ಆರ್ಬಿಐ ಪ್ರತಿವರ್ಷ ತನ್ನ ಲಾಭದಲ್ಲಿ ಒಂದು ಪಾಲನ್ನು ಕೇಂದ್ರಕ್ಕೆ ವರ್ಗಾಯಿಸುತ್ತದೆ. ನೋಟು ರದ್ದತಿ ಜಾರಿಗೆ ಬಂದ ವರ್ಷದಲ್ಲಿ, ಹೊಸ ನೋಟುಗಳ ಮುದ್ರಣದ ವೆಚ್ಚದ ಕಾರಣದಿಂದಾಗಿ ಕೇಂದ್ರಕ್ಕೆ ವರ್ಗಾವಣೆ ಮಾಡುವ ಹಣದ ಮೊತ್ತವು ಕಡಿಮೆಯಾಯಿತು. ಇದು ಸರ್ಕಾರದಿಂದ ಬರುವ ಬೇಡಿಕೆ ‘ತೀವ್ರಗೊಳ್ಳಲು’ ಕಾರಣವಾಯಿತು ಎಂದು ಅವರು ಹೇಳಿದ್ದಾರೆ.