‘ಜಿಎಸ್ಟಿ ದರ ಏರಿಕೆಯಾದರೆ ಅದನ್ನು ಗ್ರಾಹಕರಿಗೆ ವರ್ಗಾಯಿಸುವ ಅನಿವಾರ್ಯತೆ ಇದೆ. ಬಿಪಿಎಲ್ ಕುಟುಂಬಗಳಿಗೆ ಅನ್ನ, ಬಟ್ಟೆ, ವಸತಿಯನ್ನು ಕೈಗೆಟಕುವ ದರದಲ್ಲಿ ಸರ್ಕಾರ ಕಲ್ಪಿಸಬೇಕಾಗುತ್ತದೆ. ಆಹಾರದ ನಂತರದ ಸ್ಥಾನದಲ್ಲಿ ಬಟ್ಟೆ ಇದೆ. ಅತೀ ಬಡವರೂ ತಮ್ಮ ಮೈಮುಚ್ಚಿಕೊಳ್ಳಲು ಬಟ್ಟೆ ಖರೀದಿ ಮಾಡಲೇಬೇಕು. ದರ ಏರಿಕೆಯಾದರೆ ಬಡವರು ಬಟ್ಟೆ ಖರೀದಿ ಮಾಡುವುದೇ ಕಷ್ಟವಾಗಲಿದೆ’ ಎಂದರು.