಲಸಕ್ಕೆ ಹಿಂದಿರುಗಲು ಕೆಲವರು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಅಭಿಪ್ರಾಯವೂ ಸಮೀಕ್ಷೆಯಿಂದ ತಿಳಿದುಬಂದಿದೆ.</p>.<p><strong>ಸಮೀಕ್ಷೆಯ ವಿವರ</strong></p>.<p>50%: ಕಾರ್ಪೊರೇಟ್ ಸೇವಾ ವೃತ್ತಿಪರರು</p>.<p>46%:ತಯಾರಿಕಾ ವಲಯದ ವೃತ್ತಿಪರರು</p>.<p>41%:ಶಿಕ್ಷಣ ಕ್ಷೇತ್ರದ ವೃತ್ತಿಪರರು</p>.<p>***</p>.<p>38%:ಅವಕಾಶ ಸಿಕ್ಕರೆ ಕೆಲಸ ಮಾಡುವ ಸ್ಥಳಕ್ಕೆ ಹಿಂದಿರುಗಲು ಸಿದ್ಧವಾಗಿರುವವರು</p>.<p>ಮೂವರಲ್ಲಿ ಒಬ್ಬರು</p>.<p>ಸುರಕ್ಷತಾ ಭಾವನೆ ಮೂಡುವವರೆಗೂ ಮನೆಯಲ್ಲಿಯೇ ಕೆಲಸ ಮಾಡುವುದಾಗಿ ಹೇಳಿರುವವರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>