ನವದೆಹಲಿ: ಕೋವಿಡ್–19 ಸಾಂಕ್ರಾಮಿಕದಿಂದಾಗಿ ದೇಶದ ಚಿಲ್ಲರೆ ವ್ಯಾಪಾರವು 100 ದಿನಗಳಲ್ಲಿ ₹ 15.5 ಲಕ್ಷ ಕೋಟಿ ವಹಿವಾಟು ನಷ್ಟ ಅನುಭವಿಸಿವೆ ಎಂದು ಅಖಿಲ ಭಾರತ ವರ್ತಕರ ಒಕ್ಕೂಟ (ಸಿಎಐಟಿ) ಹೇಳಿದೆ.
ಕೆಲಸಗಾರರ ಕೊರತೆ, ಬೇಡಿಕೆ ಕಡಿಮೆಯಾಗಿರುವುದು, ನಗದು ಬಿಕ್ಕಟ್ಟಿನ ಜತೆಗೆ ಕೇಂದ್ರ ಅಥವಾ ರಾಜ್ಯ ಸರ್ಕಾರಗಳಿಂದ ಯಾವುದೇ ಬೆಂಬಲ ಇಲ್ಲದಿರುವ ಕಾರಣ ಈ ನಷ್ಟ ಉಂಟಾಗಿದೆ ಎಂದು ಅದು ತಿಳಿಸಿದೆ.
‘ದೇಶಿ ವ್ಯಾಪಾರವು ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಸಾಗುತ್ತಿದ್ದು, ತಕ್ಷಣವೇ ನೆರವಾಗದಿದ್ದರೆ ಶೇಕಡ 20ರಷ್ಟು ಮಳಿಗೆಗಳು ಬಾಗಿಲು ಮುಚ್ಚಲಿವೆ’ ಎಂದು ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಹೇಳಿದ್ದಾರೆ.